ಒಂದೇ ಟೈಟಲ್ ನಲ್ಲಿ ಎರಡು ಸಿನಿಮಾ: ಟಾಲಿವುಡ್ ನಲ್ಲಿ ವಿವಾದಕ್ಕೆ ಸಿಲುಕಿದ ಫಾಹದ್ ಫಾಸಿಲ್
Team Udayavani, Sep 11, 2022, 4:37 PM IST
ಹೈದರಾಬಾದ್: ಮಾಲಿವುಡ್ ನಟ ಫಾಹದ್ ಫಾಸಿಲ್ ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟರಲ್ಲಿ ಒಬ್ಬರು. ಮಲಯಾಳಂ ಮಾತ್ರವಲ್ಲದೆ, ಬಹುಭಾಷೆಯಲ್ಲೂ ಅವರು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಇದುವರೆಗೆ ಯಾವ ವಿವಾದವನ್ನೂ ಮೈಮೇಲೆ ಹಾಕಿಕೊಳ್ಳದ ಫಾಹದ್ ಈಗ ಟೈಟಲ್ ವಿವಾದವೊಂದರಲ್ಲಿ ಸಿಲುಕಿದ್ದಾರೆ.
ಟಾಲಿವುಡ್ ನ ʼಪುಷ್ಪʼ ಸಿನಿಮಾದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ನೋಡುಗರನ್ನು ಸೆಳೆದ ಫಾಹದ್ ಸದ್ಯ ಟಾಲಿವುಡ್ ನಲ್ಲಿ ʼಟಾಪ್ ಗೇರ್ʼ ಮೂಲಕ ಪೂರ್ಣ ಪ್ರಮಾಣದ ಹೀರೋ ಆಗಲು ಹೊರಟಿದ್ದಾರೆ.
ಸುಧೀಶ್ ಶಂಕರ್ ನಿರ್ದೇಶನದ ʼಟಾಪ್ ಗೇರ್ʼ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇತ್ತೀಚಿಗೆ ರಿಲೀಸ್ ಆಗಿದೆ. ಜೀಪಿನ ಮೇಲೆ ಘೋಷಣೆ ಕೂಗುವ ರೀತಿ ನಿಂತು ಕೊಂಡಿರುವ ಫಾಹದ್ ಲುಕ್ ವೈರಲ್ ಆಗಿದೆ. ಚಿತ್ರದ ಟೈಟಲ್ ಪೋಸ್ಟರ್ ರಿಲೀಸ್ ಆದ ಬೆನ್ನಲ್ಲೇ ವಿವಾದಕ್ಕೆ ಗುರಿಯಾಗಿದೆ.
ಇದನ್ನೂ ಓದಿ: ಸೂಪರ್ ಹಿಟ್ ಆಯ್ತು ರಣಬೀರ್ ಕಪೂರ್ ‘ಬ್ರಹ್ಮಾಸ್ತ್ರ’: ಎರಡೇ ದಿನಕ್ಕೆ ಚಿತ್ರ ಗಳಿಸಿದ್ದೆಷ್ಟು?
ಟಾಲಿವುಡ್ ನಿರ್ಮಾಪಕ ಶ್ರೀಧರ್ ರೆಡ್ಡಿ ಫಾಹದ್ ಚಿತ್ರದ ಟೈಟಲ್ ವಿರುದ್ಧ ಗರಂ ಆಗಿದ್ದಾರೆ. ಈಗಾಗಲೇ ನಾವು ʼಟಾಪ್ ಗೇರ್ʼ ಚಿತ್ರದ ಟೈಟಲ್ ನ್ನು ನೋಂದಣಿ ಮಾಡಿಸಿದ್ದೇವೆ. ಚಿತ್ರದ ಶೂಟಿಂಗ್ ಮುಗಿದಿದೆ. ಅಂತಿಮ ಹಂತದ ಪೋಸ್ಟ್ ಪ್ರೂಡಕ್ಷನ್ ಕೆಲಸದಲ್ಲಿದ್ದೇವೆ ಎಂದಿದ್ದಾರೆ.
