ಕಾಡಾನೆಯ ರಕ್ಷಣೆಗೆ ಬಂದ ಅಡುಗೆ ಎಣ್ಣೆ, ಸಾಬೂನು ಹುಡಿ!


Team Udayavani, Nov 20, 2022, 7:50 AM IST

ಕಾಡಾನೆಯ ರಕ್ಷಣೆಗೆ ಬಂದ ಅಡುಗೆ ಎಣ್ಣೆ, ಸಾಬೂನು ಹುಡಿ!

ಮಡಿಕೇರಿ: ಬೃಹತ್‌ ಕಾಡಾನೆಯೊಂದು ಸಿಮೆಂಟ್‌ ಕಂಬಗಳ ಬೇಲಿಯ ನಡುವೆ ಸಿಲುಕಿ ಪಡಿಪಾಟಲು ಪಟ್ಟ ಘಟನೆ ತೊಂಡೂರು ಗ್ರಾಮದಲ್ಲಿ ನಡೆದಿದೆ.

ಕಾಡಾನೆಯ ರಕ್ಷಣೆಗೆ ಸನ್‌ ಪ್ಯೂರ್‌ ಆಯಿಲ್‌ ಮತ್ತು ಸಫ್ì ಬಳಸುವ ಅನಿವಾರ್ಯ ಅರಣ್ಯ ಇಲಾಖೆಗೆ ಎದುರಾಯಿತು.

ಆನೆಕಾಡು ರಕ್ಷಿತಾರಣ್ಯ ವ್ಯಾಪ್ತಿಯ ತೊಂಡೂರು ಗ್ರಾಮದಲ್ಲಿ, ಕಾಡಾನೆಗಳ ನಿಯಂತ್ರಣಕ್ಕೆ ಸಿಮೆಂಟ್‌ ಕಂಬಗಳ ಬೇಲಿ ಅಳವಡಿಸಲಾಗಿದೆ. ಶುಕ್ರವಾರ ಸಂಜೆ ಹೆಣ್ಣಾನೆಯೊಂದು ಎರಡು ಸಿಮೆಂಟ್‌ ಕಂಬಗಳ ನಡುವೆ ಸಿಲುಕಿ ಒದ್ದಾಡಿತು.

ವಿಷಯವರಿತ ಅರಣ್ಯ ಇಲಾಖಾ ಅಧಿಕಾರಿ ಸಿಬಂದಿ ಸ್ಥಳಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಿ, ಜೆಸಿಬಿ ಮೂಲಕ ಹೆಣ್ಣಾನೆಯ ರಕ್ಷಣೆ ಮಾಡುವ ಪ್ರಯತ್ನಕ್ಕೆ ಮುಂದಾದ ಸಂದರ್ಭ, ಇತರ ಆನೆಗಳು ಸಿಬಂದಿ ಮೇಲೆ ದಾಳಿಗೆ ಮುಂದಾಗಿ ಕಾರ್ಯಾಚರಣೆಗೆ ತೊಡಕನ್ನುಂಟು ಮಾಡಿದವು.

ಬೇರೆ ಉಪಾಯ ಕಾಣದ ಅರಣ್ಯ ಇಲಾಖೆ ಸಿಬಂದಿ ನಾಲ್ಕು ಟಿನ್‌ ಸನ್‌ ಪ್ಯೂರ್‌ ಎಣ್ಣೆ ಮತ್ತು ಸಫ್ ಬೆರೆಸಿದ ನೀರನ್ನು ಸಿಮೆಂಟ್‌ ಕಂಬದ ನಡುವೆ ಸಿಲುಕಿದ್ದ ಆನೆಯ ಮೇಲೆ ಸುರಿದದ್ದು ಉಪಯೋಗಕ್ಕೆ ಬಂದಿತು. ಜಾರಿಕೆಯ ಎಣ್ಣೆ ಮತ್ತು ಸಫ್ ನಿಂದ ಹೆಣ್ಣಾನೆ ಕಂಬಗಳೆಡೆಯಿಂದ ಹೊರ ಬರುವ ಮೂಲಕ ಸಂಕಷ್ಟ ಬಗೆಹರೆಯಿತು. ಅಷ್ಟು ಹೊತ್ತು ಕಂಬಗಳ ನಡುವೆ ಸಿಲುಕಿ ಆಕ್ರೋಶ ಗೊಂಡಿದ್ದ ಹೆಣ್ಣಾನೆ ಅರಣ್ಯ ಸಿಬ್ಬಂದಿಗಳ ಮೇಲೆ ದಾಳಿಗೆ ಮುಂದಾಗಿ ಆತಂಕ ಮೂಡಿಸಿತು. ಇತರ ಆನೆಗಳೊಂದಿಗೆ ಕಾಡು ಸೇರಿತು.

ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಶಿವರಾಮ, ಆರ್‌ಎಫ್ಒಗಳಾದ ರಂಜನ್‌, ಅನಿಲ್‌ ಡಿ’ಸೋಜಾ, ಸುಬ್ರಾಯ, ದೇವಯ್ಯ ಮತ್ತು ಸಿಬಂದಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಲ್ಲೆಗೈದು ಮನೆಯಿಂದ ಕಳವು ಪ್ರಕರಣ: 2 ವರ್ಷಗಳ ಬಳಿಕ ಆರೋಪಿಗಳ ಸೆರೆ

Madikeri ಹಲ್ಲೆಗೈದು ಮನೆಯಿಂದ ಕಳವು ಪ್ರಕರಣ: 2 ವರ್ಷಗಳ ಬಳಿಕ ಆರೋಪಿಗಳ ಸೆರೆ

Somwarpet ಮರ ಬಿದ್ದು ಕಾರ್ಮಿಕ ಸಾವು

Somwarpet ಮರ ಬಿದ್ದು ಕಾರ್ಮಿಕ ಸಾವು

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು

Madikeri ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು

Sea ಹಠಾತ್‌ ಉಬ್ಬರ ಸಾಧ್ಯತೆ: ರೆಡ್‌ ಅಲರ್ಟ್‌ ಘೋಷಣೆ

Sea ಹಠಾತ್‌ ಉಬ್ಬರ ಸಾಧ್ಯತೆ: ರೆಡ್‌ ಅಲರ್ಟ್‌ ಘೋಷಣೆ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.