ಕಳಪೆ ಬ್ಯಾಟಿಂಗ್‌; ವನಿತೆಯರಿಗೆ ಸೋಲು; 7 ವಿಕೆಟ್‌ ಜಯ; ಇಂಗ್ಲೆಂಡಿಗೆ ಒಲಿಯಿತು ಟಿ20 ಸರಣಿ


Team Udayavani, Sep 16, 2022, 10:59 PM IST

ಕಳಪೆ ಬ್ಯಾಟಿಂಗ್‌; ವನಿತೆಯರಿಗೆ ಸೋಲು; 7 ವಿಕೆಟ್‌ ಜಯ; ಇಂಗ್ಲೆಂಡಿಗೆ ಒಲಿಯಿತು ಟಿ20 ಸರಣಿ

ಬ್ರಿಸ್ಟಲ್‌: ನಿರ್ಣಾಯಕ ಟಿ20 ಪಂದ್ಯದಲ್ಲಿ ತೀರಾ ಕಳಪೆ ಬ್ಯಾಟಿಂಗ್‌ ಪ್ರದರ್ಶಿಸಿದ ಭಾರತದ ವನಿತಾ ತಂಡಕ್ಕೆ ಸರಣಿ ಗೆಲ್ಲುವ ಅವಕಾಶವೊಂದು ಕೈತ ಪ್ಪಿತು. ಆತಿಥೇಯ ಇಂಗ್ಲೆಂಡ್‌ 7 ವಿಕೆಟ್‌ಗಳ ಅಧಿಕಾರಯುತ ಜಯದೊಂದಿಗೆ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು.

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಆರಂಭದಿಂದಲೇ ಕುಸಿತ ಕಾಣುತ್ತ ಹೋಯಿತು. ಗಳಿಸಿದ್ದು 8 ವಿಕೆಟಿಗೆ ಕೇವಲ 122 ರನ್‌. ಜವಾಬಿತ್ತ ಇಂಗ್ಲೆಂಡ್‌ 18.2 ಓವರ್‌ಗಳಲ್ಲಿ ಮೂರೇ ವಿಕೆಟ್‌ ನಷ್ಟಕ್ಕೆ 126 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು.

ದ್ವಿತೀಯ ಪಂದ್ಯವನ್ನು ಅಮೋಘ ಚೇಸಿಂಗ್‌ ಮೂಲಕ 8 ವಿಕೆಟ್‌ಗಳಿಂದ ಜಯಿಸಿದ್ದ ಹರ್ಮನ್‌ಪ್ರೀತ್‌ ಕೌರ್‌ ಪಡೆ, ಮೂರನೇ ಮುಖಾಮುಖಿಯಲ್ಲಿ ಅಷ್ಟೇ ಕಳಪೆ ಆಟವಾಡಿತು. ಅಗ್ರ ಕ್ರಮಾಂಕದ ಐವರು ಎರಡಂಕೆಯ ಗಡಿಯನ್ನೇ ತಲುಪಲಿಲ್ಲ. ಇವರಲ್ಲಿ ಎಸ್‌. ಮೇಘನಾ ಮತ್ತು ಡಿ. ಹೇಮಲತಾ ಅವರದು ಶೂನ್ಯ ಸಂಪಾದನೆ. ಉಳಿದ ಮೂವರಿಂದ ಒಟ್ಟುಗೂಡಿದ್ದು 19 ರನ್‌ ಮಾತ್ರ. ದ್ವಿತೀಯ ಪಂದ್ಯದ ಗೆಲುವಿನ ರೂವಾರಿ ಸ್ಮತಿ ಮಂಧನಾ 9, ಶಫಾಲಿ ವರ್ಮ 5, ನಾಯಕಿ ಕೌರ್‌ ಕೇವಲ 5 ರನ್‌ ಮಾಡಿ ಔಟಾದರು.

10 ಓವರ್‌ ಮುಕ್ತಾಯದ ವೇಳೆ ಬರೀ 36 ರನ್ನಿಗೆ ಅರ್ಧದಷ್ಟು ಮಂದಿ ಪೆವಿಲಿಯನ್‌ ಸೇರಿಯಾಗಿತ್ತು. ಕೊನೆಯ ಹಂತದಲ್ಲಿ ಕೀಪರ್‌ ರಿಚಾ ಘೋಷ್‌ (ಸರ್ವಾಧಿಕ 33), ದೀಪ್ತಿ ಶರ್ಮ (24) ಮತ್ತು ಪೂಜಾ ವಸ್ತ್ರಾಕರ್‌ (11 ಎಸೆತಗಳಿಂದ 19 ರನ್‌) ಒಂದಿಷ್ಟು ಹೋರಾಟ ನೀಡಿದ ಪರಿಣಾಮ ತಂಡದ ಮೊತ್ತ ನೂರಿಪ್ಪತ್ತರ ಗಡಿ ದಾಟಿತು.

ಸಂಕ್ಷಿಪ್ತ ಸ್ಕೋರ್‌: ಭಾರತ-8 ವಿಕೆಟಿಗೆ 122 (ರಿಚಾ ಘೋಷ್‌ ಔಟಾಗದೆ 33, ದೀಪ್ತಿ ಶರ್ಮ 24, ಪೂಜಾ ವಸ್ತ್ರಾಕರ್‌ ಔಟಾಗದೆ 19, ಸೋಫಿ 25ಕ್ಕೆ 3, ಸಾರಾ ಗ್ಲೆನ್‌ 11ಕ್ಕೆ 2). ಇಂಗ್ಲೆಂಡ್‌-18.2 ಓವರ್‌ಗಳಲ್ಲಿ 3 ವಿಕೆಟಿಗೆ 126 (ಸೋಫಿಯಾ ಡಂಕ್ಲಿ 49, ಅಲೈಸ್‌ ಕ್ಯಾಪ್ಸಿ ಔಟಾಗದೆ 38, ಡೇನಿಯಲ್‌ ವ್ಯಾಟ್‌ 22, ರಾಧಾ ಯಾದವ್‌ 14ಕ್ಕೆ 1, ಪೂಜಾ ವಸ್ತ್ರಾಕರ್‌ 16ಕ್ಕೆ 1, ಸ್ನೇಹ್‌ ರಾಣಾ 32ಕ್ಕೆ 1).

ಪಂದ್ಯಶ್ರೇಷ್ಠ: ಸೋಫಿ
ಸರಣಿಶ್ರೇಷ್ಠ: ಸೋಫಿಯಾ ಡಂಕ್ಲಿ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.