ಪ್ರೀತಿ-ಪ್ರೇಮ ಬದುಕಿನ ಅಡಿಪಾಯವಾಗಲಿ 


Team Udayavani, Nov 18, 2022, 6:10 AM IST

tdy-37

ಪ್ರೀತಿ, ಪ್ರೇಮ ಎಂಬ ಎರಡು ಪುಟ್ಟ ಪುಟ್ಟ ಸರಳ ಪದಗಳು. ಆಲಿಸಲೂ ರಮ್ಯ ಶಬ್ದಗಳು. ಆದರೆ ವಿಶಾಲ ವ್ಯಾಖ್ಯಾನಕ್ಕೆ ಒಳಪಟ್ಟದ್ದು. ಪುರಾಣ, ಧರ್ಮಗ್ರಂಥ, ಲೌಕಿಕ, ಅಲೌಕಿಕ ಪ್ರಪಂಚದಲ್ಲಿ ಪ್ರೀತಿ- ಪ್ರೇಮದ ಮಹಿಮೆ ವರ್ಣಿಸಲದಳ. ಜಗತ್ತು ನಿಂತಿರುವುದೇ ಪ್ರೀತಿ-ಪ್ರೇಮದ ಸುಭದ್ರ ಪಂಚಾಗದಲ್ಲಿ. ಪ್ರೀತಿ-ಪ್ರೇಮ ವಿಹೀನ ಜೀವನ ವಿರಸ, ವೈಮನಸ್ಸಿಗೆ ಮೂಲ ಹೇತುವಾಗಿ ಪರಿಣಮಿಸುತ್ತದೆ.

ಪ್ರೀತಿ-ಪ್ರೇಮಗಳ ಹೃನ್ಮನಪೂರ್ವಕ, ಹೃನ್ಮನ ಬೆಸೆಯುವ ಅಸಂಖ್ಯಾತ ಪ್ರಸಂಗ-

ಸನ್ನಿವೇಶಗಳು ರಾಮಾಯಣ, ಮಹಾ ಭಾರತಗಳಲ್ಲಿ ಆದರ್ಶಮಯವಾಗಿವೆ, ರಾಮ-ಹನುಮರ ಪ್ರೇಮ, ಕೃಷ್ಣ-ಬಲ ರಾಮರ, ಕೃಷ್ಣ-ಕುಚೇಲರ, ರಾಮ ಮತ್ತು ತನ್ನ ಸಹೋದರರಾದ ಲಕ್ಷ್ಮಣ, ಭರತ ಮತ್ತು ಶತ್ರುಘ್ನರ ಪ್ರೀತಿ, ಯಶೋದಾ-ಕೃಷ್ಣ, ನಾರದ ಪ್ರೇಮ, ಕುಂತಿ- ಕೃಷ್ಣ,

ಗಣಪತಿಯ ತಂದೆ-ತಾಯಿ ಪ್ರೀತಿ, ದೇವರ ಮತ್ತು ಭಕ್ತರ ಈ ಪರಿಯ ಅನೇಕಾನೇಕ ಕಥಾನಕಗಳು ಹೀಗೆಲ್ಲ.

ಈ ಎಲ್ಲ ಪುರಾಣ ಕಥೆಗಳಲ್ಲಿ ಪ್ರೀತಿ-ಪ್ರೇಮದ ಮಹತ್ವ, ಅದರಲ್ಲಿರುವ ಶಕ್ತಿ, ಈ ಎರಡು ಗುಣಗಳನ್ನು ಮೈಗೂಡಿಸಿಕೊಂಡ ವ್ಯಕ್ತಿಗಳು ಜನಮನ್ನಣೆಗೆ ಪಾತ್ರವಾದುದನ್ನು ಸಾರಿ ಹೇಳುತ್ತವೆ. ಇದೇ ಪ್ರೀತಿ-ಪ್ರೇಮದ ಸಾರ.ಹಾಗೆಂದು ಈ ಪ್ರೀತಿ-ಪ್ರೇಮ ಎಲ್ಲೆಯನ್ನು ಮೀರಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದಕ್ಕೂ ಪೌರಾಣಿಕ ಮತ್ತು ಐತಿಹಾಸಿಕ ಕಥಾನಕಗಳಲ್ಲಿ ಸಾಕಷ್ಟು ನಿದರ್ಶನಗಳು ದೊರಕುತ್ತವೆ. ಯಾವೊಂದೂ ಅನುಮಾ ನಕ್ಕೂ ಆಸ್ಪದವಿಲ್ಲದಂತೆ ಕಲ್ಮಶರಹಿತ, ಶುದ್ಧ ಅಂತಃಕರಣದ ಪ್ರೀತಿ ನಮ್ಮ ಬಾಳನ್ನು ಹಸನಾಗಿಸುವುದು ನಿಶ್ಚಿತ. ಇದೇ ವೇಳೆ ಪ್ರೀತಿ-ಪ್ರೇಮದ ವಿಚಾರದಲ್ಲಿ ಎಡವಟ್ಟು ಮಾಡಿಟ್ಟುಕೊಂಡರೆ ಅದು ನಮ್ಮ ಬದುಕಿಗೇ ಕೊಳ್ಳಿ ಇಡಬಹುದು. ಇಲ್ಲಿ ನಮ್ಮ ವಿವೇಚನೆ ಪ್ರಮುಖ ಪಾತ್ರ ವಹಿಸುತ್ತದೆ.

