ಈಗ ಇರುವುದು ಮುತ್ತಾತನ ಕಾಲದ ಭಾರತವಲ್ಲ: ರಾಹುಲ್ ಗೆ ಸಿ.ಟಿ.ರವಿ ತಿರುಗೇಟು
ಹಿಂದಿ-ಚೀನಿ ಬಾಯಿ-ಬಾಯಿ ಅಲ್ಲ.....
Team Udayavani, Dec 17, 2022, 4:24 PM IST
ಚಿಕ್ಕಮಗಳೂರು : ಈಗಿರೋದು ಅವರ ಮುತ್ತಾತನ ಕಾಲದ ಭಾರತವಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಶನಿವಾರ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಸರಕಾರ ಸೈನಿಕರಿಗೆ ಹಿಮದಲ್ಲಿ ಓಡಾಡುವ ಶೂಗಳನ್ನು ಕೊಡಲಿಲ್ಲ.ಅಗತ್ಯವಿರುವ ಬಂದೂಕನ್ನು ಕೊಡದ ಅವರ ಮುತ್ತಾತನ ಕಾಲದ ಭಾರತ ಈಗಿಲ್ಲ. ಆ ಕಾಲದಲ್ಲಿ 40 ಸಾವಿರ ಚದರ ಮೈಲಿಯೆನೋ ಭೂಮಿ ಕಳೆದುಕೊಂಡೆವು. ಈಗ ಒಂದೊಂದು ಇಂಚಿಗೂ ಸ್ವಾಭಿಮಾನದಿಂದ ಹೋರಾಟ ಮಾಡುವ ಭಾರತ ಇದೆ ಎಂದು ಕಿಡಿ ಕಾರಿದರು.
ಹಿಂದಿ-ಚೀನಿ ಬಾಯಿ-ಬಾಯಿ ಅಂತ ಬಾಯಲ್ಲಿ ಚಾಕೊಲೇಟ್ ಇಟ್ಕೊಂಡು ಸೈನಿಕರನ್ನು ಬಲಿಕೊಟ್ಟ ಭಾರತವಲ್ಲವಿದು ಎಂದು ರಾಹುಲ್ ಗಾಂಧಿ ಅವರ ವಿರುದ್ಧ ಆಕ್ರೋಶ ಹೊರ ಹಾಕಿದರು.
ಇದನ್ನೂ ಓದಿ : ಚೀನವು ಯುದ್ಧಕ್ಕೆ ಸಿದ್ಧ; ರಾಹುಲ್ ಹೇಳಿಕೆ ವಿರುದ್ದ ನಡ್ಡಾ, ಸಿಎಂ ಯೋಗಿ ಆಕ್ರೋಶ
“ಚೀನವು ಯುದ್ಧಕ್ಕೆ ಸಿದ್ಧವಾಗುತ್ತಿದೆ. ಆದರೆ, ಭಾರತ ಸರ್ಕಾರ ಮಾತ್ರ ನಿದ್ದೆಗೆ ಶರಣಾಗಿದೆ. ಅಪಾಯವನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ. ಚೀನವು ಈಗಾಗಲೇ ಭಾರತದ 2 ಸಾವಿರ ಚದರ ಕಿಲೋಮೀಟರ್ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದೆ. ಗಾಲ್ವಾನ್ನಲ್ಲಿ ನಮ್ಮ 20 ಯೋಧರನ್ನು ಚೀನೀ ಸೈನಿಕರು ಹತ್ಯೆಗೈದಿದ್ದಾರೆ. ಅರುಣಾಚಲ ಪ್ರದೇಶದಲ್ಲೂ ನಮ್ಮ ಯೋಧರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ’ ಎಂದು ರಾಹುಲ್ ಹೇಳಿದ್ದರು.
ರಾಹುಲ್ ಹೇಳಿಕೆ ಬಳಿಕ ಬಿಜೆಪಿ ನಾಯಕರು ವ್ಯಾಪಕ ಆಕ್ರೋಶ ಹೊರ ಹಾಕಿ ತಿರುಗೇಟು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Home Minister ಅಮಿತ್ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್
Karnataka Govt ಎಸ್ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ
D. K. Shivakumar ಪೆನ್ಡ್ರೈವ್ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ
Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್ ದಾಖಲು
Hassan Pen Drive Case; ಕಾರ್ತಿಕ್ ಪೆನ್ಡ್ರೈವ್ ಕೊಟ್ಟಿದ್ದು ನಿಜ: ದೇವರಾಜೇಗೌಡ