ಅಧಿಕಾರಿಗಳಿಂದ ಗಡಿ ಗ್ರಾಮ ಪರಿಶೀಲನೆ
Team Udayavani, Sep 13, 2022, 1:17 PM IST
ನೆಲಮಂಗಲ: ತಾಲೂಕಿನ ಗಡಿ ಗ್ರಾಪಂ ಮತ್ತು ಗ್ರಾಮವಾದ ಬರಗೂರು ಮತ್ತು ಬರಗೂರು ಪಾಳ್ಯ, ಮುತ್ತರಾಯಪ್ಪನ ಪಾಳ್ಯ ಮಧ್ಯೆ ಇತ್ತೀಚೆಗೆ ಸುರಿದ ಮಳೆಗೆ ಚೆಕ್ ಡ್ಯಾಂ ಹಾಗೂ ರಸ್ತೆ ಕೊಚ್ಚಿಹೋಗಿದ್ದ ಬಗ್ಗೆ ಭಾರೀ ಮಳೆಗೆ ಗಡಿಗ್ರಾಮಗಳ ಸಂಪರ್ಕ ಕಡಿತ ಎಂಬ ಶೀರ್ಷಿಕೆಯಡಿ ಸೆ.10ರಂದು ಉದಯವಾಣಿಯಲ್ಲಿ ಸುದ್ದಿ ಪ್ರಕಟಗೊಂಡ ಬೆನ್ನಲ್ಲೆ ತಾಲೂ ಕಿನ ಅಧಿಕಾರಿಗಳು ಗಡಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿ ಸುವುದರೊಂದಿಗೆ ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ.
ಜಿಪಂ ವಿಭಾಗದ ಜೆಇ ಶೇಖರ್ ಮೂರ್ತಿ, ಮರಳ ಕುಂಟೆ ಗ್ರಾಪಂ ಕಾರ್ಯದರ್ಶಿ ರಾಮಕೃಷ್ಣ, ಗ್ರಾಪಂ ಸದಸ್ಯ ಮಾರುತಿ ಕುಮಾರ್.ಬಿ.ಎಚ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಜಿಪಂ ವಿಭಾಗಕ್ಕೆ ವರದಿ ಸಲ್ಲಿಸಿದ್ದಾರೆ. ರಸ್ತೆ ನಿರ್ಮಾಣ ನಮ್ಮ ವಿಭಾಗಕ್ಕೆ ಬರಲಿದ್ದು, ಪ್ರಕೃತಿ ವಿಕೋಪ ಮತ್ತು ನೈಸರ್ಗಿಕ ಹಾನಿಗೆ ಸಂಬಂಧಪಟ್ಟಂತೆ 5 ಲಕ್ಷ ರೂ.ಗಳ ಪರಿಹಾರ ಕಾಮಗಾರಿಗೆ ಪ್ರಸ್ತಾವನೆ ವರದಿ ಸಲ್ಲಿಸಲಾಗಿದೆ. ಏತ ನೀರಾವರಿ ಯೋಜನೆಯಲ್ಲಿ ಚೆಕ್ ಡ್ಯಾಂ ದುರಸ್ತಿ ನಡೆಯಲಿದೆ. ಒಂದು ತಿಂಗಳ ಒಳಗೆ ಕಾಮಗಾರಿಗಳು ಪ್ರಾರಂಭವಾಗಲಿದೆ. ಹಣ ಬಿಡುಗಡೆಯಾದ ಕೂಡಲೇ ಕಾಮಗಾರಿ ನಡೆಯಲಿದೆ ಎಂದು ಜಿಪಂ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವರಾಜ್ ಕುಮಾರ್.ಡಿ.ಸಿ. ತಿಳಿಸಿದರು.
ಮುಂದುವರಿದ ಸಮಸ್ಯೆ: ಉದಯವಾಣಿ ಯೊಂದಿಗೆ ಶಾಲಾ ವಿದ್ಯಾರ್ಥಿನಿ ತನು ಶ್ರೀ ಮಾತನಾಡಿ, ನಮ್ಮ ಪೋಷಕರು ಪ್ರತಿನಿತ್ಯ ಶಾಲೆಗೆ, ನೀರಿನ ಹಳ್ಳ ದಾಟಿಸಿ ಬಿಡುತ್ತಿದ್ದಾರೆ. ಮಳೆ ಹೆಚ್ಚಾದರೆ ಭಯವಾಗುತ್ತದೆ. ಬೇಗ ರಸ್ತೆ ಮತ್ತು ಚೆಕ್ ಡ್ಯಾಂ ಮರು ನಿರ್ಮಾಣವಾದರೆ, ಬರಗೂರು ಕಾಲೋ ನಿಯ 50ರಿಂದ 60 ಮಂದಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದರು.
ಗ್ರಾಮಗಳ ನಡುವಿನ ಸಂಪರ್ಕ ಕಡಿತವಾದ ವಿಚಾರ ಉದಯವಾಣಿ ಪತ್ರಿಕೆಯಿಂದ ತಿಳಿದಿದೆ. ಒಂದೆರಡು ದಿನದಲ್ಲೇ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತೇನೆ. ಸಂಬಂಧಪಟ್ಟ ಇಲಾಖೆಯ ಎಂಜಿನಿಯರ್ಗೆ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸೂಚಿಸುತ್ತೇನೆ. – ಡಾ.ಕೆ.ಶ್ರೀನಿವಾಸಮೂರ್ತಿ, ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
Desi Swara: ಅಪಹಾಸ್ಯ ನೀಡಿದ ಅದೃಷ್ಟ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