ಡೋಕ್ಲಾಂನಲ್ಲಿ ಮತ್ತೆ ಕುತಂತ್ರ: ಭೂತಾನ್‌ನ ಅಮೊಚು ನದಿ ಸಮೀಪ ಚೀನದಿಂದ ಸೇನಾನೆಲೆ!


Team Udayavani, Apr 12, 2023, 7:20 AM IST

ಡೋಕ್ಲಾಂನಲ್ಲಿ ಮತ್ತೆ ಕುತಂತ್ರ: ಭೂತಾನ್‌ನ ಅಮೊಚು ನದಿ ಸಮೀಪ ಚೀನದಿಂದ ಸೇನಾನೆಲೆ!

ಹೊಸದಿಲ್ಲಿ/ಕಿಬಿಥೂ: ಸದಾ ಇನ್ನೊಂದು ದೇಶದ ನೆಲವನ್ನು ಕಬಳಿಸುತ್ತಲೇ ಇರಲು ಹೊಂಚುಹಾಕುವ ಚೀನ; ಸದ್ದಿಲ್ಲದೇ ಮತ್ತೆ ಭಾರತದ ಗಡಿಭಾಗದಲ್ಲಿ ಹೊಸಹೊಸ ನಿರ್ಮಾಣಗಳನ್ನು ಮಾಡುತ್ತಲೇ ಇದೆ.

2017ರಲ್ಲಿ ಭಾರತ, ಭೂತಾನ್‌, ಚೀನದ ಗಡಿಗಳಲ್ಲಿ ಬರುವ ಡೋಕ್ಲಾಮ್‌ನಲ್ಲಿ ರಸ್ತೆ ನಿರ್ಮಿಸಲು ಹೋಗಿದ್ದ ಚೀನಕ್ಕೆ ಭಾರತ ಸರಿಯಾಗಿ ತಪರಾಕಿ ಕೊಟ್ಟಿತ್ತು. ಇದೀಗ ಡೋಕ್ಲಾಂಗೆ ಸನಿಹದಲ್ಲೇ ಬರುವ ಭೂತಾನ್‌ನಲ್ಲಿರುವ ಅಮೊ ಚು ನದೀ ಭಾಗದಲ್ಲಿ 1000 ಸೈನಿಕರು ಇರುವಂತಹ ಸೇನಾನೆಲೆಯೊಂದನ್ನು ಚೀನ ಸದ್ದಿಲ್ಲದೇ ನಿರ್ಮಿಸುವ ಮೂಲಕ ಮತ್ತೆ ಉದ್ಧಟತನ ಪ್ರದರ್ಶಿಸಿದೆ. ಅಲ್ಲಿ ಶಾಶ್ವತ ವಸತಿ ಸೌಕರ್ಯಗಳಲ್ಲದೇ ತಾತ್ಕಾಲಿಕ ಶೆಡ್‌ಗಳನ್ನೂ ನಿರ್ಮಿಸಲಾಗಿದೆ. ಎರಡು ದೊಡ್ಡದೊಡ್ಡ ಸಂವಹನ ಟವರ್‌ಗಳೂ ತಲೆಎತ್ತಿವೆ. ಇದು ನೇರವಾಗಿ ಭಾರತಕ್ಕೆ ಸವಾಲು ಹಾಕುವಂತಿದೆ ಎಂದು “ಇಂಡಿಯಾ ಟುಡೇ’ ವರದಿ ಮಾಡಿದೆ.

ಕಾರಿಡಾರ್‌ ಮೇಲೆ ಕಣ್ಣು: ಡೋಕ್ಲಾಂನ ಮತ್ತೂಂದು ಗಡಿಯಲ್ಲಿ ಬರುವ ಸಿಕ್ಕಿಂನಲ್ಲಿ ಭಾರತ ಸಿಲಿಗುರಿ ಕಾರಿಡಾರ್‌ ನಿರ್ಮಿಸಿದೆ. ಅಮೊ ಚುನಲ್ಲಿ ಹೊಸ ನಿರ್ಮಾಣದಿಂದ ಸಿಲಿಗುರಿ ಕಾರಿಡಾರ್‌ ಮೇಲೆ ಚೀನ ಹದ್ದಿನ ಕಣ್ಣಿಡಲು ಸಾಧ್ಯವಾಗಲಿದೆ.

ಭೂತಾನ್‌ನ ಹಾ ಜಿಲ್ಲೆಯಲ್ಲಿರುವ ಡೋಕ್ಲಾಂ ಮೂರು ದೇಶಗಳ ಗಡಿ ಭಾಗದಲ್ಲಿದೆ. ಇಲ್ಲಿ ಭೂತಾನ್‌ ಮತ್ತು ಚೀನ ಸೇನೆ ಪಹರೆ ನಡೆಸುವುದು ತೀರಾ ಕಡಿಮೆ. ಈಗ ಡೋಕ್ಲಾಂಗೆ ಸನಿಹವಾಗಿ ಮತ್ತೂಂದು ದಾರಿಯನ್ನು ಚೀನ ಕಂಡುಕೊಂಡಿದೆ. ವಿಚಿತ್ರವೆಂದರೆ ಚೀನದೊಂದಿಗೆ ಗಡಿಯ ವಿಚಾರದಲ್ಲಿ ಸದಾ ಸಂಘರ್ಷ ನಡೆಸಿಕೊಂಡೇ ಬಂದಿದ್ದ ಭೂತಾನ್‌ ನಿಲುವು ತುಸು ಬದಲಾದಂತಿದೆ. ಅದರ ಪ್ರಧಾನಿ ಲೊಟೇ ತೆರಿಂಗ್‌ ಇತ್ತೀಚೆಗೆ ಡೋಕ್ಲಾಂ ಮೇಲೆ ಚೀನಕ್ಕೂ ಅಷ್ಟೇ ಹಕ್ಕಿದೆ ಎಂದು ಹೇಳಿದ್ದರು!

