Article: ಸ್ವನಿಯಂತ್ರಣವೇ ಯಶಸ್ಸಿನ ಮೆಟ್ಟಿಲು


Team Udayavani, Oct 26, 2023, 1:12 AM IST

self control

ಯಶಸ್ಸಿನ ಬೆನ್ನೇರಿ ಹೊರಟಿರುವ ಯುವ ಸಮು ದಾಯ ಅದಕ್ಕಾಗಿ ಬೇರೆ ಬೇರೆ ದಾರಿಗಳನ್ನು ತುಳಿಯು ತ್ತಿದ್ದು, ಅವುಗಳಲ್ಲಿ ಎಲ್ಲವೂ ಸರಿಯಾದ ಮಾರ್ಗವಲ್ಲ ಎಂಬುದು ಅರಿವಾಗುವ ಹೊತ್ತಿಗೆ ಸಾಕಷ್ಟು ಹಿನ್ನಡೆ ಆಗಿರುತ್ತದೆ. ಆಗಲೂ ಎಚ್ಚೆತ್ತುಕೊಳ್ಳದೆ ತಾನು ಕಂಡು ಕೊಂಡದ್ದೇ ಸರಿಯಾದುದು ಎಂಬಂತೆ ಬಹುತೇಕರು ವರ್ತಿಸುತ್ತಿರುವುದು ಅವರಿಗೆ ವೈಯಕ್ತಿಕವಾಗಿಯೂ ದೊಡ್ಡ ಹಾನಿ ಮಾಡಿರುತ್ತದೆ, ಪರೋಕ್ಷವಾಗಿ ಸಮಾಜದ ಮೇಲೂ ಪರಿಣಾಮ ಬೀರಿರುತ್ತದೆ.

ಯುವ ಸಮುದಾಯವನ್ನು ಕಾಡುತ್ತಿರುವ ಸಮಸ್ಯೆ ಗಳು, ಅವರಿಗೆ ಎದುರಾಗುವ ತೊಡುಕುಗಳು ಹಲ ವಾರಿವೆ. ಆದರೆ ಬಹುತೇಕ ಅವರೇ ಸೃಷ್ಟಿಸಿಕೊಂಡದ್ದು ಹಾಗೂ ಇನ್ನೂ ಕೆಲವು ವಿವೇಚನೆಯ ಕೊರತೆಯಿಂದ ಉಂಟಾದದ್ದು. ಋಣಾತ್ಮಕ ವಿಷಯಗಳಿಗೆ ಹೆಚ್ಚು ಆಕರ್ಷಣೆಗೆ ಒಳಗಾಗುತ್ತಿರುವುದು, ಯುವ ಮನಸ್ಸಿನ ಲ್ಲಿರುವ ಚಂಚಲತೆ ಮುಂತಾದವು ಯಶಸ್ಸಿನ ಪಥದಲ್ಲಿ ಸಿಗುವ ದೊಡ್ಡ ಸವಾಲು. ಆದರೆ ಯುವ ಸಮುದಾ ಯವು ಸ್ವನಿಯಂತ್ರಣದ ಕಡೆಗೆ ಒತ್ತು ನೀಡಿದರೆ ಯಶ ಸ್ಸಿನ ಸೌಧದ ಮೊದಲ ಮೆಟ್ಟಿಲನ್ನು ಏರುವುದು ಸುಲಭ.

