ಕಸ ವಿಲೇವಾರಿಗೆ ಜಾಗದ ಸಮಸ್ಯೆ
ಮಾರುಕಟ್ಟೆ, ಪಟ್ಟಣ ಪಂಚಾಯತ್ನ ಎದುರೇ ರಾಶಿ ಬಿದ್ದ ಕಸ
Team Udayavani, Oct 14, 2022, 2:11 PM IST
ಬಜಪೆ: ಬಜಪೆ ಪಟ್ಟಣ ಪಂಚಾಯತ್ಗೆ ಕಸವಿಲೇವಾರಿಯೇ ಒಂದು ದೊಡ್ಡ ಸಮಸ್ಯೆ. ಸ್ಥಳದ ಸಮಸ್ಯೆಯಿಂದಾಗಿ ಎಲ್ಲ ವ್ಯವಸ್ಥೆಗಳಿಗೆ ತೊಡಕಾಗಿದೆ. ತ್ಯಾಜ್ಯ ಘಟಕಕ್ಕೆ ಕೆಂಜಾರಿ ನಲ್ಲಿ ಜಾಗ ಕಾಯ್ದಿರಿಸಿದ್ದು ಆದರೆ ಈಗ ಖಾಸಗಿ ಜಾಗ ಎಂಬ ವಿರೋಧವಿದೆ. ಮೂರು ಕಡೆಗಳಲ್ಲಿ ತ್ಯಾಜ್ಯ ವಿಲೇ ವಾರಿ ಘಟಕಕ್ಕೆ ಜಾಗ ಪರಿಶೀಲನೆ ಮಾಡ ಲಾಗಿದೆ. ಯಾವುದೇ ಅಂತಿಮ ಹಂತ ತಲುಪಿಲ್ಲ. ತ್ಯಾಜ್ಯ ಘಟಕ ವಾಗದೇ ಇಲ್ಲಿ ಸಮಸ್ಯೆ ತೀರದು. ಶೀಘ್ರ ಘಟಕ ನಿರ್ಮಾಣವಾಗಬೇಕಾಗಿದ್ದು, ಇಲ್ಲದಿದ್ದಲ್ಲಿ ರಸ್ತೆಯಲ್ಲಿಯೇ ತ್ಯಾಜ್ಯ ಸಂಗ್ರಹವಾಗುವ ಸಾಧತ್ಯೆಗಳಿವೆ.
ಸೆ. 1ರಿಂದ ಟಿಪ್ ಸೆಶೆನ್ಸ್ ಎಂಬ ಕುಂದಾಪುರ ಕಂಪೆನಿ ಯೊಂದು ಬಜಪೆ ಪಟ್ಟಣ ಪಂಚಾ ಯತ್ನ ತ್ಯಾಜ್ಯ ವಿಲೇವಾರಿಯನ್ನು ವಹಿಸಿಕೊಂಡಿತ್ತು. ಕಸವಿಲೇವಾರಿಗೆ ಬಜಪೆ ಪಟ್ಟಣ ಪಂಚಾಯತ್ ದೊಡ್ಡ ವಾಹನ ಹಾಗೂ ಜಾಗದ ವ್ಯವಸ್ಥೆಯನ್ನು ನೀಡುವ ಭರವಸೆಯಿಂದ ಈ ಸಂಸ್ಥೆ ತ್ಯಾಜ್ಯ ವಿಲೇವಾರಿಗೆ ಮುಂದಾಗಿತ್ತು.
ಒಣ ಕಸ ವಿಲೇವಾರಿ
ಒಟ್ಟು 6 ಮಂದಿ ಟಿಪ್ ಸೆಶನ್ನ ಸಿಬಂದಿ ದಿನ ಒಣ ಕಸವನ್ನು ಬೇರ್ಪಡಿಸಿ ಈಗಾಗಲೇ ಒಂದು ಲೋಡ್ನಷ್ಟು ಒಣ ಕಸ ವಿಲೇವಾರಿ ಮಾಡಿತ್ತು. ಮಾರುಕಟ್ಟೆಯ ಹಸಿ ಕಸಗಳನ್ನು ಪಟ್ಟಣ ಪಂಚಾಯತ್ ಸಮೀಪದಲ್ಲಿಯೇ ಇರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಹಾಕಲಾಗಿತ್ತು. ಈಗ ಅದು ತುಂಬಿದೆ.
ಇತ್ತ ಹಸಿ ಕಸ ವಿಲೇವಾರಿಗೆ ಜಾಗದ ಸಮಸ್ಯೆಯಾಗಿದ್ದು ಹಸಿಕಸ ವಿಲೇವಾರಿಯಾಗದೇ ಕೈಕಟ್ಟಿ ಕುಳಿತು ಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಬಜಪೆ ಪಟ್ಟಣ ಪಂಚಾಯತ್ ಇದೆ. ಪಟ್ಟಣ ಪಂಚಾಯತ್ ಎದುರು, ಮಾರುಕಟ್ಟೆ ಒಳಗೆ ಒಂದು ವಾರದಿಂದ ಹಸಿ ಹಾಗೂ ಒಣ ಕಸದ ರಾಶಿ ಬಿದ್ದಿದೆ. ವಿಲೇವಾರಿಯಾಗದೆ ದುರ್ನಾತ ಬೀರುತ್ತಿದೆ. ಹಸಿಕಸ ಹಾಗೂ ಒಣ ಕಸ ಒಟ್ಟಿಗೆ ಹಾಕಿದ ಕಾರಣ ಇದರ ವಿಂಗಡಣೆ ಬಹಳ ಕಷ್ಟವಾಗಿದೆ.ಇಲ್ಲದಿದ್ದಲ್ಲಿ ಒಣ ಕಸವಾದರೂ ವಿಲೇವಾರಿಯಾಗುತ್ತಿತ್ತು.
ಹಸಿ ಹಾಗೂ ಒಣ ಕಸ ಬೇರೆ ಬೇರೆಯಾಗಿ ಕೊಟ್ಟಲ್ಲಿ ಒಣ ಕಸದ ವಿಲೇವಾರಿಯಾದರೂ ಆಗುತ್ತದೆ. ಕಸ ವಿಲೇವಾರಿಗೆ ಶೀಘ್ರ ಬಜಪೆ ಪಟ್ಟಣ ಪಂಚಾಯತ್ಗೆ ಜಾಗವನ್ನು ತುರ್ತಾಗಿ ಕಾಯ್ದಿರಿಸಿ,ಅಲ್ಲಿ ಘಟಕ ನಿರ್ಮಾಣ ವಾಗಲೆಬೇಕಾಗಿದೆ. ಬೆಳೆಯುತ್ತಿರುವ ಬಜಪೆ ಪಟ್ಟಣ ಪಂಚಾಯತ್ಗೆ ತ್ಯಾಜ್ಯ ವಿಲೇವಾರಿ ಘಟಕ ಆವಶ್ಯಕತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ
Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ
ಇನ್ಸ್ಪೆಕ್ಟರ್ ಹೆಸರಲ್ಲಿ ಸುಲಿಗೆ: ಬೆಸ್ಕಾಂ ಎಂಜಿನಿಯರ್ ಸೆರೆ
Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ
Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್ ಮಹಲ್ ಪ್ರತಿಸ್ಪರ್ಧಿ