ಶಿರಸಿ: ಕೋಲಾರದಲ್ಲಿ ಶತಾಯುಷಿಗಳ ಸಂಖ್ಯೆ ಕಂಡು ಅಚ್ಚರಿ ಬಿಚ್ಚಿಟ್ಟ ಸ್ಪೀಕರ್!
Team Udayavani, Oct 18, 2022, 2:13 PM IST
ಶಿರಸಿ: ಚುನಾವಣಾ ಸುಧಾರಣೆಯ ಕುರಿತು ರಾಜ್ಯದಾದ್ಯಂತ ಜಾಗೃತಿ ಮಾಡಿಸುತ್ತಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಕೋಲಾರದಲ್ಲಿ ನಡೆದ ಸಭೆಯೊಂದರಲ್ಲಿ ಗಮನಕ್ಕೆ ಬಂದ ಸ್ವಾರಸ್ಯಕರ ಹಾಗೂ ಅಚ್ಚರಿಯ ಘಟನೆಯೊಂದನ್ನು ಶಿರಸಿಯಲ್ಲಿ ಬಿಚ್ಚಿಟ್ಟರು.
ಶಿರಸಿಯಲ್ಲಿ ಮಂಗಳವಾರ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಕೋಲಾರದ ಸಭೆಯ ಘಟನೆ ಉದಾಹರಣೆ ನೀಡಿ ಮಾತನಾಡಿದರು.
ಕೋಲಾರದಲ್ಲಿ ಹೋದಾಗ ಅಲ್ಲಿನ ಜಿಲ್ಲಾಧಿಕಾರಿಗಳು ಶತಮಾನ ಕಂಡ ಇಬ್ಬರು ಮತದಾರರನ್ನು ಸಮ್ಮಾನಿಸಲು ಆ ಸಭೆಗೇ ಆಹ್ವಾನಿಸಿದ್ದರು. ಸಮ್ಮಾನ ಮಾಡುವಾಗ ಶತಮಾನ ಕಂಡ ಎಷ್ಟು ಮತದಾರರು ಜಿಲ್ಲೆಯಲ್ಲಿ ಇದ್ದಾರೆ ಎಂದು ಕೇಳಿದೆ. 400 ಮಂದಿ ಇದ್ದಾರೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಇಷ್ಟು ಆಯಸ್ಸು ಇರುವ ಜನರಿರಲು ನಿತ್ಯ ಕೆಲಸ, ಮನೆ ಊಟ, ಶ್ರಮದ ಜೀವನ, ಹಳ್ಳಿ ಜೀವನ ಕಾರಣ ಎಂದು ಡಿಸಿ ಹೇಳಿದರು. ನನಗೂ ಅಚ್ಚರಿ ಆಯಿತು, ಸಭೆಯಲ್ಲೇ ಶಿರಸಿಯಲ್ಲೂ ಹೇಳುವೆ ಈ ಘಟನೆ ಎಂದಿದ್ದೆ ಎಂದರು.
ಶಿರಸಿಯಲ್ಲಿ ಎಷ್ಟು ಜನ ಶತಾಯುಶಿಗಳು ಎಂದು ಪಕ್ಕದಲ್ಲಿದ್ದ ಸಹಾಯಕ ಆಯುಕ್ತ ಆರ್.ದೇವರಾಜು ಕೇಳಿದಾಗ ನಾಲ್ಕು ತಾಲೂಕಿನಿಂದ ಎಂಟು ಜನರ ಯಾದಿ ಸಿಕ್ಕಿದೆ ಎಂದರು. ಅಲ್ಲಿ ಶತಾಯುಶಿಗಳ ಸಂಖ್ಯೆ ಎಷ್ಟು ಹೆಚ್ಚಿದೆ, ಖುಷಿಯಾಗುತ್ತದೆ ಕೇಳಿ ಎಂದೂ ಸ್ಪೀಕರ್ ಹೇಳಿದರು.
ಬಡವ, ಶ್ರೀಮಂತ ಇದ್ದರೂ ನಿತ್ಯ ಶ್ರಮವಹಿಸಿ ಕಾಯಕ, ಮನೆ ಊಟ ಮಾಡಿದರೆ ಆರೋಗ್ಯ ಚೆನ್ನಾಗಿರುತ್ತದೆ ಎಂಬುದು ಇದು ಸಾಕ್ಷಿ ಎನ್ನಬಹುದು ಎಂದು ಸಭೆಯಲ್ಲಿದ್ದ ಡಾ. ಗಜಾನನ ಭಟ್ಟ, ಡಾ. ವಿನಾಯಕ ಕಣ್ಣಿ ಪ್ರತಿಕ್ರಿಯೆ ನೀಡಿದರು. ಅಂದರೆ ನಾವು ಶತಾಯುಶಿಗಳಾಗಬೇಕು ಎಂದರೆ ಏನು ಮಾಡಬೇಕು ಎಂಬುದು ಗೊತ್ತಾಯ್ತಲ್ಲ ಎಂದೂ ಕಾಗೇರಿ ಪ್ರತಿಕ್ರಿಯೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
MUST WATCH
ಹೊಸ ಸೇರ್ಪಡೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