35 ದೇಶ, 30,000 ಕಿ.ಮೀ. ಸುತ್ತಾಟ ! ಕೇರಳದಿಂದ ಲಂಡನ್ಗೆ ಸೈಕಲ್ ಯಾತ್ರೆ
Team Udayavani, Sep 5, 2022, 10:28 AM IST
ಮಹಾನಗರ: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಸೈಕಲ್ ರೈಡರ್ ಫಯೀಸ್ ಅಶ್ರಫ್ ಅಲಿ ಅವರು ಕೇರಳದ ತಿರುವನಂತಪುರದಿಂದ ಲಂಡನ್ವರೆಗೆ ಏಕಾಂಗಿ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ಅವರು ಶನಿವಾರ ಮಂಗಳೂರು ತಲುಪಿದ್ದು, ಇಲ್ಲಿನ ನಾಗರಿಕರು ಅವರನ್ನು ಸ್ವಾಗತಿಸಿ, ಬರಮಾಡಿಕೊಂಡರು.
ಫಯೀಸ್ ಅಶ್ರಫ್ ಅಲಿ ಅವರು ಅಂತಾರಾಷ್ಟ್ರೀಯ ಸೈಕಲ್ ರೈಡರ್ ಆಗಿದ್ದು, ತನ್ನ ಯಾತ್ರೆಯನ್ನು ಆಗಸ್ಟ್ 15ರಂದು ತಿರುವನಂತಪುರದಿಂದ ಆರಂಭಿಸಿದ್ದಾರೆ. ಒಟ್ಟು 450 ದಿನಗಳ ಸೈಕಲ್ ಯಾತ್ರೆ ಅವರದ್ದು. ಈ ವೇಳೆ ಎರಡು ಖಂಡ, 35 ದೇಶ ಸುತ್ತಲಿದ್ದಾರೆ. ಒಟ್ಟು 450 ದಿನಗಳಲ್ಲಿ ಸುಮಾರು 30,000 ಕಿ.ಮೀ ಯಾತ್ರೆ ಕೈಗೊಳ್ಳುವ ಗುರಿ ಹೊಂದಿದ್ದಾರೆ. ಕೇರಳ ಮೂಲಕ ಫಯೀಸ್ ಅವರು ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದು, ಬಾಲ್ಯದಿಂದಲೇ ಸೈಕಲ್ ಯಾತ್ರೆಯತ್ತ ಆಕರ್ಷಿತರಾಗಿದ್ದರು.
ವಿವಿಧ ದೇಶ ಸುತ್ತಾಟ
ಫಯೀಸ್ ಅವರು ಅಮೆರಿಕ ಮೂಲಕ ಸರ್ಲಾ ಡಿಸ್ಕ್ ಟ್ರಕ್ಕರ್ ಸೈಕಲ್ನಲ್ಲಿ ಯಾತ್ರೆ ಆರಂಭಿಸಿದ್ದಾರೆ. ತಿರುವನಂತಪುರದಿಂದ ಮುಂಬಯಿವರೆಗೆ ಸೈಕಲ್ನಲ್ಲಿ ಪ್ರಯಾಣಿಸಿ ಅಲ್ಲಿಂದ ಒಮಾನ್ಗೆ ವಿಮಾನದಲ್ಲಿ ತೆರಳಲಿದ್ದಾರೆ. ಅಲ್ಲಿಂದ ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯ, ಕತಾರ್, ಬಹ್ರೈನ್, ಕುವೈತ್, ಇರಾಕ್, ಇರಾನ್, ಜಾರ್ಜಿಯಾ, ಟರ್ಕಿ ಅಲ್ಲಿಂದ ಬಲ್ಗೇರಿಯ, ರೊಮೇನಿಯಾ, ಮೊಲ್ಡೋವಾ, ಉಕ್ರೇನ್, ಪೋಲೆಂಡ್, ಜೆಕೋಸ್ಲೊವಾಕಿಯ, ಹಂಗೇರಿ, ಕ್ರೊಯೇಷಿಯಾ, ಆಸ್ಟ್ರಿಯ, ಇಟಲಿ, ಸ್ವಿಜರ್ಲ್ಯಾಂಡ್, ಜರ್ಮನಿ, ನೆದರ್ಲ್ಯಾಂಡ್, ಬೆಲ್ಜಿಯಂ, ಲಕ್ಸೆಂಬರ್ಗ್, ಫ್ರಾನ್ಸ್ ಮೂಲಕ ಎರಡು ಖಂಡಗಳನ್ನು ದಾಟಿ ಲಂಡನ್ ತಲುಪಲಿದ್ದಾರೆ.
ವೀಸಾ ಸಮಸ್ಯೆಯಿಂದ ಪಾಕಿಸ್ಥಾನ ಮತ್ತು ಚೀನ ದೇಶಕ್ಕೆ ಪ್ರಯಾಣ ಮಾಡುತ್ತಿಲ್ಲ. 2019ರಲ್ಲಿ ಕೇರಳದಿಂದ ಸಿಂಗಾಪುರಕ್ಕೆ ಸೈಕಲ್ ಯಾತ್ರೆ ಆರಂಭಿಸಿದ್ದರು. ಈ ವೇಳೆ 104 ದಿನಗಳ ಕಾಲ 8,000 ಕಿ.ಮೀ. ಪ್ರಯಾಣದಲ್ಲಿ ನೇಪಾಲ, ಬೂತಾನ್, ಮಯನ್ಮಾರ್, ಥೈಲ್ಯಾಂಡ್ ಮತ್ತು ಮಲೇಶಿಯಾ ದೇಶ ಸಂಚರಿಸಿದ್ದಾರೆ. ಪ್ರತೀ ರೈಡ್ನಲ್ಲಿಯೂ ಸಮಾಜಕ್ಕೆ ಸಂದೇಶ ನೀಡುವ ಪರಿಕಲ್ಪನೆಯೊಂದಿಗೆ ರೈಡ್ ಮಾಡುತ್ತಿದ್ದು, ಈ ಬಾರಿ ಹೃದಯದಿಂದ ಹೃದಯಕ್ಕೆ ಮತ್ತು ಪರಿಸರ ಸಂರಕ್ಷಣೆಯ ಸ್ಲೋಗನ್ ಇರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ
Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ
Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್