ಬಾಳೆಕಂದು ಕಡಿದು ನವರಾತ್ರಿ ಉತ್ಸವಕ್ಕೆ ತೆರೆ

ಬನ್ನಿ ಕಡಿದು ಸಂಭ್ರಮಕ್ಕೆ ತೆರೆ ಎಳೆದ ನರಸಿಂಹರಾಜ ಅರಸ್‌ ; ಶುಭಾಶಯ ಕೋರಿದ ಶಾಸಕ ಪ್ರೀತಂ

Team Udayavani, Oct 6, 2022, 2:15 PM IST

18

ಹಾಸನ: ವಿಜಯ ದಶಮಿ ಹಬ್ಬದ ಅಂಗವಾಗಿ ಕೊನೆಯ ದಿವಸ ಬುಧವಾರದಂದು ಸಂಜೆ ಶಾಸಕರಾದ ಪ್ರೀತಂ ಜೆ. ಗೌಡರ ಸಮ್ಮುಖದಲ್ಲಿ ನರಸಿಂಹರಾಜ ಅರಸ್‌ ಅವರು ಬಾಳೆಕಂದು ಕಡಿಯುವ ಮೂಲಕ 9 ದಿವಸಗಳ ನವರಾತ್ರಿಗೆ ವಿರಾಮ ಹೇಳಿದರು.

ಪ್ರತಿ ವರ್ಷ ಮೈಲಾರಲಿಂಗೇಶ್ವರ, ಚನ್ನಕೇಶವ, ವಿರೂಪಾಕ್ಷ, ಆಂಜನೇಯ ಸ್ವಾಮಿ ಹಾಗೂ ಸಿದ್ಧೇಶ್ವರ ದೇವರನ್ನು ಹಾಸನಾಂಬೆ ವೃತ್ತದಿಂದ ಮೆರವಣಿಗೆ ಮೂಲಕ ವಿವಿಧ ಬೀದಿಗಳಲ್ಲಿ ಬಂದು ನಂತರ ನಗರದ ಸಾಲಗಾಮೆ ರಸ್ತೆ ಬಳಿ ಇತಿಹಾಸವುಳ್ಳ ಬನ್ನಿ ಮಂಟ ಪಕ್ಕೆ ಕರೆತರಲಾಗುತಿತ್ತು. ಕಳೆದ ಎರಡು ವರ್ಷ ಕೊರೊನಾ ಇದ್ದುದರಿಂದ ಟ್ರ್ಯಾಕ್ಟರ್‌ ಮೂಲಕ ದೇವರನ್ನು ತರಲಾಗಿತ್ತು. ಆದರೇ, ಈಗ ಟ್ರ್ಯಾಕ್ಟರ್‌ ಮೂಲಕ ದೇವರನ್ನು ತರುವುದು ಬೇಡ ಎಂದು ಶ್ರೀ ನೀರು ಬಾಗಿಲು ಆಂಜನೇಯ ದೇವರು ಹಾಗೂ ಶ್ರೀ ಸಿದ್ಧೇಶ್ವರ ದೇವರನ್ನು ಟ್ರ್ಯಾಕ್ಟರ್‌ ಮೂಲಕ ಕೊಂಡೂಯ್ಯಲು ವಿರೋಧ ವ್ಯಕ್ತಪಡಿಸಿ ಹೆಗಲ ಮೇಲೆ ಹೊತ್ತುಕೊಂಡು ತಂದ ಪ್ರಸಂಗ ನಡೆಯಿತು.

ಸರಳ ಆಚರಣೆಗೆ ಖಂಡನೆ: ಸರಕಾರದ ನಿಧಿಯಿಂದ ಈ ಕಾರ್ಯಕ್ರಮಕ್ಕೆ ಹಣವಿದ್ರೂ ಕೂಡ ಯಾವ ಸಂಭ್ರಮದಿಂದ ದಸರಾ ಆಚರಿಸದೇ ಸರಳವಾಗಿ ಮಾಡುತ್ತಿರುವುದಕ್ಕೆ ಖಂಡನೆ ವ್ಯಕ್ತಪಡಿಸಿದರು. ಮುಂದಿನ ವರ್ಷದಲ್ಲಿ ಈ ರೀತಿ ಆಗದಂತೆ ನಿಗಾ ವಹಿಸಲು ಕೋರಿದರು. ಕ್ಷೇತ್ರದ ಶಾಸಕರಾದ ಪ್ರೀತಮ್‌ ಜೆ. ಗೌಡರು ಆಗಮಿಸಿ ಬಾಳೆಕಂದು ಕಡೆಯುವ ದೃಶ್ಯವನ್ನು ಕಣ್ತುಂಬಿಕೊಂಡರು.

ಉತ್ಸವಕ್ಕೆ ವಿಧ್ಯುಕ್ತ ತೆರೆ: ಐದು ದೇವರನ್ನು ಮೆರವಣಿಗೆ ಮೂಲಕ ಬನ್ನಿ ಮಂಟಪಕ್ಕೆ ತಂದು ಪೂಜೆ ಸಲ್ಲಿಸಿ ಬಾಳೆಕಂದು ಕಡಿಯವ ಮೂಲಕ 9 ದಿವಸಗಳ ನವರಾತ್ರಿ ಹಬ್ಬಕ್ಕೆ ವಿರಾಮ ಹೇಳಿದರು. ಮೆರವಣಿಗೆ ವೇಳೆ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಪೊಲೀಸರು ಸುಗಮ ಸಂಚಾರ ಮಾಡಿ ಕೊಟ್ಟು ನಿಯಂತ್ರಿಸಿದರು. ದೇವರ ಉತ್ಸವದ ಅಡ್ಡಪಲ್ಲಕ್ಕಿ ಮನೆ ಮುಂದೆ ಬರುತ್ತದೆ ಎಂದು ನಿವಾಸಿಗಳು, ರಸ್ತೆಗೆ ನೀರು ಹಾಕಿ ರಂಗೋಲಿಯಿಂದ ಸಿಂಗಾರ ಮಾಡಿದ್ದರು.

