ಗ್ರಾಮದ ಜನರಿಗೆ ಸೇತುವೆ ನಿರ್ಮಿಸಲು ಪತ್ನಿಯ ಬಂಗಾರವನ್ನೇ ಗಿರವಿಟ್ಟ ಪತಿ.! 100 ಕುಟುಂಬಕ್ಕೆ ಆಸರೆಯಾಯಿತು ಸೇತುವೆ
Team Udayavani, Dec 13, 2022, 4:05 PM IST
ಭುವನೇಶ್ವರ: ಅದು 100 ಕುಟುಂಬದ ಸಣ್ಣ ಹಳ್ಳಿ. ಅಲ್ಲಿರುವ ಜನರು ಸರ್ಕಾರಿ ಆಸ್ಪತ್ರೆಗೆ ಹೋಗಬೇಕಾದರೆ ನದಿ ದಾಟಿಕೊಂಡೇ ಪ್ರಾಣ ಕೈಯಲ್ಲಿ ಹಿಡಿದುಕೊಂಡೇ ಹೋಗಬೇಕು. ಏಕೆಂದರೆ ಆ ನದಿಗೆ ಯಾವ ಸೇತುವೆಯೂ ಇಲ್ಲ.
ರಾಯಗಡದ ಕಾಶಿಪುರ ಬ್ಲಾಕ್ ನ ಬಿಚ್ಲಾ ನದಿಗೆ ಸೇತುವೆ ವ್ಯವಸ್ಥೆಯಿಲ್ಲ. ಕಳೆದ ಎರಡು ಚುನಾವಣೆಯಲ್ಲಿ ಈ ಗ್ರಾಮಕ್ಕೆ ರಾಜಕಾರಣಿಗಳು ಬಂದಿದ್ದಾರೆ. ಸೇತುವೆ ಮಾಡಿಕೊಡುತ್ತೇವೆ ಎಂದು ಹಲವು ಬಾರಿ ಭರವಸೆಗಳನ್ನು ನೀಡಿದ್ದಾರೆ. ಈ ಭರವಸೆಗಳನ್ನೇ ನಂಬಿಕೊಂಡು ಗ್ರಾಮದ ಜನರು ಎರಡು ಚುನಾವಣೆ ಮುಗಿದ ಬಳಿಕವೂ ಕಾದು ಕೂತಿದ್ದಾರೆ. ಆದರೆ ಈ ಭರವಸೆ ಬರೀ ಭರವಸೆಯಾಗಿಯೇ ಉಳಿದಿತ್ತು.
ಗುಂಜಾರಾಂಪಂಜರ ಗ್ರಾಮದ ಟ್ರಕ್ ಚಾಲಕ 26 ವರ್ಷದ ರಂಜಿತ್ ನಾಯಕ್ ಹಾಗೂ ಅವರ ತಂದೆ ಕೈಲಾಸ್ ನಾಯಕ್ ಉಳಿದವರಂತೆ ಊರಿನ ಜನರು. ಸೇತುವೆ ನಿರ್ಮಿಸಿ ಕೊಡುತ್ತೇವೆ ಎಂದು ಹೇಳಿದ ರಾಜಕಾರಣಿಗಳ ಮಾತಿಗೆ ಸೆಡ್ಡು ಹೊಡೆದು ತಾವೇ ಸೇತುವೆಯನ್ನು ನಿರ್ಮಿಸಲು ಹೊರಟು ಯಶಸ್ವಿಯಾಗಿದ್ದಾರೆ.
ಕಲಹಂಡಿ ಮತ್ತು ನಬರಂಗಪುರ ಗ್ರಾಮದ ಜನರಿಗೆ ನದಿ ದಾಟಿ ಹೋಗುವುದೇ ಕಷ್ಟವಾಗುವ ಸಮಯದಲ್ಲಿ ರಂಜಿತ್ ನಾಯಕ್ ಕಾಂಕ್ರೀಟ್ ಸೇತುವೆಯನ್ನು ನಿರ್ಮಿಸಲು ಸಾಧ್ಯವಿಲ್ಲ. ನಿರ್ಮಿಸುವುದಾದರೆ ಮರದ ಕಂಬಗಳು ಹಾಗೂ ಬಿದಿರಿನಿಂದಲೇ ನಿರ್ಮಿಸಬೇಕೆಂದು ಯೋಜನೆ ಹಾಕಿಕೊಂಡು ಅದರ ತಯಾರಿಯನ್ನು ಮಾಡಿಕೊಳ್ಳುತ್ತಾರೆ.
