ತಮ್ಮನಿಗೆ ಚಾಕುವಿನಿಂದ ಇರಿದ ಅಣ್ಣ
Team Udayavani, Oct 6, 2022, 9:49 AM IST
ಹುಬ್ಬಳ್ಳಿ: ಚಿನ್ನದ ವಿಚಾರವಾಗಿ ಸಹೋದರರ ನಡುವೆ ಜಗಳವುಂಟಾಗಿ ವಿಕೋಪಕ್ಕೆ ಹೋಗಿ ತಮ್ಮನಿಗೆ ಅಣ್ಣ ಚಾಕುವಿನಿಂದ ಇರಿದು ಮಾರಣಾಂತಿಕ ಗಾಯಗೊಳಿಸಿದ ಘಟನೆ ವಿಜಯದಶಮಿ ದಿನವಾದ ಬುಧವಾರ ಬೆಳಗ್ಗೆ ಇಲ್ಲಿನ ಕೇಶ್ವಾಪುರ ಪಾರಸವಾಡಿಯ ವಿನಾಯಕ ಕಾಲೋನಿಯಲ್ಲಿ ನಡೆದಿದೆ.
ಘಟನೆಯಲ್ಲಿ ಸಾಗರ ಬಾಕಳೆ ಗಂಭೀರ ಗಾಯಗೊಂಡಿದ್ದು, ಸಂಜಯ ಎಂಬುವರೆ ಹಲ್ಲೆ ಮಾಡಿದವರು. ಸಾಗರ ಮನೆಯಲ್ಲಿದ್ದ ಚಿನ್ನವನ್ನು ಸಂಜಯ ತೆಗೆದುಕೊಂಡು ಹೋಗಿದ್ದ. ಪೂಜೆ ಸಲುವಾಗಿ ಅದನ್ನು ಕೇಳಲೆಂದು ತಂದೆಯೊಂದಿಗೆ ಅಣ್ಣನ ಮನೆಗೆ ಸಾಗರ ಹೋದಾಗ ಇಬ್ಬರ ನಡುವೆ ಜಗಳವಾಗಿದೆ.
ಅದು ವಿಕೋಪಕ್ಕೆ ಹೋದಾಗ ಸಾಗರ ಬಿಯರ್ನ ಖಾಲಿ ಬಾಟಲಿಯಿಂದ ಅಣ್ಣನಿಗೆ ಹೊಡೆದಿದ್ದಾನೆ. ಆಗ ಸಿಟ್ಟಾದವನೇ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಸಾಗರನ ಎದೆ-ಹೊಟ್ಟೆಗೆ ಇರಿದಿದ್ದು, ಗಂಭೀರ ಗಾಯಗೊಂಡಿರುವ ಸಾಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇವರ ನಡುವೆ ಆಸ್ತಿ ವಿಷಯವಾಗಿಯೂ ತಕರಾರು ಇದೆ.
ಘಟನೆಗೆ ಸಂಬಂಧಿಸಿ ಸಂಜಯನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