ಯುವ ಮನಸ್ಸುಗಳನ್ನು ಬೇರೆ ಬೇರೆ ಶಕ್ತಿಗಳು ತಮ್ಮತ್ತ ಸೆಳೆಯುವುದು ಸಹಜ. ಮಾಗದ ಮನಸ್ಸುಗಳು ಸುಲ ಭವಾಗಿ ಅವುಗಳತ್ತ ಆಕರ್ಷಿತವಾಗುವುದು ಸಹಜ ವಾದರೂ ವಾಸ್ತವವನ್ನು ಅರಿತುಕೊಂಡು ಜವಾಬ್ದಾರಿ ಯಿಂದ ವರ್ತಿಸಿದರೆ ಸಮಸ್ಯೆಯ ಹೊಂಡದಲ್ಲಿ ಬೀಳು ವುದನ್ನು ತಪ್ಪಿಸಿಕೊಳ್ಳಬಹುದು. ಈ ಸಮಾಜವು ಒಳಿತು -ಕೆಡುಕುಗಳಿಂದ ತುಂಬಿಕೊಂಡಿದ್ದು, ತಮಗೆ ಬೇಕಾದು ದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆಕರ್ಷಿತವಾಗಿರುವುದರಲ್ಲಿ ಅಪಾಯ ಹೆಚ್ಚೇ. ಒಳಿತಿನ ಅಂಶಗಳು ಬೇಗನೆ ಮನಸ್ಸನ್ನು ಸೆಳೆಯದಿದ್ದರೂ ಹಠ ಹಿಡಿದು ಅದರ ರುಚಿಯನ್ನು ಆಸ್ವಾದಿಸಲು ಸಫ‌ಲ ರಾದರೆ ನಾವು ಗೆಲುವಿನ ಮೆಟ್ಟಿಲನ್ನು ಏರುತ್ತಿದ್ದೇವೆ ಎಂದೇ ಅರ್ಥ.

ಎಲ್ಲವನ್ನೂ ಹಿರಿಯರೇ ನಿಯಂತ್ರಿಸುವುದು ಕಷ್ಟ
ಮಕ್ಕಳು ತಪ್ಪು ದಾರಿಯಲ್ಲಿ ಸಾಗಬಾರದು ಎಂಬುದು ಎಲ್ಲರೂ ಕಾಳಜಿ ವಹಿಸಿ ಎಚ್ಚರಿಕೆಯಿಂದಿರುತ್ತಾರೆ. ಆದರೆ ಮಕ್ಕಳ ಪ್ರತಿಯೊಂದು ವಿಷಯವನ್ನೂ ನಿಯಂತ್ರಿ ಸುವುದು ಹೆತ್ತವರಿಗೆ ಸಾಧ್ಯವಿಲ್ಲ. ಹೆತ್ತವರ ಮುಂದೆ ಒಂದು, ಗೆಳೆಯರ ಜತೆಗೆ ಇನ್ನೊಂದು, ಸಮಾಜದಲ್ಲಿ ಮತ್ತೂಂದು ರೀತಿಯ ವರ್ತನೆ ತೋರುವವರೂ ಸಾಕಷ್ಟು ಮಂದಿಯಿದ್ದಾರೆ. ಅವರ ನಡೆನುಡಿ ಪ್ರಾಮಾಣಿಕವಾಗಿರುವುದಿಲ್ಲ. ಇದು ಅವರ ಯಶಸ್ಸಿನ ಪಥಕ್ಕೆ ದೊಡ್ಡ ಬೇಲಿ ಹಾಕುತ್ತದೆ. ಹಾಗೆಂದು ಯುವ ಸಮುದಾಯ ತಪ್ಪು ದಾರಿಯಲ್ಲಿ ಸಾಗಬೇಕೆಂದೇ ಈ ರೀತಿ ನಡೆದುಕೊಳ್ಳುತ್ತಿಲ್ಲ. ಅದೆಲ್ಲವೂ ಆ ಕ್ಷಣದ ಆಕರ್ಷ ಣೆಯಷ್ಟೆ. ಅದು ತಪ್ಪು ಎಂಬುದು ಅವರಿಗೆ ಗೊತ್ತಿರು ತ್ತದೆ, ಹಾಗಿದ್ದರೂ ಅದರತ್ತ ಮನಸ್ಸು ಹರಿಯದಂತೆ ನೋಡಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇವ ತ್ತೂಂದು ದಿನ ನಾಳೆಯಿಂದ ಬಿಟ್ಟರಾಯಿತು ಎಂದು ರುಚಿ ನೋಡಿ ತಪ್ಪು ದಾರಿಯ ಆರಂಭಿಕ ಹೆಜ್ಜೆ ಇಡು ವವರು ಎಲ್ಲರನ್ನೂ ಕತ್ತಲೆಯಲ್ಲಿಟ್ಟುಕೊಂಡೇ ಆ ಪಥ ದಲ್ಲಿ ತುಂಬಾ ದೂರ ಸಾಗಿರುತ್ತಾರೆ.