ಇದೇ ವರ್ಷದ ಜೂನ್ ನಲ್ಲಿ ತನ್ನ ಊರಿಗೆ ಸೇತುವೆಯನ್ನು ಮಾಡಬೇಕೆಂದು ಹಗಲು ರಾತ್ರಿಯೆನ್ನದೇ ದುಡಿಯಲು ಆರಂಭಿಸುತ್ತಾರೆ. ಕೆಲಸ ಶುರುವಾದ ಕೆಲ ಸಮಯದಲ್ಲಿ ಮರದ ಕಂಬ ಹಾಗೂ ಇತರ ಸೌಲಭ್ಯಗಳ ಕೊರತೆ ಉಂಟಾಗುತ್ತದೆ. ಏನಾದರೂ ಮಾಡಿ ಮುಂದೆ ಇಟ್ಟ ಹೆಜ್ಜೆಯನ್ನು ಹಿಂದಕ್ಕಿಡಬಾರದೆಂದು ರಂಜಿತ್ ನಿರ್ಧರಿಸುತ್ತಾರೆ.
ಬಡ ಕುಟುಂಬಕ್ಕೆ ಕಷ್ಟಕಾಲದಲ್ಲಿ ಆಸರೆಗಿದದ್ದು, ರಂಜಿತ್ ಅವರ ಪತ್ನಿಯ ಬಂಗಾರ ಮಾತ್ರ. ಆದರೆ ಇದನ್ನೇ ರಂಜಿತ್ ಅವರು ಅಡವಿಟ್ಟು ಅದರಲ್ಲಿ ಬಂದ 70,000 ರೂ.ವನ್ನು ಸೇತುವೆ ನಿರ್ಮಾಣಕ್ಕಾಗಿ ಬಳಸುತ್ತಾರೆ. ಆ 70 ಸಾವಿರ ರೂ.ನಿಂದ ಸೇತುವೆಗೆ ಬೇಕಾದ ಬಿದಿರು ಮತ್ತು ಮರದ ಕಂಬಗಳನ್ನು ಮಾರುಕಟ್ಟೆಯಿಂದ ತರಿಸಿ, ಸೇತುವೆಯನ್ನು ನಿರ್ಮಿಸುತ್ತಾರೆ.
ತಂದೆ – ಮಗ ನಿರ್ಮಾಣ ಮಾಡಿದ ಸೇತುವೆ 100 ಕುಟುಂಬಕ್ಕೆ ಆಸರೆಯಾಗಿದೆ.
ಜನ ನದಿ ದಾಟಲು ಕಷ್ಟಪಡುತ್ತಿದ್ದರು. ಕೆಲವೊಮ್ಮೆ ನದಿ ದಾಟುವಾಗ ಜನರಿಗೆ ಹಾನಿ ಆಗುತ್ತಿತ್ತು. ನದಿ ನೀರಿನ ಹರಿವು ಹೆಚ್ಚಾರುವುದರಿಂದ ಪ್ರಾಣಕ್ಕೆ ಅಪಾಯವೂ ಹೆಚ್ಚು. ಎಲ್ಲಿಯವರೆಗೆ ಎಂದರೆ ವಾಹನಗಳು ಕೂಡ ನೀರಿನ ವೇಗಕ್ಕೆ ಕೊಚ್ಚಿಕೊಂಡು ಹೋಗುತ್ತಿತ್ತು ಎಂದು ರಂಜಿತ್ ನಾಯಕ್ ಹೇಳುತ್ತಾರೆ.
ರಾಯಗಡ ಜಿಲ್ಲಾಧಿಕಾರಿ ರಂಜಿತ್ ನಾಯಕ್ ಅವರ ಕಾರ್ಯಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಒಡಿಶಾ ಸರ್ಕಾರವು ಹಿಂದುಳಿದ ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸೇತುವೆಗಳನ್ನು ನಿರ್ಮಿಸಲು ʼಬಿಜು ಸೇತು ಯೋಜನೆʼಯನ್ನು ಹಾಕಿಕೊಂಡಿದೆ. ಆದರೆ ಅದು ಸರಿಯಾದ ರೀತಿಯಲ್ಲಿ ಅನುಷ್ಠಾನವಾಗುತ್ತಿಲ್ಲ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