ಉಡುಪಿ: ಮಿನಿ ಎಟಿಎಂ ಹ್ಯಾಕ್ ಮಾಡಿ ವಂಚನೆ
Team Udayavani, Dec 1, 2022, 8:24 PM IST
ಉಡುಪಿ: ಬ್ಯಾಂಕ್ವೊಂದರ ಮಿನಿ ಎಟಿಎಂ ಹ್ಯಾಕ್ ಮಾಡಿ ವಂಚಿಸಿದ ಘಟನೆ ನಡೆದಿದೆ.
ಕುಂದಾಪರದ ನಿವಾಸಿ ಮಲ್ಲಿಕಾರ್ಜುನ ಶೆಟ್ಟಿ ಅವರು ಚಂದ್ರಶೇಖರ ಶೆಟ್ಟಿರವರ ಮಾಲಕತ್ವದ ಇಡೂರು ಕುಂಜ್ಞಾಡಿಯಲ್ಲಿರುವ ಮಾತೃಶ್ರೀ ಎಂಟರ್ಪ್ರೈಸಸ್ ಪೆಟ್ರೋಲ್ ಬಂಕ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. 2 ವರ್ಷಗಳ ಹಿಂದೆ ಫಿನೋ ಬ್ಯಾಂಕ್ ವತಿಯಿಂದ ಮಿನಿ ಎಟಿಎಂ ಅನ್ನು ಪೆಟ್ರೋಲ್ ಬಂಕ್ನ ವ್ಯವಹಾರಗಳ ಬಗ್ಗೆ ಪಡೆದುಕೊಂಡಿದ್ದರು.
ಇದರಲ್ಲಿ ವ್ಯವಹಾರಕ್ಕೆ ಬಳಸಿದ ಹಣವು ಫಿನೋ ಬ್ಯಾಂಕ್ನ ಚಂದ್ರಶೇಖರ ಶೆಟ್ಟಿಯವರ ಖಾತೆಗೆ ಜಮೆಗೊಳ್ಳುತ್ತಿತ್ತು. ಇದನ್ನು ಮಲ್ಲಿಕಾರ್ಜುನ ಶೆಟ್ಟಿ ಅವರು ಪ್ರತಿದಿನ ಸಂಜೆ ಮೊಬೈಲ್ಗೆ ಬಂದ ಓಟಿಪಿ ಪಡೆದು ಚಂದ್ರಶೇಖರ್ ಶೆಟ್ಟಿಯವರ ಕೆನರಾ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತಿದ್ದರು. ನ.23ರಂದು ಸಂಜೆ ಮಲ್ಲಿಕಾರ್ಜುನ ಶೆಟ್ಟಿಯವರು ಮಾಲಕರ ಖಾತೆಗೆ ವರ್ಗಾವಣೆ ಮಾಡಲು ಮಿನಿ ಎಟಿಎಂ ಪರಿಶೀಲಿಸಿದಾಗ ಅಕೌಂಟ್ನಲ್ಲಿ 12.24ರೂ.ಮಾತ್ರ ಇತ್ತು. ಬ್ಯಾಂಕ್ ಸ್ಟೇಟ್ಮೆಂಟ್ ಪಡೆದು ಪರಿಶೀಲಿಸಿದಾಗ ಅದೇ ದಿನ 38,550ರೂ. ಯಾವುದೋ ಅಪರಿಚಿತ ಮೊಬೈಲ್ ಸಂಖ್ಯೆಗೆ ವರ್ಗಾವಣೆಯಾಗಿರುವುದು ತಿಳಿದುಬಂದಿದೆ.
ಮೆಷಿನ್ ಹ್ಯಾಕ್ ಮಾಡಿ ನಷ್ಟ ಉಂಟು ಮಾಡಿದ್ದಾರೆ ಎನ್ನಲಾಗಿದೆ. ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ
ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ
LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ
LS Polls: ಮನೆ ಯಜಮಾನನ್ನು ಕಳೆದುಕೊಂಡ ದುಃಖದ ನಡುವೆ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು
Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