ಭಗವಂತನ ವರಪ್ರಸಾದ ಪಡೆಯುವಲ್ಲಿ ಭಗವಂತನಲ್ಲಿ ನಾವಿಡುವ ಪ್ರೀತಿ-ಪ್ರೇಮ ಗಣನೀಯವಾಗಿ ಪರಿಗಣನೆಗೆ ಬರುತ್ತದೆ.

ಪ್ರೀತಿ-ಪ್ರೇಮ ಅಮರತ್ವದ ಪ್ರತೀಕ, ಹೊಂದಾಣಿಕೆಯ ದ್ಯೋತಕ, ನಂಬಿಕೆಯ ಮೂಲಾಧಾರ, ಸುಮನಸ್ಸಿನ ಸಂಕೇತ ವಾಗಿದ್ದು ಸ್ವಸ್ಥ ಸಮಾಜದ ಹೆಗ್ಗುರುತಾಗಿದೆ. ನಮ್ಮ ಬದುಕಿನ ಹುಟ್ಟಿನಿಂದ ಬಾಲ್ಯ, ಶೈಶಾವಸ್ಥೆ, ಯೌವ್ವನ, ಮುದಿತನದ ವಿವಿಧ ಮಜಲುಗಳಲ್ಲಿನ ಜೀವನದಲ್ಲಿ ಪ್ರೀತಿ-ಪ್ರೇಮ ಅನವರತ ರೂಪ ತಾಳಿ ಹಾಸು ಹೊಕ್ಕಾದಲ್ಲಿ ಬಾಳಿನ ದಿವ್ಯತೆ, ಭವ್ಯತೆ, ಆನಂದವೇ ಬೇರೆ ರೀತಿಯದ್ದು. ದೆೃವ ಪ್ರೇಮದಿಂದ ತಂದೆ -ತಾಯಿ, ಹಿರಿ ಯರು, ಕುಟುಂಬ, ಸಮಾಜ, ಗುರು, ಪ್ರಕೃತಿ, ಪ್ರಾಣಿ-ಪಕ್ಷಿ, ದೇಶ… ಪ್ರೇಮಗಳು ರಕ್ತಗತವಾದರೆ ಬಾಳಿನ ವ್ಯಕ್ತಿತ್ವ ಸದಾ ಭೂಷಣ ಪ್ರಾಯವಾಗಿ ಕಂಗೊಳಿಸುವುದು. ಸಾಧನೆಗೆ ಪ್ರೇರಣಾಸ್ರೋತವಾಗುವುದು.

ದ್ವೇಷ, ಕೋಪ-ತಾಪ, ವೆೃಮನಸ್ಸು, ಮತ್ಸರ,ವಿರಸ, ಬೇಸರ, ಭಿನ್ನಾಭಿಪ್ರಾಯ ಇತ್ಯಾದಿ ಗಳ ಅಂಕುಶಕ್ಕೆ ಪ್ರೀತಿ-ಪ್ರೇಮವೇ ರಾಮ ಬಾಣ. ದೆೃಹಿಕ ಆರೋಗ್ಯಕ್ಕೂ ಇವು ದಿವ್ಯ ಔಷಧ ಎಂಬುದು ಸಾಬೀತಾಗಿದೆ.

