ರಣಜಿ: ಸರ್ವೀಸಸ್ ವಿರುದ್ಧ ವಿಫಲವಾದ ಕರ್ನಾಟಕ ಬ್ಯಾಟಿಂಗ್
Team Udayavani, Dec 13, 2022, 10:52 PM IST
ಬೆಂಗಳೂರು: ನಗರದ ಚಿನ್ನಸ್ವಾಮಿ ಮೈದಾನದಲ್ಲಿ 99ನೇ ರಣಜಿ ಪಂದ್ಯ ಆರಂಭವಾಗಿದೆ.
ಮಾಯಾಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ ತಂಡ, ಸರ್ವೀಸಸ್ ತಂಡವನ್ನು ತನ್ನ ರಣಜಿ ಇತಿಹಾಸದಲ್ಲೇ ಮೊದಲ ಬಾರಿ ಎದುರಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜ್ಯ ಒಟ್ಟು 40 ಓವರ್ಗಳನ್ನು ಎದುರಿಸಿ 6 ವಿಕೆಟ್ಗಳನ್ನು ಕಳೆದುಕೊಂಡು 148 ರನ್ಗಳನ್ನು ಗಳಿಸಿತು. ಮಂದಬೆಳಕು, ಮಳೆಯ ಕಾರಣದಿಂದ ದಿನದಾಟ ಪೂರ್ಣವಾಗಿ ನಡೆಯಲಿಲ್ಲ.
ಕರ್ನಾಟಕದ ನಾಯಕ ಮಾಯಾಂಕ್ ಅಗರ್ವಾಲ್ ಇದೇ ಮೊದಲ ಬಾರಿಗೆ ನಾಯಕತ್ವ ವಹಿಸಿದರು. ಇಲ್ಲವರಿಗೆ ವೈಫಲ್ಯವೇ ಎದುರಾಯಿತು. ಆರ್.ಸಮರ್ಥ್ರಂತೆಯೇ ಕೇವಲ 8 ರನ್ಗಳಿಗೆ ಹೊರ ನಡೆದರು. ರಾಜ್ಯವನ್ನು ಆಧರಿಸಿದ್ದು ಹೊಸಬ ವಿಶಾಲ್ ಒನತ್. ಅವರು 79 ಎಸೆತಗಳಲ್ಲಿ 33 ರನ್ ಗಳಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ನಿಕಿನ್ ಜೋಸ್ ಅತ್ಯುತ್ತಮ ನಿರ್ವಹಣೆ ತೋರಿದರು. ಅವರು 83 ಎಸೆತಗಳಲ್ಲಿ 62 ರನ್ ಗಳಿಸಿದರು. ಈ ಇಬ್ಬರು ಕೈಹಿಡಿಯದಿದ್ದರೆ ರಾಜ್ಯ ಆಲೌಟ್ಗೆ ಸಮೀಪವಾಗುವ ಸಾಧ್ಯತೆಯಿತ್ತು. ಸರ್ವೀಸಸ್ ತಂಡದ ಪರ ವೇಗಿ ದಿವೇಶ್ ಪಠಾಣಿಯ ಅತ್ಯುತ್ತಮ ಬೌಲಿಂಗ್ ಮಾಡಿ 40 ರನ್ ನೀಡಿ 5 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ 148/6 (ನಿಕಿನ್ ಜೋಸ್ 62, ವಿಶಾಲ್ ಒನತ್ 33, ದಿವೇಶ್ ಪಠಾಣಿಯ 40ಕ್ಕೆ 5)