ಕೇಂದ್ರ ಸಚಿವರಿಗೆ ಬೆದರಿಕೆ: ಬಿಹಾರದಲ್ಲಿ ವ್ಯಕ್ತಿಯ ಬಂಧನ
Team Udayavani, Feb 14, 2023, 7:21 PM IST
ಪಾಟ್ನಾ : ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್ ಅವರಿಗೆ ವಿಡಿಯೋ ಸಂದೇಶ ಮೂಲಕ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಬಂಧಿಸಲಾಗಿದೆ.
ಈ ಬಗ್ಗೆ ಬಿಹಾರದ ವೈಶಾಲಿ ಜಿಲ್ಲಾ ಎಸ್ಪಿ ಕುಮಾರ್ ಮನೀಶ್ ಮಾತನಾಡಿ ಫೆ.18ರಂದು ಮಹಾಶಿವರಾತ್ರಿಯ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಸಚಿವರ ಎದೆಗೆ ಎರಡು ಗುಂಡು ಹಾರಿಸಬೇಕು. ಅದನ್ನು ನನ್ನ ಬಯಕೆ ಎಂದು ಮಾಧವ ಸಿನ್ಹಾ ಎಂಬಾತ ವಿಡಿಯೋದಲ್ಲಿ ಹೇಳಿಕೊಂಡಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.