ಗ್ರಾಮೀಣ ಖೇಲೋ ಇಂಡಿಯಾ ಬೇಕು


Team Udayavani, Aug 14, 2022, 5:55 AM IST

ಗ್ರಾಮೀಣ ಖೇಲೋ ಇಂಡಿಯಾ ಬೇಕು

90ರ ದಶಕದಲ್ಲಿ ಭಾರತಕ್ಕೆ ಯಾವುದೇ ವಿಶ್ವಮಟ್ಟದ ಕ್ರೀಡಾ ಕೂಟಗಳಲ್ಲಿ ಹೇಳಿಕೊಳ್ಳುವಷ್ಟು ಪದಕಗಳು ಬರುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. 2012ರ ಲಂಡನ್‌ ಒಲಿಂಪಿಕ್ಸ್‌ ಅನಂತರ ಪರಿಸ್ಥಿತಿಯಲ್ಲಿ ತೀರಾ ಬದಲಾವಣೆಯಾಗಿದೆ. ಭಾರತ ವಿಶ್ವಮಟ್ಟದ ಕೂಟಗಳಲ್ಲಿ ಪದಕಗಳನ್ನು ಗೆಲ್ಲುವುದು ಜಾಸ್ತಿಯಾಗಿದೆ, ಗುಣಮಟ್ಟ ಸುಧಾರಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳ ಲಾಗುತ್ತಿದೆ. ಹಾಗಾಗಿ ಭಾರತೀಯ ಕ್ರೀಡೆಗೆ ಭವ್ಯ ಭವಿಷ್ಯವನ್ನು ಖಂಡಿತ ನಿರೀಕ್ಷಿಸಬಹುದು.

ಪ್ರಸ್ತುತ ಕಾಲೇಜು ಹಂತದ ಕ್ರೀಡಾಪಟುಗಳ ಪ್ರತಿಭೆಯನ್ನು ಹೊರತರಲು ಕೇಂದ್ರ ಸರಕಾರ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟಗಳಿಗೆ ಚಾಲನೆ ನೀಡಿದೆ. ಇದು ಒಳ್ಳೆಯ ಕ್ರಮ. ಆದರೆ ಇಲ್ಲಿ ಗಮನಿಸ ಬೇಕಾಗಿರುವ ವಿಷಯಗಳಿವೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ಮುಗಿದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪದಕ ಗೆದ್ದ ಶೇ. 50ಕ್ಕೂ ಅಧಿಕ ಕ್ರೀಡಾಪಟುಗಳು ಗ್ರಾಮೀಣ ಭಾಗದವರು. ಹಾಗಾಗಿ ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಲು, ಬೆಳೆಸಲು ಅವರಿಗೆಂದೇ ಖೇಲೋ ಇಂಡಿಯಾದಂತಹ ಕ್ರೀಡಾಕೂಟ ಆರಂಭಿಸಬೇಕು. ಆಗ ಪ್ರತಿಭೆಗಳ ಗಣಿಯಾಗಿರುವ ಗ್ರಾಮೀಣ ಪ್ರದೇಶದಿಂದ ಅದ್ಭುತಗಳನ್ನು ಹೊರತೆಗೆಯಲು ಸಾಧ್ಯ.

ಶಾಲಾಹಂತದಲ್ಲೇ ತರಬೇತಿ ಅಗತ್ಯ: ವಿದೇಶಗಳಲ್ಲಿ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಮಕ್ಕಳನ್ನು ಶಾಲಾ ಹಂತದಲ್ಲೇ ಗುರುತಿಸಲಾಗುತ್ತದೆ. ಅವರಿಗೆ ಮಾಮೂಲಿ ಶಿಕ್ಷಣವನ್ನು ಅಗತ್ಯವಿರುವಷ್ಟು ಮಾತ್ರ ನೀಡಿ, ಉಳಿದಂತೆ ಪೂರ್ಣವಾಗಿ ಕ್ರೀಡೆಯಲ್ಲಿ ತೊಡಗಿಸ ಲಾಗುತ್ತದೆ. ಆದ್ದರಿಂದಲೇ ಅಲ್ಲಿ ಪದಕ ಗಳ ಸಂಖ್ಯೆ ಜಾಸ್ತಿಯಿರುತ್ತದೆ. ಅಂತಹ ಪ್ರಯೋಗವನ್ನು ಭಾರತದಲ್ಲೂ ಮಾಡ ಬೇಕು. ಅರ್ಥಾತ್‌ ಖೇಲೋ ಇಂಡಿಯಾ ವನ್ನು ಶಾಲಾಹಂತಕ್ಕೂ ತರಬೇಕು. ಮಕ್ಕಳನ್ನು ಈ ಹಂತದಲ್ಲೇ ಪಳಗಿಸಬೇಕು.

