2047ರೊಳಗೆ ಭಾರತ ನೈಜ ಸ್ವರಾಜ್ಯವಾಗಲಿ; ಸ್ವರಾಜ್‌ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ

14 ದೇಶಗಳು ಹಾಗೂ ಭಾರತದ ಹಲವು ರಾಜ್ಯಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

Team Udayavani, Mar 2, 2023, 6:09 PM IST

2047ರೊಳಗೆ ಭಾರತ ನೈಜ ಸ್ವರಾಜ್ಯವಾಗಲಿ; ಸ್ವರಾಜ್‌ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ

ಗದಗ: ಸ್ವರಾಜ್‌ ಎಂಬುದು ವೇದಗಳಿಂದ ಬಂದ ಪದವಾಗಿದೆ. ಸ್ವರಾಜ್ಯ ಎಂದರೆ ಕೇವಲ ರಾಜಕೀಯ ಪರಿಮಿತಿ ಹೊಂದಿಲ್ಲ. ಅದರ ವ್ಯಾಪ್ತಿ ಅಪರಿಮಿತ. ಸ್ವನಿಯಂತ್ರಣ, ಸ್ವ ಆಡಳಿತ, ಸ್ವಾವಲಂಬಿ ಬದುಕು, ಭಾರತದ ಸಂಸ್ಕೃತಿ, ಐಕ್ಯತೆ, ವಿವಿಧತೆ ಹೊಂದಿದೆ ಎಂದು ಹಿರಿಯ ಐಎಎಸ್‌ ಅಧಿಕಾರಿ ಅಶೋಕ ದಳವಾಯಿ ಹೇಳಿದರು.

ನಗರ ಹೊರವಲಯದ ನಾಗಾವಿ ಬಳಿಯ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿವಿಯಲ್ಲಿ ಬುಧವಾರ ಆರಂಭಗೊಂಡ ಮೂರು ದಿನಗಳ ಸ್ವರಾಜ್‌ ಅಂತಾರಾಷ್ಟ್ರೀಯ ಸಮ್ಮೇಳನದ ಭಾಗವಾಗಿ ಆಯೋಜಿಸಿರುವ ಸ್ವರಾಜ್‌ ಪರಿಕಲ್ಪನೆಯ ವಿವಿಧ ಆಯಾಮಗಳನ್ನು ಬಿಂಬಿಸುವ ಪ್ರದರ್ಶನೀಯಗಳಿಗೆ ಚಾಲನೆ ನೀಡಿ, ಬಳಿಕ ಕೌಶಲ್ಯ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವರಾಜ್‌ದ ಪರಿಕಲ್ಪನೆ ಬಗ್ಗೆ ಅರ್ಥ ಮಾಡಿಕೊಳ್ಳಲು ಇಲ್ಲಿ ನಾವು ಸೇರಿದ್ದೇವೆ. 1928ರಲ್ಲಿ ಈ ದೇಶ ಸ್ವರಾಜ್ಯ ಆಗಬೇಕು ಎಂಬುದನ್ನು ಅಂದಿನ ಸ್ವಾತಂತ್ರ್ಯ ಹೋರಾಟಗಾರರು ನಿರ್ಣಯಿಸಿದ್ದರು. ಸ್ವಾತಂತ್ರ್ಯ ನಂತರದಿಂದ ಸ್ವರಾಜ್‌ ಸಾಧಿ ಸಲು ಪ್ರಯತ್ನಿಸುತ್ತಿದೆ. 2047ರ ಒಳಗಾಗಿ ಭಾರತ ನಿಜವಾಗಲೂ ಸ್ವರಾಜ್‌ ಆಗಲಿ. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕೆಂದು ಹೇಳಿದರು.

ಮಹಾತ್ಮ ಗಾಂಧೀಜಿಯ ಸ್ವರಾಜ್ಯ ಪರಿಕಲ್ಪನೆ ಕುರಿತು ತಿಳಿಸಿದ ಅವರು, ನಮ್ಮನ್ನು ನಾವು ಆಡಳಿತಕ್ಕೆ ಒಳಪಡಿಸಿಕೊಳ್ಳುವುದಷ್ಟೇ ಸ್ವರಾಜ್‌ ಅಲ್ಲ. ಜನರನ್ನು ಜಾಗೃತಗೊಳಿಸುವುದು, ಸಹಕಾರ, ಉತ್ತಮ ನಡತೆಗಳಿಂದ ಸ್ವರಾಜ್ಯ ರಾಷ್ಟ್ರ ಸೃಷ್ಟಿಸಬಹುದು.

