ಜೈಲಿನಲ್ಲೇ ಇದ್ದವನಿಗಾಗಿ ಪೊಲೀಸರಿಂದ 20 ವರ್ಷ ಹುಡುಕಾಟ!
Team Udayavani, Feb 14, 2023, 7:30 AM IST
ಮುಂಬೈ: ಮುಂಬೈ ಪೊಲೀಸ್ ವಲಯದಲ್ಲೊಂದು ಅಚ್ಚರಿ ನಡೆದಿದೆ. ಸತತ 20 ವರ್ಷಗಳಿಂದ ಶೋಧಕ್ಕೊಳಗಾಗಿದ್ದ ಛೋಟಾ ಶಕೀಲ್ ಬಣದ ಶಾರ್ಪ್ ಶೂಟರ್ ಮಾಹಿರ್ ಸಿದ್ದಿಖಿ, 5 ವರ್ಷಗಳ ಕಾಲ ಜೈಲಿನಲ್ಲೇ ಇದ್ದರೂ ಪೊಲೀಸರಿಗೆ ಗೊತ್ತಾಗಿಲ್ಲ!
ಇದನ್ನು ಸ್ವತಃ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ನ್ಯಾಯಾಲಯದ ನ್ಯಾಯಾಧೀಶರೇ ಅಚ್ಚರಿಯಿಂದ ಪ್ರಶ್ನಿಸಿದ್ದಾರೆ. ಈ ಬಗ್ಗೆ ಅಭಿಪ್ರಾಯ ನೀಡಿದ ನ್ಯಾ.ಎ.ಎಂ.ಪಾಟೀಲ್, 5 ವರ್ಷ ಜೈಲಿನಲ್ಲೇ ಇದ್ದರೂ ಪೊಲೀಸರಿಗೆ ಗೊತ್ತಾಗದ್ದೇ ಇದ್ದದ್ದು ಹೇಗೆ? ಈ ಕೌತುಕವನ್ನು ಅವರೇ ವಿವರಿಸಬೇಕು ಎಂದಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ ಸಿದ್ದಿಖೀ, 1999 ಜುಲೈನಲ್ಲಿ ವಾಹಿದ್ ಅಲಿ ಖಾನ್ನನ್ನು ಗುಂಡಿಟ್ಟು ಹತ್ಯೆ ಮಾಡಿ ತಪ್ಪಿಸಿಕೊಂಡಿದ್ದ. 2019ರಲ್ಲಿ ಸಾಕ್ಷ್ಯಸಮೇತ ಪೊಲೀಸರು ಸಿದ್ದಿಖೀಯನ್ನು ಬಂಧಿಸಿ ಆರೋಪಪಟ್ಟಿ ಸಲ್ಲಿಸಿದರು. ಆದರೆ ಇನ್ನೊಂದು ಪ್ರಕರಣದಲ್ಲಿ ಸಿದ್ದಿಖಿ ಸಿಐಡಿಯಿಂದ ಬಂಧನಕ್ಕೊಳಗಾಗಿ 2014ರಿಂದ 2019ರವರೆಗೆ ಜೈಲಿನಲ್ಲೇ ಇದ್ದ! ಇವನ್ನೆಲ್ಲ ಪರಿಗಣಿಸಿ ಸಿದ್ದಿಖೀಯನ್ನು ನ್ಯಾಯಾಲಯ ಬಿಡುಗಡೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ebrahim Raisi; ಹೆಲಿಕಾಪ್ಟರ್ ದುರಂತದಲ್ಲಿ ಕೊನೆಯುಸಿರೆಳೆದ ಇರಾನ್ ಅಧ್ಯಕ್ಷ ರೈಸಿ
Unemployment; ಭಾರತದ ಯುವಕರಿಗೆ ಕೆಲಸ ಸಿಗಬೇಕಾದರೆ ಮೋದಿ ನಿವೃತ್ತಿಯಾಗಬೇಕು: ರಾಹುಲ್ ಗಾಂಧಿ
IPL 2024; ವಿರಾಟ್ ಕೊಹ್ಲಿಯ ಎಂಟು ವರ್ಷ ಹಳೆಯ ದಾಖಲೆ ಮುರಿದ ಅಭಿಷೇಕ್ ಶರ್ಮಾ
OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್ಗಳ ಹೆಸರಲ್ಲಿ ಸಂದೇಶ
Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