ಸಿಗದ ಕೂಲಿ ಆಳು; ಕಳೆ ನಾಶಕದ ಮೊರೆ
Team Udayavani, Aug 26, 2022, 2:49 PM IST
ಅಫಜಲಪುರ: ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೊಲ ಗದ್ದೆಗಳಲ್ಲಿ ಸಾಕಷ್ಟು ಹುಲ್ಲು ಬೆಳೆದು ನಿಂತಿದೆ. ಹೀಗಾಗಿ ಬೆಳೆ ಯಾವುದು, ಹುಲ್ಲು ಯಾವುದೆಂದು ತಿಳಿಯದಂತಾಗಿದೆ. ಅಲ್ಲದೇ ಕೂಲಿ ಆಳುಗಳ ಸಮಸ್ಯೆ ಹೆಚ್ಚಿದ್ದು, ರೈತರು ಹುಲ್ಲು ತೆಗೆಯಲು ಕಳೆನಾಶಕಗಳ ಮೊರೆ ಹೋಗುತ್ತಿದ್ದಾರೆ.
ತಾಲೂಕಿನಾದ್ಯಂತ ಮುಂಗಾರು ಬಿತ್ತನೆ ಆಗಿದ್ದು, ಮಳೆ ಉತ್ತಮ ರೀತಿಯಲ್ಲಿ ಆಗುತ್ತಿರುವುದರಿಂದ ಬೆಳೆ ಜತೆ ಹುಲ್ಲು ಬೆಳೆಯುತ್ತಿದೆ. ಈ ಹುಲ್ಲು ತೆಗೆಯಲು ಹರಸಾಹಸ ಪಡುವಂತಾಗಿದೆ.
ಕೂಲಿ ಕಾರ್ಮಿಕರ ಸಮಸ್ಯೆ: ಬೆಳೆಗಿಂತ ಹುಲ್ಲೇ ಹೆಚ್ಚಾಗಿ ಬೆಳೆಯುತ್ತಿರುವುದರಿಂದ ರೈತರು ಚಿಂತೆಗೀಡಾಗಿದ್ದಾರೆ. ಇಂತಹ ಸಮಯದಲ್ಲಿ ಕಡಿಮೆ ಕೂಲಿಗೆ ಆಳುಗಳು ಸಿಗುತ್ತಿಲ್ಲ. ಹೀಗಾಗಿ ಕಳೆನಾಶಕದ ಮೊರೆ ಹೋಗುತ್ತಿದ್ದಾರೆ. ಆದರೆ ಭವಿಷ್ಯದಲ್ಲಿ ಹೆಚ್ಚು ಕಳೆ ನಾಶಕಗಳ ಬಳಕೆಯಿಂದ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತದೆ ಎನ್ನುವ ಆತಂಕವೂ ರೈತರಲ್ಲಿದೆ.
ಕೂಲಿಗಳೇ ಸಿಗ್ತಿಲ್ಲ: ದಿನಾ ಓಣಿ ಓಣಿ ತಿರಗ್ಯಾಡಿದ್ರು ಒಬ್ರು ಕೆಲಸಕ್ ಬರಾಂಗಿಲ್ಲ. ಹಿಂಗಾಗಿ ಹೊಲದಾಗ್ ಹೋಗಿ ನಿಂತ್ರ ಬೆಳಿಗಿಂತ ಹುಲ್ಲೆ ಹೆಚ್ ಕಾಣಲಿಕ್ಕತ್ತಾದ್ರಿ. ಹಿಂಗಾಗಿ ಎಣ್ಣಿ ಹೊಡಿಲಿಕತ್ತಿವ್ರಿ ಎನ್ನುತ್ತಾರೆ ರೈತರಾದ ಮರೆಪ್ಪ ಸಿಂಗೆ, ಚಂದ್ರಕಾಂತ ಕಲ್ಲೂರ, ಮಡಿವಾಳ ಗಂಗಾ ಹಾಗೂ ಇನ್ನಿತರರು.
-ಮಲ್ಲಿಕಾರ್ಜುನ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
MUST WATCH
ಹೊಸ ಸೇರ್ಪಡೆ
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Sandalwood: ಧೀರೇನ್ ರೀ ಇಂಟ್ರೊಡಕ್ಷನ್