karnataka election 2023; ನಾಮಪತ್ರ ಸಲ್ಲಿಕೆ ಹಿನ್ನೆಲೆ: ರಸ್ತೆ ಮಾರ್ಗ ಬದಲಾವಣೆ
Team Udayavani, Apr 15, 2023, 7:58 AM IST
ಹುಣಸೂರು: ನಾಮಪತ್ರಸಲ್ಲಿಕೆ ಹಿನ್ನೆಲೆಯಲ್ಲಿ ತಾಲೂಕು ಕಚೇರಿ ಮುಂಬಾಗದ ಹೆದ್ದಾರಿಯಲ್ಲಿ ಜನ ದಟ್ಟಣೆ ಹೆಚ್ಚುವುದರಿಂದ ಹೆದ್ದಾರಿಯಲ್ಕಿ ತೆರಳುವ ಎಲ್ಲಾ ವಾಹನಗಳು ಏ 15 ರ ಶನಿವಾರ ದಂದು ಹುಣಸೂರು ನಗರದೊಳಗಿನ ಹಳೇ ಬಿ ಎಂ.ರಸ್ತೆಯಲ್ಲಿ ಸಂಚರಿಸುವಂತೆ ಮಾರ್ಗ ಉಪ ವಿಭಾಗಾಧಿಕಾರಿ ರುಚಿ ಬಿಂದಾಲ್ ಆದೇಶಿಸಿದ್ದಾರೆ.
ಹುಣಸೂರು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಗಳಾದ ಕಾಂಗ್ರೆಸ್ ಪಕ್ಷದ ಎಚ್.ಪಿ.ಮಂಜುನಾಥ್ ಹಾಗೂ ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್ ಗೌಡ ರವರು ಏ.15 ರ ಶನಿವಾರ ನಾಮಪತ್ರಸಲ್ಲಿಸುತ್ತಿರುವುದರಿಂದ ಹೆದ್ದಾರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಹಿನ್ನೆಲೆಯಲ್ಲಿ ಏ 15 ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆವರೆಗೆ ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲಾ ವಾಹನಗಳು ನಗರ ಪ್ರವೇಶಿಸುವ ದೇವರಾಜ ಅರಸು ಪುತ್ಥಳಿ ಬಳಿ ಜಂಕ್ಷ ನ್ ನಿಂದ ಹಳೇ ಬಿ ಎಂ ರಸ್ತೆ ಮಾರ್ಗವಾಗಿ ನಿಲುವಾಗಿಲು ಜಂಕ್ಷನ್ ಮೂಲಕ ಮಡಿಕೇರಿ ರಸ್ತೆಗೆ ತೆರಳಲು ಮಾರ್ಗ ಬದಲಾಯಿಸಿ ಆದೇಶಿಸಿ. ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.