ರಾಜಧಾನಿ ಬದಲಾವಣೆ ಶುರುಮಾಡಿದ ಇಂಡೊನೇಷ್ಯಾ
Team Udayavani, Mar 10, 2023, 7:00 AM IST
ಜಕಾರ್ತ: ಹವಾಮಾನ ವೈಪರೀತ್ಯ, ವಾಹನ ದಟ್ಟಣೆ, ಜನಸಂಖ್ಯೆ ಹೆಚ್ಚಳದಂಥ ಕಾರಣಗಳಿಂದಾಗಿ ಇಂಡೋನೇಷ್ಯಾ ಸರ್ಕಾರ ತನ್ನ ರಾಷ್ಟ್ರ ರಾಜಧಾನಿಯನ್ನು ಜಕಾರ್ತದಿಂದ ಬೊರ್ನಿಯೋ ದ್ವೀಪಕ್ಕೆ ಬದಲಾಯಿಸಲು ನಿರ್ಧರಿಸಿದೆ.
ಜಕಾರ್ತದಲ್ಲಿರುವ ಜಾವಾ ಸಮುದ್ರಮಟ್ಟ ಏರುತ್ತಿದ್ದು, 2050ರ ವೇಳೆ ಪ್ರದೇಶದ 3ನೇ ಒಂದು ಭಾಗ ಮುಳುಗಡೆಯಾಗಬಹುದೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಪ್ರದೇಶದ ಸಾಮರ್ಥ್ಯಕ್ಕಿಂತ 3 ಪಟ್ಟು ಅಧಿಕ ಮಂದಿ ವಾಸವಿರುವ ಕಾರಣ, ದಟ್ಟಣೆ, ಮಾಲಿನ್ಯ, ಅಂತರ್ಜಲ ಕುಸಿತದಂಥ ಗಂಭೀರ ಸಮಸ್ಯೆಯನ್ನು ಜಕಾರ್ತ ಎದುರಿಸುತ್ತಿದೆ.
ಈ ಹಿನ್ನೆಲೆ ರಾಜಧಾನಿ ಬದಲಾವಣೆ ಅಗತ್ಯವೆಂದು ಸರ್ಕಾರ ತಿಳಿಸಿದೆ. ಮತ್ತೂಂದೆಡೆ ಬೋರ್ನಿಯ ದ್ವೀಪವನ್ನು ರಾಜಧಾನಿಯಾಗಿಸುವ ಪ್ರಯತ್ನವು, ಅಭಿವೃದ್ಧಿ ಹೆಸರಿನಲ್ಲಿ ಅಪಾರ ಅರಣ್ಯನಾಶಕ್ಕೆ ಕಾರಣವಾಗುವುದಲ್ಲದೇ, ಆ ಪ್ರದೇಶದಲ್ಲಿ ಅಳಿವಿನಂಚಿನಲ್ಲಿರುವ ಜೀವಪ್ರಭೇದಗಳ ವಾಸಸ್ಥಾನಕ್ಕೆ ಬದರಿಕೆ ಒಡ್ಡುತ್ತದೆ ಎಂದು ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