ಅಷ್ಟು ಹೊತ್ತು ಹೆತ್ತವರಿಗೂ ಅದು ತಿಳಿದಿರುವುದಿಲ್ಲ. ಕೆಲವು ಸಂದರ್ಭ ಗಳಲ್ಲಿ ಮಕ್ಕಳ ಮೇಲೆ ಅತಿಯಾದ ವಿಶ್ವಾಸ, ಇನ್ನು ಕೆಲವು ಸಂದರ್ಭಗಳಲ್ಲಿ ನಿರ್ಲಕ್ಷ್ಯ, ಇನ್ನು ಕೆಲವು ಸಂದರ್ಭ ಗಳಲ್ಲಿ ಮಕ್ಕಳೇ ವ್ಯವಸ್ಥಿತವಾಗಿ ಹೆತ್ತವ ರನ್ನು ಕತ್ತಲೆಯಲ್ಲಿಡುವಲ್ಲಿ ಸಫ‌ಲರಾಗುವುದೇ ಪರಿಸ್ಥಿತಿ ಕೈಮೀರಲು ಕಾರಣ. ಆದ್ದರಿಂದ ತಪ್ಪು ಎಂಬುದು ತಿಳಿದಿ ದ್ದರೂ ಅದೇ ದಾರಿಯಲ್ಲಿ ಕುತೂಹಲ ಅಥವಾ ಆಸಕ್ತಿ ಗಾಗಿ ಹೆಜ್ಜೆ ಇಡುವುದು ತಮಗೆ ತಾವೇ ಮಾಡಿಕೊಳ್ಳುವ ಮಹಾಮೋಸ ಎನ್ನಬೇಕಾಗುತ್ತದೆ.

ಮುಕ್ತವಾಗಿರಲಿ
ತಾವು ಏನು ಮಾಡಿದರೂ ಅದನ್ನು ಎಲ್ಲಿ ರಹಸ್ಯ ವಾಗಿಟ್ಟರೂ ಮನೆಯಲ್ಲಿ ಮಾತ್ರ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. ಮನೆಮಂದಿ ನಮ್ಮ ಹಿತೈಷಿಯಾಗಿ ರುತ್ತಾರೆ ಹಾಗೂ ತಪ್ಪನ್ನು ಕ್ಷಮಿಸಿ, ತಿದ್ದಿ ನಡೆಯಲು ಪ್ರೇರೇಪಿಸುತ್ತಾರೆ. ತಪ್ಪು ಮಾಡುವುದು ಸಹಜ. ಆದರೆ ಅದನ್ನು ಒಪ್ಪಿಕೊಳ್ಳದಿರುವುದು ಅಥವಾ ಗುಟ್ಟಾಗಿರಿ ಸಿಕೊಳ್ಳುವುದು ಮಹಾಪರಾಧ. ತಪ್ಪು ಮಾಡಿದ ಮಾತ್ರಕ್ಕೆ ಯಾರೂ ಸಂಕಷ್ಟಕ್ಕೆ ಸಿಲುಕಬೇಕಾಗಿಲ್ಲ. ಮಾಡಿರುವ ತಪ್ಪನ್ನು ಗುಟ್ಟಾಗಿಟ್ಟು ಮನಸ್ಸಿನಲ್ಲೇ ಕೊರಗುತ್ತಿದ್ದರೆ ಅಥವಾ ಆ ತಪ್ಪುಗಳನ್ನು ಮನೆ ಹಾಗೂ ಸಮಾಜಕ್ಕೆ ಅರಿಯದಂತೆ ಮತ್ತೆ ಮತ್ತೆ ಮಾಡುತ್ತಲೇ ಇರುವುದು ವ್ಯಕ್ತಿಯ ಹಿತಕ್ಕೆ ಅತೀ ಮಾರಕವಾಗಿ ಪರಿಣಮಿಸುತ್ತದೆ. ನಮ್ಮ ನಡೆನುಡಿ ಮುಕ್ತವಾಗಿದ್ದರೆ ಸರಿತಪ್ಪುಗಳನ್ನು ವಿಮರ್ಶಿಸಲು ಸಾಧ್ಯವಾಗುತ್ತದೆ.