ಪಂಚಭೂತಗಳು ಸಂಗಮಿಸಿರುವ ಈ ಜಗತ್ತು ಎಂಬತ್ತು ಲಕ್ಷ ಜೀವರಾಶಿಗೂ ಸೇರಿದ್ದು. ಎಲ್ಲರಿಗೂ ಬದುಕುವ ಹಕ್ಕು, ರೀತಿ-ನೀತಿಯನ್ನು ಪ್ರಕೃತಿ ದಯಪಾಲಿಸಿದೆ. ಈ ರೀತಿ-ನೀತಿ ಪ್ರಕಾರ ಬದುಕಿದಲ್ಲಿ ಬಾಳು ಸುಗಮವಾಗುವುದು. ಆದ ಕಾರಣ ಮಾನವ-ಮಾನವರೊಂದಿಗೆ ಮಾತ್ರವಲ್ಲ ಪ್ರಕೃತಿಯೊಡಗೂಡಿ ಸಕಲ ಚರಾಚರಗಳ ಬದುಕಿಗೂ ಪ್ರೇರಕರಾಗಬೇಕು. ಸಮಗ್ರ ಪ್ರಕೃತಿಯ ಪ್ರೀತಿ- ಪ್ರೇಮ ಮಾನವನ ಬದುಕಿನ ಅವಿಚ್ಛಿನ್ನ ಭಾಗವಾಗಬೇಕು. ಹೀಗಾದಲ್ಲಿ ಮಾತ್ರ ಪ್ರಕೃತಿ ಪುರುಷ ಪ್ರೇಮ ಮುಂದುವರಿಯುವುದು.

ಇಂದು ಪ್ರಕೃತಿಯೊಂದಿಗೆ ಮಾನವನ ದುರಾಸೆ, ದುರಹಂಕಾರದ ದುಂಡಾ ವರ್ತನೆಯ ಅಟ್ಟಹಾಸ, ಬರ್ಬರತೆ ಯಿಂದಾಗಿಯೇ ಪ್ರಕೃತಿ ಮಾತೆ ಮುನಿದು ವಿವಿಧ ಅವತಾರ ತಾಳುತ್ತಿ¨ªಾಳೆ ಎಂಬ ಬೀಭತ್ಸ ಚಿತ್ರಣ ನಮ್ಮೆಲ್ಲರ ಮುಂದೆ ಪ್ರಸ್ತುತವಾಗುತ್ತಿದೆ.

ಇನ್ನು ನಮ್ಮ ಸಾಮಾಜಿಕ ಜೀವನದ ಎಲ್ಲ ದುಗುಡ, ದುಮ್ಮಾನಗಳಿಗೆ ಪ್ರಧಾನ ಕಾರಣವೇ ಪ್ರೀತಿ-ಪ್ರೇಮದ ಕೊರತೆ. ಪ್ರೀತಿ ಜಗತ್ತನ್ನೇ ಗೆಲ್ಲುವ ಸಾಮರ್ಥ್ಯ ಹೊಂದಿರುವ ಅಮೂಲ್ಯ ಅಸ್ತ್ರ. ಪ್ರೀತಿ- ಪ್ರೇಮವನ್ನು ಹೃನ್ಮನದಲ್ಲಿ ಅವಿಭಾಜ್ಯವನ್ನಾಗಿಸಿ  ಬಾಳಿನ ನಕಾರಾತ್ಮಕತೆಯನ್ನು ವ್ಯರ್ಜಿಸಿ ಬಾಳಬಂಡಿಯಲ್ಲಿ ಪಯಣಿಸಬೇಕು. ಈ ಸುಮಧುರ ಪಯಣ ಪ್ರತಿಯೋರ್ವರ ಬಾಳಿನಲ್ಲಿ ಸುವಾಸನೆ ಬೀರು ವುದು ನಿಸ್ಸಂಶಯ. ಈ ಪ್ರಯಾಣದಲ್ಲಿ ನಾವು ಭಾಗಿಯಾಗಬೇಕಾಗಿರುವುದು ನಮ್ಮ ಆದ್ಯತೆಯಾಗಬೇಕು.

- ಸಂದೀಪ್‌ ನಾಯಕ್‌ ಸುಜೀರ್‌, ಮಂಗಳೂರು

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.