ವಿಧಾನಸಭೆ: ಸದನ ಖಾಲಿ…ಖಾಲಿ… ಕಲಾಪಕ್ಕೆ ಬನ್ನಿ ಎಂದು ಸ್ಪೀಕರ್ ಮನವಿ
Team Udayavani, Feb 14, 2023, 6:55 AM IST
ವಿಧಾನಸಭೆ: ಅಧಿವೇಶನದ ಎರಡನೇ ದಿನವಾದ ಸೋಮವಾರವೂ ಸದನ ಖಾಲಿ ಖಾಲಿ ಆಗಿತ್ತು. ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆ ಸಂದರ್ಭದಲ್ಲಿ ಕಾಂಗ್ರೆಸ್ನ 4, ಜೆಡಿಎಸ್ನ 2 ಹಾಗೂ ಬಿಜೆಪಿಯ 16 ಸದಸ್ಯರು ಮಾತ್ರ ಹಾಜರಿದ್ದರು.
ಭೋಜನಾ ವಿರಾಮದ ಗಮನ ಸೆಳೆಯುವ ಸೂಚನೆ ಪ್ರಸ್ತಾಪ ಕೊಟ್ಟಿದ್ದವರೂ ಗೈರು ಆಗಿದ್ದರು. ಬೆಳಗ್ಗೆ ಪ್ರಶ್ನೋತ್ತರ ಸಂದರ್ಭದಲ್ಲಿಯೂ ಸದಸ್ಯರು ಹಾಜರಿರಲಿಲ್ಲ.
ಹೀಗಾಗಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಇದು ನಮ್ಮ ಅವಧಿಯ ಕೊನೆಯ ಅಧಿವೇಶನ. ಸಾಮಾಜಿಕವಾಗಿ, ರಾಜಕೀಯವಾಗಿಯೂ ನಮ್ಮನ್ನು ಬೆಳೆಸಿದ ಮನೆ. ಭಾವನಾತ್ಮಕವಾಗಿಯೂ ನಮಗೆ ಸದನ ಮಹತ್ವದ್ದು. ಫೆ.24ರವರೆಗೆ ಸದನ ನಡೆಯಲಿದ್ದು, ಎಲ್ಲರೂ ತಪ್ಪದೇ ಭಾಗವಹಿಸಿ ಎಂದು ಮನವಿ ಮಾಡಿದರು.
ಪರಿಷತ್ನಲ್ಲಿ ಸಚಿವರ ಗೈರು
ವಿಧಾನಪರಿಷತ್ನಲ್ಲಿ ಸದಸ್ಯರ ಹಾಜರಾತಿ ಇತ್ತಾದರೂ ಸದಸ್ಯರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಬೇಕಾದ ಸಚಿವರು ಗೈರು ಹಾಜರಾಗಿದ್ದರು. ಇದಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸಭಾಪತಿ ಬಸವರಾಜ ಹೊರಟ್ಟಿ ಅವರು ಮಾತನಾಡಿ ಸಚಿವರೂ ಸದನದಲ್ಲಿ ಇರಬೇಕು. ಜತೆಗೆ, ಪ್ರಶ್ನೆ ಕೇಳಿದ ಸದಸ್ಯರೂ ಇರಬೇಕು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನವಜಾತ ಶಿಶುವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಚರಂಡಿಗೆ ಎಸೆದ ಪಾಪಿಗಳು; ಪೊಲೀಸರಿಂದ ಶೋಧ
49 ಅಭ್ಯರ್ಥಿಗಳಿಂದ ಉಮೇದುವಾರಿಕೆ: ನಾಮಪತ್ರ ಸಲ್ಲಿಕೆಗೆ ಇಂದು ಕೊನೆ ದಿನ
JDS MP ಪ್ರಜ್ವಲ್ ಎಲ್ಲಿ? ಕುಟುಂಬದವರು ಸಹಿತ ಯಾರಿಗೂ ಗೊತ್ತಿಲ್ಲ: ಜಿ.ಟಿ.ದೇವೇಗೌಡ
ಪರಿಷತ್ ಚುನಾವಣೆ: 3 ಪಕ್ಷಕ್ಕೂ ಬಂಡಾಯ ಬಿಸಿ; ಪಕ್ಷದ ವಿರುದ್ಧವೇ ಸಡ್ಡು ಹೊಡೆದು ಸ್ಪರ್ಧೆ
Attendance ಕೊರತೆ ಇದ್ದರೂ ಎಸೆಸೆಲ್ಸಿ ಪರೀಕ್ಷೆ-2ಕ್ಕೆ ಅವಕಾಶ
MUST WATCH
ಹೊಸ ಸೇರ್ಪಡೆ
Anjali Ambigera Case; ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
Bidar; ಯುವಕರ ಬದುಕು ಹಾಳು ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ: ಈಶ್ವರ್ ಖಂಡ್ರೆ
Drugs ಮಾರಾಟ: ಮೂವರು ವಿದೇಶಿ ಪ್ರಜೆಗಳು ಸೇರಿ 8 ಮಂದಿ ಬಂಧನ
ಜಮ್ಮು – ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಎನ್ಕೌಂಟರ್… ಇಬ್ಬರು ಉಗ್ರರು ಹತ
Tumkur: ಕೆರೆ ಹೂಳು ತೆಗೆಯಲು ರೈತರಿಂದ ಮಾಹಿತಿ ಪತ್ರ ಕಡ್ಡಾಯ: ಪ್ರಭು ಜಿ