ಕೊಲೆಗೆ ಪ್ರೇರಣೆ ನೀಡುವವರನ್ನು ಗಡೀಪಾರು ಮಾಡಿ: ಶಾಸಕ ಖಾದರ್
Team Udayavani, Jan 31, 2023, 7:15 AM IST
ಮಂಗಳೂರು: ರಾಜಕೀಯ ಲಾಭಕ್ಕಾಗಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತ, ಕೊಲೆಗಳಿಗೆ ಪ್ರೇರಣೆ ನೀಡುವ ದೇಶದ್ರೋಹಿಗಳನ್ನು ಗಡೀಪಾರು ಮಾಡಬೇಕು ಎಂದು ಶಾಸಕ ಯು.ಟಿ. ಖಾದರ್ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಈಗಿನ ಪರಿಸ್ಥಿತಿಯಲ್ಲಿ ಬಿಜೆಪಿ, ಸಂಘ ಪರಿವಾರದವರು ಕೊಲೆಗಾಗಿ ಕಾಯುತ್ತಿರುವಂತಿದೆ. ಕೊಲೆಗೀಡಾದವರ ಮನೆಯವರ ನೋವು ಅವರಿಗೆ ಅರ್ಥವಾಗುವುದಿಲ್ಲ. ಸಮಾಜಕ್ಕೆ ಅಪಾಯಕಾರಿಯಾಗಿರುವ ಹೇಳಿಕೆ ನೀಡಿರುವ ಶರಣ್ ಪಂಪ್ವೆಲ್ ವಿರುದ್ಧ ಪೊಲೀಸ್ ಇಲಾಖೆ ತತ್ಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ಫಾಝಿಲ್ ಕೊಲೆಯನ್ನು ಸಮರ್ಥನೆ ಮಾಡಿರುವುದರಿಂದ ಪ್ರಕರಣದ ಮರು ತನಿಖೆಯಾಗಬೇಕು ಎಂದರು.