ವ್ಯವಸ್ಥೆಯಲ್ಲಿ ವ್ಯಕ್ತಿ ಸ್ವಾತಂತ್ರ್ಯ ಬಹುಮುಖ್ಯ. ಆಡಳಿತ ವ್ಯವಸ್ಥೆಯಲ್ಲಿ ವ್ಯಕ್ತಿಗತ ಶಿಕ್ಷಣ, ಸ್ವಾವಲಂಬಿ, ಸ್ವತಂತ್ರ ಬದುಕು, ಸಾಮಾಜಿಕ ವ್ಯವಸ್ಥೆ, ವಿಭಿನ್ನ ಸಂಸ್ಕೃತಿಗಳ ನಡುವೆ ಸಹಕಾರ ಅಗತ್ಯವಿದೆ. ಇದನ್ನೇ ಗಾಂಧೀಜಿ ಮತ್ತು ಸ್ವಾಮಿ ವಿವೇಕಾನಂದರು ತಿಳಿಸಿದ್ದರು. ಇವುಗಳಿಂದ ಗ್ರಾಮ ಸ್ವರಾಜ್‌ ಸಾಧ್ಯ ಎಂದರು. ಪದಶ್ರೀ ಪ್ರಶಸ್ತಿ ಪುರಸ್ಕೃತ ಮಂಜಮ್ಮ ಜೋಗತಿ ಮಾತನಾಡಿ, ಶಿಕ್ಷಣ ವ್ಯವಸ್ಥೆ ಮಾನವರನ್ನಾಗಿಸುತ್ತದೆ. ಆದರೆ, ಮಾನವೀಯ ಮೌಲ್ಯಗಳನ್ನು ಬೆಳೆಸುವುದರಲ್ಲಿ ವಿಫಲವಾಗಿದೆ. ಪ್ರತಿಯೊಬ್ಬರೂ ನಮ್ಮ ಬದುಕಿನಲ್ಲಿ ಎಷ್ಟೇ ಎತ್ತರಕ್ಕೇರಿದರೂ ನಮ್ಮತನವನ್ನು ಮೊದಲು ರಕ್ಷಣೆ ಮಾಡಿಕೊಳ್ಳುವ ಅಗತ್ಯವಿದೆ. ನಮ್ಮ ಪರಿಸರ, ನಮ್ಮ ಮನೆ ಗೌರವ, ಸಂಸ್ಕಾರಗಳು ಹಿಡಿತದಲ್ಲಿ ಇರಬೇಕು. ಅದು ಸ್ವರಾಜ್‌ದ ಮೂಲ ಮಂತ್ರ ಎಂದರು.

ಕೇಂದ್ರದ ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಚಿ.ಸು. ಕೃಷ್ಣಶೆಟ್ಟಿ ಮಾತನಾಡಿ, ಜನತೆಗೆ ಯಾವುದೇ ವಿಷಯದ ಅರ್ಥ ಗೊತ್ತಿದ್ದರೂ ಅದನ್ನು ಪಾಲಿಸುತ್ತಿಲ್ಲ. ಇದು ಸ್ವರಾಜ್‌ ವಿಷಯದಲ್ಲೂ ಆಗಿದೆ. ಕಲೆ ಮತ್ತು ಸಂಸ್ಕೃತಿ ನಮ್ಮ ಬದುಕಿನ ಭಾಗ ಎಂದು ಬಣ್ಣಿಸಿದರು.

ಗ್ರಾಮೀಣ ವಿಶ್ವವಿದ್ಯಾಲಯದ ಕುಲಪತಿ ಡಾ|ವಿಷ್ಣುಕಾಂತ ಚಟಪಲ್ಲಿ ಮಾತನಾಡಿ, ಮೂರು ದಿನಗಳ ಕಾಲ ನಡೆಯುವ ಈ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಶ್ರೀಲಂಕಾ, ಚೀನಾ, ಇಂಡೋನೇಶಿಯಾ ಸೇರಿದಂತೆ 14 ದೇಶಗಳು ಹಾಗೂ ಭಾರತದ ಹಲವು ರಾಜ್ಯಗಳಿಂದ ಪ್ರತಿನಿ ಧಿಗಳು ಭಾಗವಹಿಸಿದ್ದಾರೆ. ಈ ಸಮ್ಮೇಳನ ಕೇವಲ ಸಂಶೋಧನೆ, ಪ್ರಬಂಧ ಮಂಡನೆ, ಪತ್ರಿಕೆಗಳ ಪ್ರಸ್ತುತಪಡಿಸುವುದಷ್ಟೇ ಅಲ್ಲ, ಸಮ್ಮೇಳನ ಪ್ರಾಯೋಗಿಕ ಪರಿಕಲ್ಪನೆಯಲ್ಲಿ ಇರಲಿದೆ ಎಂದರು.

