ದೇಸಿ ಕರಡಿ ನಾಯಿಗೂ ತಳಿ ಸ್ಥಾನಮಾನ


Team Udayavani, Sep 19, 2022, 1:10 PM IST

13

ಧಾರವಾಡ: ಆಕಾರ, ಕೇಶ ವಿನ್ಯಾಸಗಳಿಂದಲೇ ಗಮನ ಸೆಳೆಯುವ ವಿದೇಶಿ ತಳಿಯ ಶ್ವಾನಪ್ರಿಯರಿಗೊಂದು ಖುಷಿ ಸುದ್ದಿ. ವಿದೇಶಿ ತಳಿಗಳಿಗೆ ಪೈಪೋಟಿ ನೀಡುವಂತಹ ದೇಸಿ ತಳಿಯೊಂದನ್ನು ಕೃಷಿ ವಿವಿ ಗುರುತಿಸಿದೆ.

ಕೃಷಿ ಮೇಳದ ಜಾನುವಾರು ಪ್ರದರ್ಶನದಲ್ಲಿ ರವಿವಾರ ನಡೆದ ಶ್ವಾನ ಪ್ರದರ್ಶನದಲ್ಲಿ ಬಲು ಅಪರೂಪದ ಈ ವಿಶಿಷ್ಟ ತಳಿಯ ಶ್ವಾನಗಳೆರಡು ಪ್ರದರ್ಶನಗೊಂಡಿದೆ. ಕುರಿಗಾಹಿಗಳಿಂದ ಆಡು ಭಾಷೆಯಲ್ಲಿ ಕಡ್ಡಿ ನಾಯಿಯೆಂದು ಕರೆಯುವ ಈ ತಳಿಯ ಶ್ವಾನವನ್ನು “ಕರಡಿ ನಾಯಿ’ಯನ್ನಾಗಿ ಕೃಷಿ ವಿವಿ ಗುರುತಿಸಿದ್ದು, ಈ ತಳಿಯ ಮರಿ ಹಾಗೂ ಪ್ರೌಢಾವಸ್ಥೆಯ ಎರಡು ಶ್ವಾನಗಳು ಇದೀಗ ಪ್ರದರ್ಶನದಲ್ಲಿ ಗಮನ ಸೆಳೆದವು.

ಉತ್ತರ ಕರ್ನಾಟಕ ಭಾಗದಲ್ಲಿ ಅಷ್ಟೇ ಕಾಣಸಿಗುವ ಬಲು ಅಪರೂಪದ ತಳಿ ಇದಾಗಿದೆ. ಅದರಲ್ಲೂ ಕುರಿ-ಮೇಕೆ ಮೇಯಿಸಿಕೊಂಡು ಸಂಚಾರ ಮಾಡುವ ಕುರಿಗಾಹಿಗಳ ಬಳಿಯಷ್ಟೇ ಸಿಗುವ ಅಪರೂಪದ ವಿಶಿಷ್ಟ ತಳಿಯ ಶ್ವಾನವಿದು. ಇದಲ್ಲದೇ ಕುರಿ ಕಾಯುವ ಕೆಲಸ ಮಾಡುವ ಈ ಶ್ವಾನ ಕುರಿಗಾಹಿಗಳಿಗೆ ಅಚ್ಚುಮೆಚ್ಚು.

ತಳಿ ಸ್ಥಾನಮಾನ: ಹೆಸರಿಗೆ ತಕ್ಕಂತೆ ಕರಡಿಯಂತೆ ಮೈತುಂಬ ಕೇಶರಾಶಿಯಿಂದಲೇ ಗಮನ ಸೆಳೆಯುವ ಈ ಶ್ವಾನ ತಳಿಯ ಬಗ್ಗೆ ಸಂಶೋಧನೆ ಕೈಗೊಳ್ಳಲು ಕೃಷಿ ವಿವಿ ಮುಂದಾಗಿದೆ. ಈ ತಳಿಯ ವೈಶಿಷ್ಟ್ಯತೆ, ಜೀವನ ಕ್ರಮದ ಶೈಲಿ, ಗುಣಲಕ್ಷಣಗಳ ಬಗ್ಗೆ ಕೆಲವೊಂದಿಷ್ಟು ಅಧ್ಯಯನ ಕೈಗೊಂಡು, ತಳಿಯ ಸ್ಥಾನಮಾನ ಸಿಗುವಂತೆ ಮಾಡಲು ಸಂಶೋಧನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.

