ಗ್ರಂಥಾಲಯದಲಿ ಮಕ್ಕಳಿಗೆ ನೀತಿ ಕಥೆಗಳ ಪಾಠ
Team Udayavani, Sep 9, 2022, 5:35 PM IST
ವಾಡಿ: ಶಾಲೆಯ ತರಗತಿ ಕೋಣೆಯಿಂದ ಗ್ರಂಥಾ ಲಯದತ್ತ ಹೆಜ್ಜೆ ಹಾಕಿದ ಗ್ರಾಮೀಣ ಭಾಗದ ಮಕ್ಕಳಿಗೆ ಅಜ್ಜಿ ಹೇಳಿದ ನೀತಿ ಕಥೆಗಳನ್ನು ಆಲಿಸುವ ಅವಕಾಶ ದೊರಕಿತು.
ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳನ್ನು ಶಿಕ್ಷಕರ ಸಹಾಯದಿಂದ ಗ್ರಂಥಾಲಯಕ್ಕೆ ಬರ ಮಾಡಿಕೊಂಡ ಗ್ರಂಥಪಾಲಕ, ಮಕ್ಕಳ ಕೈಗೆ ಪುಸ್ತಕ ಕೊಟ್ಟು ಗಟ್ಟಿ ಪಾಠಕ್ಕೆ ಮುಂದಾದರು. ಮಕ್ಕಳ ಗಟ್ಟಿ ಓದಿಗೆ ಗ್ರಂಥಾಲಯ ಕೋಣೆ ಪಾಠದ ಶಾಲೆಯಾಗಿ ಪರಿವರ್ತನೆಯಾಯಿತು.
ಅಂತಾರಾಷ್ಟ್ರೀಯ ಸಾಕ್ಷರ ದಿನಾಚರಣೆ ನಿಮಿತ್ತ ಜಿಲ್ಲಾ ಗ್ರಂಥಾಲಯ ಇಲಾಖೆ ಹಾಗೂ ತಾಪಂ ಸಹಯೋಗದೊಂದಿಗೆ ನಡೆಯುತ್ತಿರುವ “ಒಂದು ದಿನ ಒಂದು ಕಥೆ’ ಅಭಿಯಾನ ಹಳಕರ್ಟಿ ಗ್ರಾಮದ ಸಾರ್ವಜನಿಕ ಗ್ರಂಥಾಲಯದಲ್ಲಿ ನಡೆಯಿತು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿ ಮಕ್ಕಳಿಗೆ ನೀತಿ ಕಥೆಗಳನ್ನು ಬೋಧಿಸಿದ ಗ್ರಂಥಪಾಲಕ ಪ್ರಕಾಶ ಚಂದನಕೇರಿ, ಕಾಡು, ಕಾಡು ಪ್ರಾಣಿಗಳು, ಪಕ್ಷಿ, ವನ, ನದಿಗಳ ವಿವರಣೆ ನೀಡಿದರು. ಕಾಗೆ, ಹುಲಿ, ನರಿ, ಕೋತಿಯ ಕಥೆಗಳನ್ನು ಹೇಳುತ್ತಾ ಮಕ್ಕಳ ಗಮನ ಸೆಳೆದರು. ಕಥೆಯನ್ನು ಹೇಳಿ ಮುಗಿಸಿದ ಬಳಿಕ ಸಣ್ಣ ಸಣ್ಣ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಿ ಉತ್ತರ ಪಡೆದುಕೊಳ್ಳುವ ಪ್ರಯತ್ನ ಮಾಡಿದರು. ಕಥೆಗಳನ್ನು ತದೇಕಚಿತ್ತದಿಂದ ಆಲಿಸಿದ ಮಕ್ಕಳು ಥಟ್ ಅಂತ ಉತ್ತರ ಕೊಟ್ಟು ಜಾಣ್ಮೆ ಮೆರೆದರು.
ಮೊಬೈಲ್ಗಳನ್ನು ಮಕ್ಕಳ ಕೈಗೆ ಕೊಟ್ಟು ಗುಂಪು ವೀಕ್ಷಣೆಗೆ ಅವಕಾಶ ನೀಡಿದರು. ಮೊಬೈಯಿಲ್ ನಲ್ಲಿ ಪ್ರದರ್ಶನಗೊಂಡ ಸಣ್ಣ ಕಥೆಗಳನ್ನು ಮಕ್ಕಳು ಅರ್ಥಮಾಡಿಕೊಂಡರು. ಕಂಪ್ಯೂಟರ್ ಪರದೆಯಲ್ಲಿ ಪುಣ್ಯಕೋಟಿ ಕಥೆಯನ್ನು ವೀಕ್ಷಿಸಿ ಪ್ರಾಮಾಣಿಕತೆ, ಬದ್ಧತೆ, ಕರ್ತವ್ಯ, ಸತ್ಯ ಹೇಳುವುದು, ನುಡಿದಂತೆ ನಡೆದುಕೊಳ್ಳುವ ಮಾನವೀಯ ಮೌಲ್ಯಗಳನ್ನು ಮಕ್ಕಳು ಅರಿತುಕೊಂಡರು. ನಂತರ ಕಂಪ್ಯೂಟರ್ ಸಹಾಯದಿಂದ ಹಲವು ಆಟ ಆಡಿಸಲಾಯಿತು. ಹಳಕರ್ಟಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ರುದ್ರು ಸಾಹು ಅಳ್ಳೊಳ್ಳಿ, ಶಿಕ್ಷಕಿ ಎನ್.ಮಂಜುಳಾ, ಕಾಶೀನಾಥ ಶೆಟಗಾರ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್ ಇನ್ನಿಲ್ಲ
BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್ ಖರ್ಗೆ
Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್ ಏಕಾಂಗಿ ಫೈಟ್
DK Sivakumar: ಪ್ರಜ್ವಲ್ ರೇವಣ್ಣ ಕೈ ಹಿಡಿದು ಪ್ರಚಾರ ಮಾಡಿದ ಮೋದಿ ಕ್ಷಮೆ ಕೇಳಲಿ; ಡಿಕೆಶಿ
Prajwal Revanna: ಪ್ರಜ್ವಲ್ ಶೀಘ್ರ ಬಂಧನ: ಡಾ| ಜಿ. ಪರಮೇಶ್ವರ್
MUST WATCH
ಹೊಸ ಸೇರ್ಪಡೆ
Cucumber price: ಬಿಸಿಲ ಬರೆ; 1ಕೆಜಿ ಸೌತೆಕಾಯಿ ಬೆಲೆ 62 ರೂ.!
ನನಗೂ ಭೂ ವ್ಯವಹಾರಕ್ಕೂ ಸಂಬಂಧ ಇಲ್ಲ: ಬೆಂವಿವಿ ಪ್ರೊ.ಮೈಲಾರಪ್ಪ ಸ್ಪಷ್ಟನೆ
Padma Shri: ಬದುಕಿಗಾಗಿ ದಿನಗೂಲಿ ಮಾಡುತ್ತಿರುವ ಪದ್ಮಶ್ರೀ ಪುರಸ್ಕೃತ ಕಲಾವಿದ!
Mudhol; ಹೃದಯಾಘಾತದಿಂದ ಚುನಾವಣಾ ಕರ್ತವ್ಯನಿರತ ಸಿಬ್ಬಂದಿ ಸಾವು
IPL 2024; ಧೋನಿ ಬದಲು ಸಿಎಸ್ ಕೆ ತಂಡದಲ್ಲಿ ವೇಗಿಯನ್ನು ಆಡಿಸಿ..: ಹರ್ಭಜನ್ ಸಿಂಗ್ ಟೀಕೆ