ಒಂದು ದಿನದ ಕಲಾಪ “ಮಹಾದಾಯಿ’ಗೆ ಮೀಸಲಿಡಿ : ಗೋವಾ ಪ್ರತಿಪಕ್ಷ ನಾಯಕ
Team Udayavani, Jan 8, 2023, 11:54 PM IST
ಪಣಜಿ: ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಮಹಾದಾಯಿ ವಿವಾದದ ಕುರಿತು ಚರ್ಚೆಗೆ ಅವಕಾಶ ಕಲ್ಪಿಸುವಂತೆ ಕೋರಿ ಸ್ಪೀಕರ್ ರಮೇಶ್ ತವಾಡ್ಕರ್ರಿಗೆ ಪತ್ರ ಬರೆಯುವುದಾಗಿ ಗೋವಾ ವಿಪಕ್ಷ ನಾಯಕ ಯುರಿ ಅಲೆಮಾವೋ ಹೇಳಿದ್ದಾರೆ.
ಜ.16ರಿಂದ 19ರವರೆಗೆ ಗೋವಾದ ವಿಧಾನಸಭೆ ಅಧಿವೇಶನ ನಡೆಯಲಿದೆ. ಕಳಸಾ-ಬಂಡೂರಿ ಅಣೆಕಟ್ಟು ಯೋಜನೆ ಕುರಿತು ಚರ್ಚಿಸಲು ಒಂದು ದಿನದ ಕಲಾಪವನ್ನು ಮೀಸಲಿಡಬೇಕೆಂದು ಕೋರಲಾದ ಪತ್ರವನ್ನು ಸೋಮವಾರವೇ ಸ್ಪೀಕರ್ಗೆ ಸಲ್ಲಿಸುತ್ತೇನೆ ಎಂದು ಅಲೆಮಾವೋ ಹೇಳಿದ್ದಾರೆ.
ಅಧಿವೇಶನದಲ್ಲಿ ವಿಪಕ್ಷಗಳಿಂದ ಕನಿಷ್ಠ ಏಳಾ ದರೂ ಗಮನ ಸೆಳೆಯುವ ನಿರ್ಣಯಗಳನ್ನು ಸ್ವೀಕರಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ. ವಿಧಾನಸಭೆಯ ಕಾರ್ಯ ಕಲಾಪಗಳ ಸಲಾಹ ಸಮಿತಿ ಸೋಮವಾರ ಸಭೆ ಸೇರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