ಬಂಜಾರಾ ಮಕ್ಕಳು ಶೈಕ್ಷಣಿಕವಾಗಿ ಬಲಗೊಳ್ಳಲಿ: ಜಾಧವ
Team Udayavani, Aug 17, 2022, 1:52 PM IST
ಕಲಬುರಗಿ: ಬಂಜಾರಾ ಮಕ್ಕಳು ಶೈಕ್ಷಣಿಕವಾಗಿ ಇನ್ನಷ್ಟು ಬಲಗೊಳ್ಳಬೇಕಾದ ಅವಶ್ಯಕತೆ ಇದೆ. ಉನ್ನತ ಶಿಕ್ಷಣದಲ್ಲೂ ಈಗೀಗ ಸಾಧನೆ ಕಂಡು ಬರುತ್ತಿದ್ದು, ಐಎಎಸ್, ಐಪಿಎಸ್ ಮತ್ತು ಐಎಸ್ಎಫ್ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡಿ ಉನ್ನತ ಹುದ್ದೆಗೆ ಏರಬೇಕು ಎಂದು ಸಂಸದ ಡಾ| ಉಮೇಶ ಜಾಧವ ಕರೆ ನೀಡಿದರು.
ನಗರದ ಎಂಜಿನಿಯರ್ ವಿಶ್ವೇಶ್ವರಯ್ಯ ಭವನದಲ್ಲಿ ಬಂಜಾರಾ ಸರಕಾರಿ ಮತ್ತು ಅರೆ ಸರಕಾರಿ ನೌಕರರ ಸಂಘದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಂದು ವಾರಗೀಯ ಸಮಾಜದ ವಿದ್ಯಾರ್ಥಿಗಳು, ಯುವ ಜನತೆ ಉನ್ನತ ಸಾಧನೆಗಳನ್ನು ಮಾಡುತ್ತಿದ್ದಾರೆ. ಅದು ನಮಗೆ ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ಬಂಜಾರಾ ಯುವ ಜನತೆ ಹೆಚ್ಚಿನ ಮಟ್ಟದಲ್ಲಿ ಉನ್ನತ ಶಿಕ್ಷಣದತ್ತ ಒಲವು ತೋರಬೇಕು ಎಂದ ಅವರು, ಕೇವಲ ರಾಜಕಾರಣಿಗಳ ಬೆಂಬಲ ಇದ್ದರೆ ಉನ್ನತ ಸಾಧನೆ ಮತ್ತು ಶೈಕ್ಷಣಿಕ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಅದಕ್ಕಾಗಿ ಪರಿಶ್ರಮ ಪಡಬೇಕು ಎಂದರು.
ಮುಗಳನಾಗಾವಿಯ ಶ್ರೀ ಜೇಮಸಿಂಗ್ ಮಹಾರಾಜರು, ಬೆಡಸೂರ್ನ ಶ್ರೀ ಪರ್ವತಲಿಂಗ ಮಹಾರಾಜರು, ಗೊಬ್ಬುರವಾಡಿಯ ಶ್ರೀ ಬಳಿರಾಮ ಮಹಾರಾಜರು, ಕೇಸರಟಗಿಯ ಲತಾದೇವಿ, ಚೌಡಾಪುರದ ಶ್ರೀ ಮುರಹರಿ ಮಹಾರಾಜರು, ಗುವಿವಿ ಕುಲಪತಿ ದಯಾನಂದ ಅಗಸರ, ಕೆಎಎಸ್ ಪ್ರಕಾಶ ರಜಪೂತ, ಮಾಜಿ ಸಚಿವ ಬಾಬುರಾವ್ ಚವ್ಹಾಣ, ಪಾಲಿಕೆ ಸದಸ್ಯ ಕೃಷ್ಣನಾಯಕ, ವಿಠ್ಠಲ ಜಾಧವ, ನಾಮದೇವ ಕರಹರಿ, ಸುಶೀಲಾಬಾಯಿ ರಾಠೊಡ, ಬಿ.ಬಿ.ನಾಯಕ, ಸ್ವಾತಂತ್ರ್ಯ ಹೋರಾಟಗಾರ ಸೀತಾರಾಮ ಚವ್ಹಾಣ, ಅರುಣಕುಮಾರ, ಪಾಲಿಕೆ ಉಪ ಆಯುಕ್ತ ಆರ್.ಪಿ.ಜಾಧವ, ಜನಾರ್ದನ ಪವಾರ, ರಮೇಶ ಪವಾರ, ಸಂತೋಷ ಚವ್ಹಾಣ, ಸಂಘದ ಅಧ್ಯಕ್ಷ ಸುನೀಲಕುಮಾರ ಚವ್ಹಾಣ, ಪ್ರಧಾನ ಕಾರ್ಯದರ್ಶಿ ಸತೀಶ ರಾಮಚಂದ್ರ ಚವ್ಹಾಣ, ಉಪಾಧ್ಯಕ್ಷ ಹರಿಶ್ಚಂದ್ರ ರಾಠೊಡ, ಶಿವರಾಮ ರಾಠೊಡ ಇತರರು ಇದ್ದರು.
ನಮ್ಮ ಸಮುದಾಯಿಕ ಪ್ರಗತಿಯಲ್ಲಿ ಈಚೆಗೆ ಯುವಕರ ಪಾತ್ರ ಕುಗ್ಗುತ್ತಿದೆ. ಈ ನಿಟ್ಟಿನಲ್ಲಿ ಸಮಾಜದ ಪ್ರಮುಖರು, ರಾಜಕೀಯ ಧುರೀಣರು, ಆರ್ಥಿಕ ವಲಯದಲ್ಲಿನ ವ್ಯಕ್ತಿಗಳು, ಉದ್ಯಮಿಗಳು ತಮ್ಮ ಸಮುದಾಯದತ್ತ ತಿರುಗಿ ನೋಡಿದರೆ ಸಾಧನೆಗಳು ಸಾಧ್ಯ. ಈ ನಿಟ್ಟಿನಲ್ಲಿ ಬಂಜಾರಾ ಸಮುದಾಯದಲ್ಲೂ ಕ್ರಾಂತಿಕಾರಕ ಶೈಕ್ಷಣಿಕ ಪ್ರಗತಿ ಆಗಬೇಕು. –ಪ್ರೊ|ದಯಾನಂದ ಅಗಸರ್, ಗುವಿವಿ ಕುಲಪತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
MUST WATCH
ಹೊಸ ಸೇರ್ಪಡೆ
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್
ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