ಪ್ರವಾಹ: ಪಾಕ್ನಲ್ಲಿ ಮುಸ್ಲಿಂ ಕುಟುಂಬಗಳಿಗೆ ದೇಗುಲದ ಆಶ್ರಯ
Team Udayavani, Sep 12, 2022, 6:55 AM IST
ಇಸ್ಲಾಮಾಬಾದ್: ಪ್ರವಾಹದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ಥಾನದಲ್ಲಿ ದೇಗುಲವೊಂದು ಮುಸ್ಲಿಂ ಸಮುದಾಯದವರಿಗೆ ಆಶ್ರಯ ನೀಡಿ ಮಾನವೀಯತೆ ಮೆರೆದಿದೆ.
ಬಲೂಚಿಸ್ಥಾನ ಪ್ರಾಂತದಲ್ಲಿನ ಬಾಬಾ ಮಧೋದಾಸ್ ಮಂದಿರದಲ್ಲಿ ಈ ರೀತಿ ಆಶ್ರಯ ನೀಡಲಾಗುತ್ತಿದೆ. ಈ ದೇಗುಲ ಗುಡ್ಡದ ಮೇಲ್ಭಾಗದಲ್ಲಿದ್ದು, ಪ್ರವಾಹದ ಸಮಸ್ಯೆಗೆ ಸಿಲುಕಿಕೊಂಡಿಲ್ಲ. ಗುಡ್ಡದ ಕೆಳಗಿರುವ ಮನೆಗಳಿಗೆ ನೀರು ನುಗ್ಗಿದ್ದು, ಜನರು ಗ್ರಾಮ ಬಿಟ್ಟು ಹೊರಗೆ ಹೋಗದಂತಾಗಿದೆ.
ದೇಗುಲವನ್ನು ನಿರ್ವಹಿಸುತ್ತಿರುವ ಹಿಂದೂ ಕುಟುಂಬಗಳು ದೇಗುಲದ ಧ್ವನಿವರ್ಧಕಗಳ ಮೂಲಕ ಜನರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. “ದೇಗುಲದ ಬಾಗಿಲು ತೆರೆದಿದೆ. ನೀವು ಇಲ್ಲಿಯೇ ಬಂದು ವಾಸ ಹೂಡಿ’ ಎಂದು ಮುಸ್ಲಿಂ ಸಮುದಾಯಕ್ಕೆ ಕರೆ ಕೊಟ್ಟಿದೆ.
ದೇಗುಲದಲ್ಲಿ 100 ಕೊಠಡಿಗಳಿದ್ದು, ಸುಮಾರು 200-300 ಜನರಿಗೆ ಆಶ್ರಯ ನೀಡಲಾಗಿದೆ. ಪೂರ್ತಿಯಾಗಿ ದ್ವೀಪವಾಗಿರುವ ಈ ಗ್ರಾಮಕ್ಕೆ ಸರಕಾರವು ಹೆಲಿಕಾಪ್ಟರ್ ಮೂಲಕ ದಿನಸಿ ಒದಗಿಸುತ್ತಿದ್ದು, ದೇಗುಲದಲ್ಲಿಯೇ ಎಲ್ಲರಿಗೂ ಅಡುಗೆ ಮಾಡಿ ಹಂಚಲಾಗುತ್ತಿದೆ. ಕುರಿ, ಮೇಕೆಗಳಿಗೂ ದೇಗುಲದ ಆವರಣದಲ್ಲಿಯೇ ಸ್ಥಳಾವಕಾಶ ಮಾಡಿಕೊಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nijjar ಕೇಸ್ ತನಿಖೆ ಮೂವರ ಬಂಧನಕ್ಕೆ ಮುಕ್ತಾಯವಾಗಿಲ್ಲ: ಕೆನಡಾ ಪ್ರಧಾನಿ
Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?
Pakistan; ಈಗ ಯೋಗ ತರಬೇತಿ ಅಧಿಕೃತವಾಗಿ ಆರಂಭ
Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ
China ಹೊಸ ಸಾಹಸ; ಭೂಮಿಗೆ ಕಾಣದ ಚಂದ್ರನ ಭಾಗದ ಮಾದರಿ ಸಂಗ್ರಹ