ಇಡ್ಕಿದು ಗ್ರಾ.ಪಂ.ನಲ್ಲಿ ರೇಬಿಸ್‌ ಲಸಿಕೆ ಕ್ರಾಂತಿ! ಒಂದೇ ದಿನ 500ರಷ್ಟು ಚುಚ್ಚುಮದ್ದು

27 ವರ್ಷಗಳಿಂದ ಗ್ರಾಮದ ಬಹುತೇಕ ನಾಯಿಗಳಿಗೆ ಲಸಿಕೆ

Team Udayavani, Mar 19, 2023, 6:50 AM IST

ಇಡ್ಕಿದು ಗ್ರಾ.ಪಂ.ನಲ್ಲಿ ರೇಬಿಸ್‌ ಲಸಿಕೆ ಕ್ರಾಂತಿ! ಒಂದೇ ದಿನ 500ರಷ್ಟು ಚುಚ್ಚುಮದ್ದು

ಬಂಟ್ವಾಳ: ನಾಯಿಗಳಿಗೆ ರೇಬಿಸ್‌ ಬರದಂತೆ ಲಸಿಕೆ ನೀಡುವ ಪ್ರಕ್ರಿಯೆ ಅಲ್ಲಲ್ಲಿ ನಡೆಯುತ್ತಿದೆ. ಸಾಮಾನ್ಯವಾಗಿ ಯಾವುದೇ ಊರಿನ ಶಿಬಿರದಲ್ಲಿ ಹತ್ತಿಪ್ಪತ್ತು ನಾಯಿಗಳಿಗೆ ನೀಡಲಾಗುತ್ತದೆ. ಆದರೆ ಇಲ್ಲಿನ ಹಳ್ಳಿಯೊಂದರಲ್ಲಿ 27 ವರ್ಷಗಳಿಂದ ಸತತವಾಗಿ ನಿರ್ದಿಷ್ಟ ಸಮಯಕ್ಕೆ ಶಿಬಿರ ನಡೆಯುತ್ತಿದ್ದು, ಊರಿನ ಶೇ. 80ರಷ್ಟು ನಾಯಿಗಳಿಗೂ ಲಸಿಕೆ ನೀಡುತ್ತಿರುವುದು ವಿಶೇಷವಾಗಿದೆ.

ಇಂತಹ ಮಾದರಿ ಕಾರ್ಯ ನಡೆ ಯುತ್ತಿರುವುದು ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾ.ಪಂ. ವ್ಯಾಪ್ತಿಯ ಇಡ್ಕಿದು ಮತ್ತು ಕುಳ ಗ್ರಾಮಗಳಲ್ಲಿ. ಶಿಬಿರದ ಮೂಲಕ ಶೇ. 60ರಿಂದ 70ರಷ್ಟು ನಾಯಿಗಳಿಗೆ ಲಸಿಕೆ ನೀಡಲಾಗುತ್ತಿದ್ದು, ಶೇ. 10ರಷ್ಟು ನಾಯಿಗಳ ಮಾಲಕರು ತಾವೇ ಮುಂದೆ ಬಂದು ಲಸಿಕೆ ಹಾಕಿಸಿಕೊಳ್ಳುತ್ತಾರೆ. ಹೀಗಿರುವಾಗ ಗ್ರಾಮಕ್ಕೆ ಹೊರಗಿನಿಂದ ರೇಬಿಸ್‌ ಪೀಡಿತ ನಾಯಿ ಬಂದು ಕಚ್ಚಿದರೂ ಯಾವುದೇ ಆತಂಕವಿರದು ಎನ್ನುತ್ತಾರೆ ವೈದ್ಯರು.

ವಾರ್ಷಿಕ 500ರಷ್ಟು ಲಸಿಕೆ
ಊರಿನ ಪಶು ವೈದ್ಯ ಡಾ| ಕೆ.ಎಂ. ಕೃಷ್ಣ ಭಟ್ಟರು 1997ರಲ್ಲಿ ಗ್ರಾಮದಲ್ಲಿ ಈ ಲಸಿಕೆ ಶಿಬಿರ ಆರಂಭಿಸಿದ್ದು, ಪ್ರತೀ ವರ್ಷ ಒಂದೇ ದಿನಾಂಕದಂದು ನಡೆಯುವುದು ವಿಶೇಷ. ಈ ವರ್ಷದ ಶಿಬಿರ ಮಾ. 14ರಂದು ನಡೆದಿದೆ. ಸುಮಾರು 25 ಕೇಂದ್ರಗಳಲ್ಲಿ ಶಿಬಿರ ಆಯೋಜಿಸುತ್ತಿದ್ದು, ಒಟ್ಟು 5 ತಂಡಗಳು ತಲಾ 5 ಶಿಬಿರಗಳನ್ನು ನಡೆಸುತ್ತವೆ. ಪ್ರತೀ ವರ್ಷ ಸುಮಾರು 500 ನಾಯಿಗಳಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಇಡ್ಕಿದು ಪಂಚಾಯತ್‌ ಪಿಡಿಒ ಗೋಕುಲದಾಸ್‌ ಭಕ್ತ ತಿಳಿಸಿದ್ದಾರೆ.