ಇದಕ್ಕೆ ಅನುದಾನ ದೊರೆತ ಕೂಡಲೇ ಸಂಶೋಧನಾ ಕಾರ್ಯ ಆದಷ್ಟು ಆರಂಭಗೊಳ್ಳಲಿದೆ. ಈ ಅಧ್ಯಯನ ಕೈಗೊಂಡು ಅರ್ಜಿ ಸಲ್ಲಿಸಿದಾಗ ಈ ಶ್ವಾನಕ್ಕೂ ತಳಿಯ ಸ್ಥಾನಮಾನ ಸಿಗಲಿದೆ. ಈಗಾಗಲೇ ಮುಧೋಳ ನಾಯಿಗೆ ತಳಿ ಸ್ಥಾನ ಸಿಕ್ಕಿದ್ದು, ಧಾರವಾಡ ಕೃಷಿ ವಿವಿಯಿಂದ ಧಾರವಾಡ ಎಮ್ಮೆಗೂ ತಳಿಯ ಸ್ಥಾನಮಾನ ಲಭಿಸಿದೆ. ಇದೀಗ ದೇಸಿ ತಳಿಯಾದ ಬಲು ಅಪರೂಪದ ಕರಡಿ ನಾಯಿಗೂ ತಳಿಯ ಸ್ಥಾನಮಾನ ಸಿಗುವ ಕಾಲ ಕೂಡಿಬಂದಂತಾಗಿದೆ.

ಕುರಿಗಾಹಿಗಳ ಬಳಿಯಷ್ಟೇ ಸಿಗುವ ಅಪರೂಪದ ಕರಡಿ ನಾಯಿಗೆ ತಳಿಯ ಸ್ಥಾನಮಾನ ಸಿಗುವಂತೆ ಮಾಡಲು ಗುರುತಿಸಲಾಗಿದೆ. ಅದಕ್ಕಾಗಿ ಸಂಶೋಧನಾ ಕಾರ್ಯಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದಷ್ಟು ಬೇಗ ಇದಕ್ಕೂ ತಳಿಯ ಸ್ಥಾನಮಾನ ಸಿಗಲಿದೆ. -ಡಾ| ಅನಿಲ್‌ಕುಮಾರ ಪಾಟೀಲ, ಮುಖ್ಯಸ್ಥರು, ಪಶು ವೈದ್ಯಕೀಯ ಆಸ್ಪತ್ರೆ, ಕೃಷಿ ವಿವಿ, ಧಾರವಾಡ

ಶಶಿಧರ್‌ ಬುದ್ನಿ

ಟಾಪ್ ನ್ಯೂಸ್

Vijayapura; ಯತ್ನಾಳಗೆ ರಾಜಕೀಯ ಅಧಿಕಾರ ತಪ್ಪಿಸುವಲ್ಲಿ ಜಿಗಜಿಣಗಿ ಕೈವಾಡ: ಬಳ್ಳೊಳ್ಳಿ ಆರೋಪ

Vijayapura; ಯತ್ನಾಳಗೆ ರಾಜಕೀಯ ಅಧಿಕಾರ ತಪ್ಪಿಸುವಲ್ಲಿ ಜಿಗಜಿಣಗಿ ಕೈವಾಡ: ಬಳ್ಳೊಳ್ಳಿ ಆರೋಪ

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

panchamsali

Vijayapura; ಶನಿವಾರ ಇಂಚಗೇರಿಯಲ್ಲಿ ಪಂಚಮಸಾಲಿ ಸಮಾವೇಶ; ಕಾಂಗ್ರೆಸ್‌ಗೆ ಬೆಂಬಲ ಎಂದ ನಾಯಕರು

Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ

Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ

ಇನ್ನು 24 ಗಂಟೆಗಳಲ್ಲಿ ಅಮೇಥಿ, ರಾಯ್‌ಬರೇಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಪ್ರಕಟ…

LS Polls: ಇನ್ನು 24 ಗಂಟೆಯಲ್ಲಿ ಅಮೇಥಿ, ರಾಯ್‌ಬರೇಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಫೈನಲ್

LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ

LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-uv-fusion

Life Lesson: ಜಾತ್ರೆಯಲ್ಲಿ ಸಿಕ್ಕಾಕೆ ಕಲಿಸಿದ ಪಾಠ

Vijayapura; ಯತ್ನಾಳಗೆ ರಾಜಕೀಯ ಅಧಿಕಾರ ತಪ್ಪಿಸುವಲ್ಲಿ ಜಿಗಜಿಣಗಿ ಕೈವಾಡ: ಬಳ್ಳೊಳ್ಳಿ ಆರೋಪ

Vijayapura; ಯತ್ನಾಳಗೆ ರಾಜಕೀಯ ಅಧಿಕಾರ ತಪ್ಪಿಸುವಲ್ಲಿ ಜಿಗಜಿಣಗಿ ಕೈವಾಡ: ಬಳ್ಳೊಳ್ಳಿ ಆರೋಪ

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

2-uv-fusion

UV Fusion: ಸದ್ಗತಿಯ ಹಾದಿಯಲ್ಲಿ ನೆಮ್ಮದಿಯ ಹಾಸು

ಕೊಳವೆ ಬಾವಿ ಕೊರೆಯಲು ಹೆಚ್ಚಿದ ಬೇಡಿಕೆ; ನದಿಗಳ ಒಡಲು ಬರಿದು

ಕೊಳವೆ ಬಾವಿ ಕೊರೆಯಲು ಹೆಚ್ಚಿದ ಬೇಡಿಕೆ; ನದಿಗಳ ಒಡಲು ಬರಿದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.