ಪ್ರಜ್ಞಾ ಪ್ರವಾಹದ ಅಖೀಲ ಭಾರತೀಯ ಸಹ ಸಂಯೋಜಕ ರಘುನಂದನ್‌, ವಿಶ್ವವಿದ್ಯಾಲಯದ ಕುಲಸಚಿವ ಪ್ರೊ| ಬಸವರಾಜ ಲಕ್ಕಣ್ಣವರ ವೇದಿಕೆಯಲ್ಲಿದ್ದರು. ಗಿರೀಶ ದೀಕ್ಷಿತ ಸ್ವಾಗತಿಸಿದರು. ಚಂದನಾ ವಿಶ್ವನಾಥ ನಿರೂಪಿಸಿದರು. ಶಶಿಕಾಂತ ಡಿ.ಎಚ್‌. ವಂದಿಸಿದರು.

ಗದ್ಗದಿತರಾದ ಮಂಜಮ್ಮ ಜೋಗತಿ
ಕೊಲೆಗಾರ ಮಗನನ್ನು, ದುರ್ನಡತೆ ಮಗಳನ್ನು ಸ್ವೀಕರಿಸುವ ಪೋಷಕರು ತೃತೀಯ ಲಿಂಗಿಗಳನ್ನು ಮಕ್ಕಳೆಂದು ಸ್ವೀಕರಿಸುವುದಿಲ್ಲ. ಗರ್ಭದಲ್ಲಿ ನನ್ನಂತಹ ಮಕ್ಕಳು (ತೃತೀಯ ಲಿಂಗಿಗಳು) ಹುಟ್ಟಿದರೆ ಹೊರದೂಡದೇ ಅವರಿಗೂ ಶಿಕ್ಷಣ ಕೊಡಿಸಿದರೆ ಭವಿಷ್ಯದಲ್ಲಿ ಸ್ವಾವಲಂಬಿಗಳಾಗಿ ಬದುಕು ನಡೆಸಬಹುದು ಎಂದು ಜೋಗತಿ ಮಂಜಮ್ಮ ವೇದಿಕೆಯಲ್ಲಿ ಗದ್ಗದಿತರಾಗಿ ಮನವಿ ಮಾಡಿದರು.

ಆಹಾರದಲ್ಲೂ ದೇಶೀ ಪದ್ಧತಿ
ಸ್ವರಾಜ್‌ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುವ ದೇಶದ ವಿವಿಧ ರಾಜ್ಯಗಳು, ಶ್ರೀಲಂಕಾ, ಚೀನಾ, ಇಂಡೋನೇಶಿಯಾ ಸೇರಿ 14 ದೇಶಗಳ ಪ್ರತಿನಿಧಿಗಳಿಗೆ ರೊಟ್ಟಿ, ಚಪಾತಿ ಜತೆ ಕಿಚಡಿ, ಮಾದಲಿ ಸೇರಿದಂತೆ ದೇಶೀ ಊಟ ಸಿದ್ಧಪಡಿಸಿ ಉಣಬಡಿಸಲಾಗುತ್ತಿದೆ.

ಮೂರು ದಿನಗಳ ಕಾಲ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಶ್ರೀಲಂಕಾ, ಚೀನಾ, ಇಂಡೋನೇಶಿಯಾ ಸೇರಿ 14 ದೇಶಗಳು ಹಾಗೂ ಭಾರತದ ಹಲವು ರಾಜ್ಯಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಇದು ಕೇವಲ ಸಂಶೋಧನೆ, ಪ್ರಬಂಧ ಮಂಡನೆ, ಪತ್ರಿಕೆಗಳ ಪ್ರಸ್ತುತ ಪಡಿಸುವುದಷ್ಟೇ ಅಲ್ಲ. ಸಮ್ಮೇಳನ ಪ್ರಾಯೋಗಿಕ ಪರಿಕಲ್ಪನೆಯಲ್ಲಿ ಇರಲಿದೆ.
ಪ್ರೊ| ವಿಷ್ಣುಕಾಂತ ಚಟಪಲ್ಲಿ, ಕುಲಪತಿ, ಗ್ರಾವಿವಿ

ಶಿಕ್ಷಣ ಕಲಿಸಿದರೆ ಮಾತ್ರ ವಿವಿಗಳ ಉದ್ದೇಶ ಸಾಕಾರಗೊಳ್ಳುವುದಿಲ್ಲ. ನಯ, ವಿನಯತೆ, ಹಿರಿಯರಿಗೆ ಗೌರವ, ನಮ್ಮ ಸಂಸ್ಕೃತಿ, ನಮ್ಮ ಉಡುಪು, ಆಹಾರ ಪದ್ಧತಿ, ಕೃಷಿ ಬಗ್ಗೆ ವಿವಿಗಳಲ್ಲಿ ಧಾರೆ ಎರೆಯಬೇಕು.
ಪದ್ಮಶ್ರೀ ಮಂಜಮ್ಮ ಜೋಗತಿ

 

ಟಾಪ್ ನ್ಯೂಸ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.