ಶಿಬಿರಕ್ಕೆ ಸುಮಾರು 40 ಸಾವಿರ ರೂ. ಖರ್ಚಾಗುತ್ತದೆ. 500 ಲಸಿಕೆಗಳಿಗೆ 22 ಸಾವಿರ ರೂ. ಬೇಕಾಗುತ್ತದೆ. ಪಶು ಇಲಾಖೆಯ ಸಹಕಾರವಿದ್ದು, ಗ್ರಾ.ಪಂ. ನೇತೃತ್ವ ವಹಿಸಿಕೊಳ್ಳುತ್ತಿದೆ. ಇಡ್ಕಿದು ಸಿಎ ಬ್ಯಾಂಕ್‌, ಹಾಲು ಸೊಸೈಟಿ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ನೆರವಾಗುತ್ತವೆ. ಗ್ರಾಮದ ಸೇಸಪ್ಪ ಕೆರ್ದೇಲ್‌ ಅವರು ತನ್ನ ನಾಯಿಗೆ 12 ವರ್ಷಗಳಿಂದ ನಿರಂತರವಾಗಿ ಲಸಿಕೆ ಹಾಕಿಸುತ್ತಿದ್ದು, ಅದೂ ಒಂದು ದಾಖಲೆಯಾಗಿದೆ ಎಂದು ಪಂಚಾಯತ್‌ ಅಧಿಕಾರಿಗಳು ಹೇಳುತ್ತಾರೆ.

27 ವರ್ಷಗಳ ಹಿಂದೆ ಆರಂಭ
ವೃತ್ತಿನಿರತ ಪಶುವೈದ್ಯರ ವೇದಿಕೆಯ ಮೂಲಕ 1996ರಲ್ಲಿ ಜಿಲ್ಲೆಯ ಪಶು ವೈದ್ಯರ ತಂಡ ಲಸಿಕೆ ಕಾರ್ಯವನ್ನು ಆರಂಭಿಸಿದ್ದು, ಡಾ| ಕೆ.ಎಂ. ಕೃಷ್ಣ ಭಟ್ಟರು ವೇದಿಕೆಯ ಅಧ್ಯಕ್ಷರಾಗಿದ್ದರು. ಪಶುವೈದ್ಯದಲ್ಲಿ 40 ವರ್ಷಗಳ ಅನುಭವ ಹೊಂದಿರುವ ಕೃಷ್ಣ ಭಟ್ಟರು ಪ್ರಾರಂಭದಲ್ಲಿ ಸರಕಾರಿ ಸೇವೆಯಲ್ಲಿದ್ದು, ಪ್ರಸ್ತುತ ಉಪ್ಪಿನಂಗಡಿಯಲ್ಲಿ ಕ್ಲಿನಿಕ್‌ ಹೊಂದಿದ್ದಾರೆ.

ಪಶುವೈದ್ಯರ ವೇದಿಕೆಯ ಮೂಲಕ ಪ್ರಾರಂಭದ ಕೆಲವು ವರ್ಷ ನಿಡ್ಲೆ, ಏತಡ್ಕ, ಕೊಣಾಜೆ ಭಾಗದಲ್ಲಿ ಲಸಿಕೆ ಶಿಬಿರ ನಡೆದಿತ್ತು. ಇಡ್ಕಿದುವಲ್ಲಿ ಈಗಲೂ ಮುಂದುವರಿದಿದೆ.
– ಡಾ| ಕೆ.ಎಂ. ಕೃಷ್ಣ ಭಟ್‌, ಪಶು ವೈದ್ಯ

-ಕಿರಣ್‌ ಸರಪಾಡಿ

ಟಾಪ್ ನ್ಯೂಸ್

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

Bandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆBandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆ

Bandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆ

Parameshwar

CBI ಗೆ ಕೊಡುವ ಅಗತ್ಯವಿಲ್ಲ; ಅಂಜಲಿ ಪ್ರಕರಣ ಕೂಡ ಸಿಐಡಿಗೆ:ಡಾ.ಜಿ.ಪರಮೇಶ್ವರ್

1——-sdasd

Konaje; ಕಂಪೌಂಡ್ ವಾಲ್ ಕುಸಿದು ಹಾಜಬ್ಬರ ಶಾಲೆಯ ವಿದ್ಯಾರ್ಥಿನಿ ಮೃತ್ಯು

Heavy rain ಮಲೆನಾಡಲ್ಲಿ ಮುಂದುವರೆದ ಮಳೆಯ ಅಬ್ಬರ: ಜನಜೀವನ ಅಸ್ತವ್ಯಸ್ತ

Heavy rain ಕಾಫಿನಾಡಲ್ಲಿ ಮುಂದುವರಿದ ಗಾಳಿ- ಮಳೆ ಅಬ್ಬರ: ಜನಜೀವನ ಅಸ್ತವ್ಯಸ್ತ

Amit Shah 2

Rahul Gandhi ಜೂನ್ 4 ರ ನಂತರ ‘ಕಾಂಗ್ರೆಸ್ ಧುಂಡೋ ಯಾತ್ರೆ’ ನಡೆಸಬೇಕಾಗುತ್ತದೆ: ಶಾ

1-qweeqwe

Hubballi; ನೇಹಾ, ಅಂಜಲಿ ನಿವಾಸಗಳಿಗೆ ಡಾ.ಜಿ.ಪರಮೇಶ್ವರ್ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdsad

Bantwal; ರಿಕ್ಷಾ ಪಲ್ಟಿಯಾಗಿ ರಸ್ತೆಗೆ ಎಸೆಯಲ್ಪಟ್ಟ ಯುವಕ ಮೃತ್ಯು

1wewqewq

Bantwal; ಮಂಚಿಯಲ್ಲಿ ಹಿಟ್ ಆ್ಯಂಡ್ ರನ್: ಸ್ಕೂಟರ್ ಸವಾರ ಮೃತ್ಯು

bCharmady: ರಸ್ತೆಯಲ್ಲಿ ಸಿಲುಕಿದ ಕಂಟೈನರ್‌ ಲಾರಿ; ಟ್ರಾಫಿಕ್‌ ಜಾಮ್‌Charmady: ರಸ್ತೆಯಲ್ಲಿ ಸಿಲುಕಿದ ಕಂಟೈನರ್‌ ಲಾರಿ; ಟ್ರಾಫಿಕ್‌ ಜಾಮ್‌

Charmady: ರಸ್ತೆಯಲ್ಲಿ ಸಿಲುಕಿದ ಕಂಟೈನರ್‌ ಲಾರಿ; ಟ್ರಾಫಿಕ್‌ ಜಾಮ್‌

ಮಕ್ಕಳ ಕೈಗೆ ಮೊಬೈಲ್‌ ಬದಲು ಪತ್ರಿಕೆ ಕೊಡಿ; ಡಾ| ಜೋಗತಿ ಮಂಜಮ್ಮ

ಮಕ್ಕಳ ಕೈಗೆ ಮೊಬೈಲ್‌ ಬದಲು ಪತ್ರಿಕೆ ಕೊಡಿ; ಡಾ| ಜೋಗತಿ ಮಂಜಮ್ಮ

Vasantha ಬಂಗೇರರ ಮನೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ಸಾಂತ್ವನ

Vasantha ಬಂಗೇರರ ಮನೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ಸಾಂತ್ವನ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

1-wqeqwewq

Goa:ಬೋಟ್ ನಲ್ಲಿ ಅಪಾಯಕ್ಕೆ ಸಿಲುಕಿದ್ದ 26 ಪ್ರವಾಸಿಗರ ರಕ್ಷಣೆ

Bandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆBandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆ

Bandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆ

Parameshwar

CBI ಗೆ ಕೊಡುವ ಅಗತ್ಯವಿಲ್ಲ; ಅಂಜಲಿ ಪ್ರಕರಣ ಕೂಡ ಸಿಐಡಿಗೆ:ಡಾ.ಜಿ.ಪರಮೇಶ್ವರ್

1-asdsad

Bantwal; ರಿಕ್ಷಾ ಪಲ್ಟಿಯಾಗಿ ರಸ್ತೆಗೆ ಎಸೆಯಲ್ಪಟ್ಟ ಯುವಕ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.