ಶ್ವಾನ ಬೊಗಳಿದ್ದಕ್ಕೆ ಪ್ರತೀಕಾರ: ಡ್ರಗ್ಸ್ ಹೆಸರಲ್ಲಿ ನಟಿ ಬಂಧನ !
Team Udayavani, Apr 26, 2023, 7:22 AM IST
ಮುಂಬಯಿ: ನೆರೆಮನೆಯ ನಾಯಿ ಬೊಗಳಿದರೆ, ಕಚ್ಚಲು ಬಂದರೆ ಏನು ಮಾಡಬಹುದು ? ಶ್ವಾನವನ್ನು ಗದರಿಸಿಯೋ, ಅದರ ಮಾಲಕರಿಗೆ ಎಚ್ಚರ ವಹಿಸುವಂತೆ ತಿಳಿಸಿಯೋ ಪ್ರತಿಕ್ರಿಯಿ ಸಿಬಹುದು. ಆದರೆ ಮುಂಬಯಿಯ ವ್ಯಕ್ತಿಯೊಬ್ಬ ಶ್ವಾನ ಬೊಗಳಿದ್ದಕ್ಕಾಗಿ ಅದರ ಮಾಲಕರ ಬದುಕನ್ನೇ ಹಾಳುಗೆಡವುವಂಥ ಪ್ರತೀಕಾರ ತೆಗೆದು ಕೊಂಡಿದ್ದಾನೆ. ಇದು ಬೇರಾ ವುದೋ ಘಟನೆಯಲ್ಲ, ಇತ್ತೀಚೆ ಗಷ್ಟೇ ದುಬಾೖಯ ಶಾರ್ಜಾದಲ್ಲಿ ಮಾದಕ ವಸ್ತು ಕಳ್ಳಸಾಗಣೆ ಆರೋಪ ದಲ್ಲಿ ಸಿಕ್ಕಿಬಿದ್ದ ಬಾಲಿವುಡ್ ನಟಿ ಕ್ರಿಸೈನಾ ಪಿರೇರಾ ಅವರ ಪ್ರಕರಣ.. ಆಕೆ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ್ದಕ್ಕೆ ಕಾರಣವೇ ಶ್ವಾನ..!
ಹೌದು, ಕ್ರಿಸೈನಾ ಪಿರೇರಾ ಅವರ ತಾಯಿ ಪ್ರಮೀಳಾ ಪಿರೇರಾ ಅವರ ಶ್ವಾನ, ಆ್ಯಂಥೋನಿ ಪೌಲ್ ಎಂಬವರನ್ನು ಬೊಗಳಿ, ಕಚ್ಚಲು ಹೋಗಿದೆ. ಅದರಿಂದ ತಪ್ಪಿಸಿಕೊಳ್ಳಲು ಆ್ಯಂಥೋನಿ ನಾಯಿಗೆ ಹೊಡೆಯಲು ಮುಂದಾದಾಗ, ಪ್ರಮೀಳಾ ಆತನನ್ನು ನಿಂದಿಸಿ, ಹಲವರ ಮುಂದೆ ಅವಮಾನಿಸಿದ್ದಾರೆ.
ಇದಕ್ಕೆ ಪ್ರತೀಕಾರವಾಗಿ ಆ್ಯಂಥೋನಿ, ರವಿ ಎಂಬವರ ಸಹಾಯ ಪಡೆದು, ಪ್ರಮೀಳಾರನ್ನು ರಿಯಲ್ ಎಸ್ಟೇಟ್ ವಿಚಾರವಾಗಿ ಪರಿಚಯಿಸಿಕೊಂಡು, ಮಗಳ ಮಾಹಿತಿ ಪಡೆದಿದ್ದಾರೆ. ಆಕೆ ನಟಿ ಎಂದು ತಿಳಿದ ಬಳಿಕ ಮಾಡೆಲಿಂಗ್ ಕಾರ್ಯಕ್ರಮವೊಂದರಲ್ಲಿ ಅವಕಾಶವಿರುವುದಾಗಿ ತಿಳಿಸಿ ದುಬಾೖಗೆ ತೆರಳುವಂತೆ ಸೂಚಿಸಿ, ಹೊರಡುವಾಗ ಆಕೆಗೆ ಡ್ರಗ್ಸ್ ಅಡಗಿಸಿಟ್ಟಿದ್ದ ಟ್ರೋಫಿ ನೀಡಿದ್ದರು. ಇದ್ಯಾವುದರ ಬಗ್ಗೆಯೂ ಅರಿವೇ ಇಲ್ಲದ ನಟಿ ಶಾರ್ಜಾದಲ್ಲಿ ಟ್ರೋಫಿ ತಪಾಸಣೆ ವೇಳೆ ಡ್ರಗ್ಸ್ ಪತ್ತೆಯಾದ ಕಾರಣ ಸಿಕ್ಕಿಬಿದ್ದು, ಜೈಲು ಸೇರಿದ್ದಾರೆ.
ತನಿಖೆಯಲ್ಲಿ ಸಿಕ್ಕಿಬಿದ್ದ ಭೂಪ: ನಟಿ ಬಂಧನದ ಬಳಿಕ ಪ್ರಮೀಳಾರ ಮನವಿ ಮೇರೆಗೆ ಮುಂಬಯಿ ಪೊಲೀಸರು ಪ್ರಕರಣ ತನಿಖೆ ನಡೆಸಿದ್ದಾರೆ. ಈ ವೇಳೆ ವಿಚಾರ ಬಹಿರಂಗಗೊಂಡಿದೆ. ಈಗ ಆ್ಯಂಥೋನಿ ಹಾಗೂ ರವಿಯನ್ನು ಪೊಲೀಸರು ಬಂಧಿಸಿದ್ದು, ಶಾರ್ಜಾ ಪೊಲೀಸರಿಗೂ ಪ್ರಕರಣದ ತನಿಖೆಯ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್
Goa ;ಬೀಚ್ ನಲ್ಲಿ ಸಿಡಿಲಿನ ಆಘಾತಕ್ಕೆ ಕೇರಳದ ಪ್ರವಾಸಿಗ ಮೃತ್ಯು
AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್
PM Modi ಪತ್ರಿಕಾಗೋಷ್ಠಿ ಯಾಕೆ ನಡೆಸುವುದಿಲ್ಲ? ಉತ್ತರಿಸಿದ ಪ್ರಧಾನಿ ಮೋದಿ
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ
Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ
Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್