ಇದು ಸರಿಯಲ್ಲ. ಒಂದೇ ಟೈಟಲ್ ಇಟ್ಟಿರುವುದರಿಂದ ಪ್ರೇಕ್ಷಕರು ಗೊಂದಲಕ್ಕೆ ಒಳಗಾಗುವ ಸಾಧ್ಯತೆಗಳಿರುತ್ತವೆ. ಸಿನಿಮಾದ ನಿರ್ಮಾಪಕರು ಟೈಟಲ್ ಬದಲಾಯಿಸುತ್ತಾರೆ ಎನ್ನುವ ನಂಬಿಕೆಯಿದೆ ಎಂದು ಅವರು ಹೇಳಿದ್ದಾರೆ.
ಆದಿ ಸಾಯಿಕುಮಾರ್ ನಟನೆಯ ʼಟಾಪ್ ಗೇರ್ʼ ಚಿತ್ರವನ್ನು ಶಶಿಕಾಂತ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ.
ಫಾಹದ್ ಫಾಸಿಲ್ ಚಿತ್ರ ತಂಡ ಇದಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Housefull 5: ಕಾಮಿಡಿ ಜರ್ನಿಯ ʼಹೌಸ್ ಫುಲ್ʼ ಕುಟುಂಬಕ್ಕೆ ಅಭಿಷೇಕ್ ಬಚ್ಚನ್ ಎಂಟ್ರಿ
Kangana Ranaut: ಚಿತ್ರರಂಗದಲ್ಲಿ ಅಮಿತಾಭ್ ಗೆ ಸಮಾನವಾದ ಗೌರವ ನನಗೆ ಸಿಗುತ್ತಿದೆ; ಕಂಗನಾ
Covid vaccine ಅಡ್ಡ ಪರಿಣಾಮದಿಂದಲೇ ಹೃದಯಾಘಾತ?: ನಟ ಶ್ರೇಯಸ್ ಹೇಳಿದ್ದೇನು?
Sunidhi Chauhan: ಹಾಡುತ್ತಿರುವಾಗಲೇ ಖ್ಯಾತ ಗಾಯಕಿ ಮೇಲೆ ಬಾಟಲಿ ಎಸೆದ ಅಭಿಮಾನಿ
ಅಮಿತಾಭ್ ಟು ಶಾರುಖ್: ಇಂದು ಕೋಟಿ ಕುಳರಾದ ಈ ನಟರ ಮೊದಲ ಸಂಪಾದನೆ ಎಷ್ಟಾಗಿತ್ತು ಗೊತ್ತಾ?
MUST WATCH
ಹೊಸ ಸೇರ್ಪಡೆ
LS Polls: ಮತದಾರರಿಂದ ಪ್ರೋತ್ಸಾಹದಾಯಕ ಮತದಾನ… ಕಾಂಗ್ರೆಸ್ ನತ್ತ ಜನರ ಒಲವು: ಖರ್ಗೆ
Hubballi: ಒಂದೇ ಕುಟುಂಬದ 96 ಸದಸ್ಯರಿಂದ ಮತದಾನ
Pen Drive ಹಂಚಿದವರ ವಿರುದ್ಧ ಯಾಕೆ ಎಸ್ಐಟಿ ಕ್ರಮ ಕೈಗೊಳ್ಳಲಿಲ್ಲ: ಜಿ.ಟಿ ದೇವೇಗೌಡ ಪ್ರಶ್ನೆ
ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದವರಿಗೆ ಪ್ರಜಲ್ ತರಲಾಗದೇ: ಸಚಿವ ಶಿವಾನಂದ
Politics: ಸಿದ್ದರಾಮಯ್ಯ, ಪರಮೇಶ್ವರ ಅವರ ಸಿಡಿಯೂ ಮುಂದೆ ಬರಬಹುದು; ಜಾರಕಿಹೊಳಿ