ಬನ್ನಿ ಕಡೆಯುವ ಸಂಪ್ರದಾಯ ಪಾಲನೆ: ನರಸಿಂಹರಾಜ ಅರಸ್‌ ಕಳೆದ 32 ವರ್ಷಗಳಿಂದಲೂ ಬನ್ನಿ ಕಡೆಯುವ ಸಂಪ್ರದಾಯ ಬೆಳೆಸಿಕೊಂಡು ಬಂದಿದ್ದು, ಈ ದೇವರ ಉತ್ಸಹದ ಮೂಲಕವೇ ನವರಾತ್ರಿ ವಿಜಯ ದಶಮಿ ಹಬ್ಬದ ಕೊನೆಯ ದಿನವನ್ನು ಬನ್ನಿ ಕಡಿಸುವ ಮೂಲಕ ಅಂತ್ಯಗೊಳಿಸುವುದು ಹಿಂದಿನಿಂದಲೂ ನಡೆಸಿಕೊಂಡು ಬರಲಾಗಿದೆ. ಬನ್ನಿ ಕಡಿಯುವ ಅರಸ್‌ ಕಳೆದ ಮೂರು ದಿವಸಗಳಿಂದ ಉಪವಾಸವಿದ್ದು, ಖಡ್ಗಕ್ಕೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸುತ್ತಾರೆ. ನವರಾತ್ರಿ 9 ದಿನ ಮುಗಿದ ಮೇಲೆ ಆಯುಧ ಪೂಜೆ ನಡೆದು ಮಾರನೆ ದಿವಸ ಬನ್ನಿ ಕಡಿಯುವ ಸಂಪ್ರದಾಯ ನಡೆಸಿಕೊಂಡು ಬಂದಿದ್ದಾರೆ. ಪೂಜೆ ಕೊನೆಯಲ್ಲಿ ಬನ್ನಿ ಕಡಿದ ಮೇಲೆ ಬಾಳೆ ಎಲೆ ಮತ್ತು ಬನಿ ಎಲೆ ಪಡೆಯಲು ಜನ ಮುಗಿ ಬಿದಿದ್ದರು.

ಶಾಸಕರ ಭರವಸೆ: ನರಸಿಂಹರಾಜ ಅರಸು ಅವರು ಬಹುವರ್ಷದಿಂದ ನಗರಸಭೆ ವ್ಯಾಪ್ತಿಯಲ್ಲಿ ನಿವೇಶ ನಕ್ಕೆ ಬೇಡಿಕೆಯಿಟ್ಟಿದ್ದರು. ಆ ಬೇಡಿಕೆ ಪರಿಗಣಿಸಿದ ಕ್ಷೇತ್ರದ ಶಾಸಕರು ನಿವೇಶನ, ಮನೆ ಕೊಡುವುದಾಗಿ ಭರವಸೆ ನೀಡಿದ್ದಾರೆ. ಇದು ಸಂತಸ ತಂದಿದೆ ಎಂದು ತಿಳಿಸಿದರು.

ಶಾಸಕರಿಂದ ಹಬ್ಬದ ಶುಭಾಶಯ: ಕ್ಷೇತ್ರದ ಶಾಸಕರಾದ ಪ್ರೀತಂ ಜೆ. ಗೌಡರು ಮಾತನಾಡಿ, ನಗರ ಮತ್ತು ಜಿಲ್ಲೆಯ ಜನತೆಗೆ ವಿಜಯದಶಮಿ ಶುಭಾಶಯಗಳನ್ನು ಮೊದಲು ಹೇಳುತ್ತೇನೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಸಿದ್ಧೇಶ್ವರ ದೇಗುಲದ ಕುಟುಂಬ ವರ್ಗವು ಹಲವಾರು ದಶಕಗಳಿಂದ ಈ ಉತ್ಸವ ಮಾಡಿಕೊಂಡು ಬರುತ್ತಿದೆ. ಇಂದು ಬನ್ನಿ ಕಡಿಯುವ ಮೂಲಕ ವಿಧ್ಯುಕ್ತವಾಗಿ 9 ದಿನಗಳ ವಿಜಯದಶಮಿಗೆ ತೆರೆ ಎಳೆದಿದ್ದಾರೆ ಎಂದರು. ಹಲವಾರು ದಶಕಗಳಿಂದ ಈ ಪೂಜಾ ಕಾರ್ಯ ನಡೆಸಿಕೊಂಡು ಬರಲಾಗುತ್ತಿದೆ. ಅವರಿಗೆ ದೇವರು ಶಕ್ತಿ ಕೊಟ್ಟು ಹಾಸನದ ಜನತೆಗೆ ಒಳಿತನ್ನು ಬಯಸಿ ಪೂಜೆ ಸಲ್ಲಿಸಿ ದ್ದಾರೆ. ಬಾಳೆಕಂದು ಕಡೆಯುವ ನರಸಿಂಹರಾಜ್‌ ಅರಸು ಅವರು ನಿವೇಶನಕ್ಕಾಗಿ ಬೇಡಿಕೆ ಇಟ್ಟಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಸಕರು ಸಮರ್ಪಕ ಉತ್ತರ ಕೊಡದೇ ಮಾತಿಗೆ ವಿರಾಮ ಹೇಳಿ ತೆರೆಳಿದರು.

 

ಟಾಪ್ ನ್ಯೂಸ್

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.