ರಾಜಶೇಖರ ಶ್ರೀ ಮೌನಾನುಷ್ಠಾನ ಆರಂಭ
Team Udayavani, Aug 12, 2022, 5:03 PM IST
ವಾಡಿ: ಭಕ್ತರ ಒಳಿತಿಗಾಗಿ ಹಳಕರ್ಟಿಯ ರಾಜಶೇಖರ ಶ್ರೀಗಳು ಒಂಭತ್ತು ದಿನ ಮೌನಾನುಷ್ಟಾನ ಮತ್ತು ಒಂಭತ್ತು ದಿನ ಜೀವ ನಿರ್ವಿಕಲ್ಪ ಸಮಾಧಿ ಅನುಷ್ಠಾನಕ್ಕೆ ಮುಂದಾಗಿದ್ದಾರೆ ಎಂದು ಚಂದನಕೇರಾ ಬೃಂಗಿ ಪ್ರಾಚೇಶ್ವರ ಕಟ್ಟಿಮನಿ ಸಂಸ್ಥಾನದ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯ ನುಡಿದರು.
ಗುರುವಾರ ಹಳಕರ್ಟಿ ಗ್ರಾಮದ ಸಿದ್ಧೇಶ್ವರ ಧ್ಯಾನಧಾಮದಲ್ಲಿ ಮೌನಾನುಷ್ಠಾನ ಆರಂಭಿಸಿದ ಶ್ರೀ ರಾಜಶೇಖರ ಸ್ವಾಮೀಜಿ ಅವರ ವಿಶೇಷ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಆಹಾರ, ಹಣ್ಣು, ಹಾಲು ಸೇರಿದಂತೆ ಯಾವುದೇ ಪದಾರ್ಥವಿಲ್ಲದೇ ಕೇವಲ ಜಲ ಪಾನ ಸೇವನೆ ಮೂಲಕ 18 ದಿನಗಳ ಕಠಿಣ ತಪಸ್ಸು ಕೈಗೊಂಡು ದೇವಿ ಪಾರಾಯಣ ಅಧ್ಯಯನಕ್ಕೆ ಪೂಜ್ಯರು ಮುಂದಾಗಿರುವುದು ಭಕ್ತರ ಹಿತದೃಷ್ಟಿಯಿಂದ ಎಂದರು.
ಸುಗೂರ ಮಠದ ಡಾ| ಚನ್ನ ರುದ್ರಮುನಿ ಶಿವಾಚಾರ್ಯರು, ಬಾಲಯೋಗಿ ಪೂಜ್ಯ ಅಭಿನವ ಕೇದಾರಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ರಾಘವೇಂದ್ರ ಅಲ್ಲಿಪುರ, ರವಿ ನಾಯಕ, ಸಿದ್ಧು ಮುಗುಟಿ, ವಿರೇಶ ಕಪ್ಪರ, ದಿನೇಶ ರಾಠೊಡ, ಬಸವರಾಜ ಕುಂಬಾರ ಬಳವಡಗಿ, ಮಹಾದೇವ ಪಗಡೀಕರ, ಪರಶುರಾಮ ರಾಠೊಡ, ಪ್ರೇಮಕುಮಾರ ರಾಠೊಡ, ವಿಜಯಕುಮಾರ ರಾಠೊಡ ಪಾಲ್ಗೊಂಡಿದ್ದರು. ಆ.28ರ ವರೆಗೆ ಮಠದಲ್ಲಿ ಪ್ರತಿದಿನವೂ ಅನ್ನ ದಾಸೋಹ, ರಾತ್ರಿ ಭಜನೆ ಏರ್ಪಡಿಸಲಾಗಿದೆ ಎಂದು ಭಕ್ತರು ಘೋಷಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