ಕೋಚ್‌ಗಳಿಗೂ ತರಬೇತಿ ಬೇಕು: ಎಲ್ಲಕ್ಕಿಂತ ಅತೀ ಮುಖ್ಯವಾಗಿರುವುದು ಕೋಚ್‌ಗಳಿಗೂ ಆಗಾಗ ಅತ್ಯಾಧುನಿಕ ತರಬೇತಿ ನೀಡುವುದು. ಕಾಲಕಾಲಕ್ಕೆ ತಂತ್ರ ಜ್ಞಾನ ಬದಲಾಗುತ್ತಿರುತ್ತದೆ, ತರಬೇತಿ ವಿಧಾನವೂ ಬದಲಾಗುತ್ತಿರುತ್ತದೆ. ಅದನ್ನು ಕೋಚ್‌ಗಳಿಗೆ ಆ ಕೂಡಲೇ ಕಲಿಸಬೇಕು. ಹೊಸತನ್ನು ಪರಿಚಯಿಸಬೇಕು. ಅವರು ಹೊಸ ವಿಧಾನಗಳಿಗೆ ತತ್‌ಕ್ಷಣ ಬದಲಾವಣೆ ಗೊಂಡಲ್ಲಿ ಸಹಜವಾಗಿ ಕ್ರೀಡಾಪಟುಗಳ ಗುಣಮಟ್ಟ ಸುಧಾರಿಸುತ್ತದೆ.
ಕೋಚ್‌ಗಳೂ ಹೊಣೆ ಹೊರಬೇಕು: ಪ್ರಸ್ತುತ ಕ್ರೀಡಾಪಟುಗಳ ಮೇಲೆ ಉದ್ದೀಪನ ಔಷಧ ಸೇವಿಸುವುದಕ್ಕೆ ಎಷ್ಟೇ ನಿರ್ಬಂಧಗಳಿದ್ದರೂ ಸೇವನೆ ಯಂತೂ ನಡೆದೇ ಇದೆ. ಅದರಿಂದ ಕ್ರೀಡಾಪಟುಗಳ ಭವಿಷ್ಯವೇ ಹಾಳಾಗು ತ್ತಿದೆ. ಕೆಲವೊಮ್ಮೆ ಕ್ರೀಡಾಪಟುಗಳು ಉದ್ದೀಪನ ತೆಗೆದುಕೊಳ್ಳುವುದರಲ್ಲಿ ಪರೋಕ್ಷವಾಗಿ ಕೋಚ್‌ಗಳ ನೆರವೂ ಇರುತ್ತದೆ ಅಥವಾ ತಿದ್ದಿ ಹೇಳುವುದರಲ್ಲಿ ಸೋತಿರುತ್ತಾರೆ. ಹಾಗಾಗಿ ಕೋಚ್‌ಗಳಿಗೆ ಈ ವಿಚಾರವನ್ನು ಮನದಟ್ಟು ಮಾಡಬೇಕು. ಕ್ರೀಡಾಪಟುವೊಬ್ಬ ಉದ್ದೀಪನ ತೆಗೆದುಕೊಂಡಿದ್ದು ಸಾಬೀತಾದರೆ, ಇಂತಹ ಕೋಚ್‌ವೊಬ್ಬರ ಶಿಷ್ಯ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಬೇಕು.

ಆಯ್ಕೆಯಲ್ಲಿ ಸುಧಾರಣೆ ಬೇಕು: ಕ್ರೀಡಾಪಟುಗಳ ಆಯ್ಕೆಯಲ್ಲಿ ನಾವು ಸುಧಾರಣೆ ಕಾಣುತ್ತಾ ಇದ್ದೇವೆ. ಅದೇ ಕಾರಣಕ್ಕೆ ಪದಕ ವಿಜೇತರ ಸಂಖ್ಯೆ ಏರುತ್ತಿರು ವುದು. ಅದು ಇನ್ನೂ ಹೆಚ್ಚಬೇಕು. ಪ್ರತಿಭಾವಂತರಿಗೆ ಮಾತ್ರ ಯಾವುದೇ ಕೂಟಗಳಿಗೆ ಆದ್ಯತೆ ನೀಡಬೇಕು. ಉತ್ತರ, ದಕ್ಷಿಣ, ಆ ರಾಜ್ಯ, ಈ ರಾಜ್ಯ, ಅವರ ಸಂಬಂಧಿ, ಇವರ ಸಂಬಂಧಿ ಎನ್ನುವುದನ್ನೆಲ್ಲ ಬದಿಗಿಟ್ಟು ಕೇವಲ ಪ್ರತಿಭೆ, ಸಾಮರ್ಥ್ಯಕ್ಕೆ ಮಾತ್ರ ಪ್ರಾಮುಖ್ಯ ಕೊಡಬೇಕು. ಆಗ ತನ್ನಿಂತಾನೇ ವ್ಯವಸ್ಥೆ ಬದಲಾಗುತ್ತದೆ.

-ಕೆ.ವೈ. ವೆಂಕಟೇಶ್‌,
ಪದ್ಮಶ್ರೀ ಪುರಸ್ಕೃತ ದಿವ್ಯಾಂಗ ಕ್ರೀಡಾಪಟು

ಟಾಪ್ ನ್ಯೂಸ್

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.