ಚೀನ ಆಕ್ಷೇಪಕ್ಕೆ ಭಾರತ ತಿರುಗೇಟು
ಅರುಣಾಚಲಪ್ರದೇಶಕ್ಕೆ ಸಚಿವ ಶಾ ಭೇಟಿಯನ್ನು ವಿರೋಧಿಸಿದ್ದ ಚೀನಗೆ ಭಾರತ ಮಂಗಳವಾರ ಪ್ರತ್ಯುತ್ತರ ನೀಡಿದೆ. “ಅರುಣಾಚಲವು ಹಿಂದೆ, ಇಂದು, ಮುಂದೆ ಎಂದೆಂದೂ ಭಾರತದ ಅವಿಭಾಜ್ಯ ಅಂಗವೇ ಆಗಿರಲಿದೆ. ಚೀನದ ವಿದೇಶಾಂಗ ವಕ್ತಾರ ನೀಡಿರುವ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ನೀವು ವಿರೋಧಿಸಿದ ತತ್‌ಕ್ಷಣ ವಾಸ್ತವವೇನೂ ಬದಲಾಗದು’ ಎಂದು ಭಾರತದ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್‌ ಬಗಿc ಹೇಳಿದ್ದಾರೆ.

ಗಡಿ ಭದ್ರತೆಗೆ ಮೋದಿ ಸರಕಾರ ಬದ್ಧ: ಶಾ
ಅರುಣಾಚಲ ಪ್ರದೇಶದ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, “ಗಡಿ ಪ್ರದೇಶಗಳ ಭದ್ರತೆ ಮತ್ತು ಅಭಿವೃದ್ಧಿಗೆ ಮೋದಿ ಸರಕಾರ ಬದ್ಧವಾಗಿದೆ’ ಎಂದು ಹೇಳಿದ್ದಾರೆ. ಚೀನದೊಂದಿಗೆ ಗಡಿ ಹಂಚಿಕೊಂಡಿರುವ ಕಿಬಿಥೂ ಗ್ರಾಮದಲ್ಲಿ ಸಿಎಂ ಪೆಮಾ ಖಂಡು, ಡಿಸಿಎಂ ಚೌನಾ ಮೈನ್‌ ಮತ್ತು ಇತರರೊಂದಿಗೆ ಮಂಗಳವಾರ ನಡೆಸಿದ ಸಭೆಯಲ್ಲಿ ಶಾ ಈ ಮಾತುಗಳನ್ನಾಡಿದ್ದಾರೆ. ಇದೇ ವೇಳೆ, ದಿಬ್ರುಗಢದಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಶಾ, “ಮುಂದಿನ ವರ್ಷದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯ ಸಾಧಿಸಿ ಮತ್ತೆ ಅಧಿಕಾರಕ್ಕೇರಲಿದೆ. ಈಶಾನ್ಯ ರಾಜ್ಯಗಳಲ್ಲಿ 14ರ ಪೈಕಿ 12 ಕ್ಷೇತ್ರಗಳಲ್ಲಿ ಗೆಲವು ದಾಖಲಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟಾಪ್ ನ್ಯೂಸ್

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್

Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್

Passenger hiding snakes in pants intercepted at Miami airport

Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Terror Attack On IAF Convoy In poonch

Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ

1-wwewewqe

Temple; ಎಪ್ರಿಲ್‌ನಲ್ಲಿ ತಿರುಪತಿ ಹುಂಡಿಗೆ ಬಿದ್ದ ಕಾಣಿಕೆ ಎಷ್ಟು ಗೊತ್ತೇ?

court

Wife ಜತೆ ಅಸ್ವಾಭಾವಿಕ ಲೈಂಗಿಕಕ್ರಿಯೆಯು ರೇಪ್‌ ಅಲ್ಲ: ಹೈಕೋರ್ಟ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Arrested: ಭೂ ಅವ್ಯವಹಾರ; ಬೆಂ.ವಿ.ವಿ. ಪ್ರೊ.ಮೈಲಾರಪ್ಪ ಬಂಧನ

Arrested: ಭೂ ಅವ್ಯವಹಾರ; ಬೆಂ.ವಿ.ವಿ. ಪ್ರೊ.ಮೈಲಾರಪ್ಪ ಬಂಧನ

Arrested: ಯೂಟ್ಯೂಬ್‌ ನೋಡಿ ದ್ವಿಚಕ್ರ ವಾಹನ ಕದ್ದಿದ್ದ ಯುವಕ ಬಂಧನ  

Arrested: ಯೂಟ್ಯೂಬ್‌ ನೋಡಿ ದ್ವಿಚಕ್ರ ವಾಹನ ಕದ್ದಿದ್ದ ಯುವಕ ಬಂಧನ  

Chikkmagaluru; ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ

Chikkmagaluru; ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.