ಸ್ವವಿಮರ್ಶೆ ಯಶಸ್ಸಿಗೆ ಪೂರಕ
ನಾವು ನಮ್ಮ ನಡೆನುಡಿಯನ್ನು ಸ್ವವಿಮರ್ಶೆಗೆ ಒಳ ಪಡಿಸಿ, ಸರಿ ಯಾವುದು, ತಪ್ಪು ಯಾವುದು ಎಂಬುದರ ಬಗ್ಗೆ ನಾವೇ ವಿಮರ್ಶಿಸಿಕೊಂಡರೆ ಅದರಿಂದ ಉತ್ತಮ ಫ‌ಲಿತಾಂಶ ಸಿಗಲು ಸಾಧ್ಯ. ಜೀವನದಲ್ಲಿ ಸೋತವರು, ಗೆದ್ದವರು, ಸೋತು ಗೆದ್ದವರು ಹಾಗೂ ಗೆದ್ದು ಸೋತವರ ಬದುಕನ್ನು ಒಂದು ನಿರ್ಧಾರವೇ ರೂಪಿಸಿರುತ್ತದೆ. ಇದಕ್ಕೆ ನಮ್ಮ ಕಣ್ಣ ಮುಂದೆಯೇ ಸಾಕಷ್ಟು ಉದಾ ಹರಣೆಗಳು ಸಿಗುತ್ತವೆ. ಅದರ ಜತೆಗೆ ನಮ್ಮನ್ನು ಹೋಲಿಸಿ ಕೊಂಡು ವಿಮರ್ಶೆ ಮಾಡಿಕೊಳ್ಳುವುದು, ತಪ್ಪಿದ್ದೆಲ್ಲಿ ಅಥವಾ ತಾನು ತಪ್ಪುತ್ತಿದ್ದೇನೆಯೇ ಎಂದು ತಿಳಿದು ಕೊಳ್ಳಲು ಇದು ಹೆಚ್ಚು ಪೂರಕವಾಗಿದೆ. ಪ್ರಾಮಾಣಿ ಕವಾಗಿ ಸ್ವವಿಮರ್ಶೆ ಮಾಡಿಕೊಂಡು ತಿದ್ದಿಕೊಡು ಅಪಾಯದಿಂದ ತಪ್ಪಿಸಿಕೊಳ್ಳಲು ಇರುವ ದಾರಿಯನ್ನೂ ನಾವು ಅವಗಣಿಸಿ, ತಪ್ಪು ದಾರಿಯನ್ನೇ ಆಯ್ಕೆ ಮಾಡಿ ಕೊಂಡರೆ ಮುಂದಿನದನ್ನು ಊಹಿಸಿಕೊಳ್ಳಲೂ ಕಷ್ಟ. ಸ್ವನಿ ಯಂತ್ರಣ ಎಂಬುದು ನಮಗೆ ನಾವೇ ಹಾಕಿ ಕೊಳ್ಳುವ ಕಡಿವಾಣ. ಇದು ಎಲ್ಲರಿಗೂ ಅತೀ ಅಗತ್ಯವಾಗಿದೆ.

ಕೆಡುಕಿನೆಡೆಗೆ ಸೆಳೆತ ಹೆಚ್ಚು
ಕೆಡುಕು ಯಾವತ್ತೂ ಆಕರ್ಷಕವಾಗಿರುತ್ತದೆ. ಅಂಥ ಕೆಡುಕಿನ ಕಡೆಗೆ ನಮ್ಮನ್ನು ಸೆಳೆಯುವ ಶಕ್ತಿಗಳು ಸಮಾಜದಲ್ಲಿ ಆಳವಾಗಿ ಬೇರೂರಿರುತ್ತವೆ. ಅದು ಸಭ್ಯ ತೆಯ ಸೋಗನ್ನೂ ಹಾಕಿಕೊಂಡಿರಬಹುದು. ಅದರ ಬಗ್ಗೆ ಎಚ್ಚರದಿಂದಿರುವುದು ಅತೀ ಅಗತ್ಯ. ಈ ಸಮಾ ಜವು ನಾವು ನೋಡಿದಂತೆ ಇರುವುದೇ ಇಲ್ಲ. ಎಲ್ಲವೂ ಕೃತಕ. ಸಭ್ಯ, ಗೌರವಾನ್ವಿತ ಎಂದು ಕರೆಸಿಕೊಳ್ಳು ವವರೆಲ್ಲರೂ ಅದಕ್ಕೆ ಅರ್ಹರು ಎನ್ನುವಂತಿಲ್ಲ. ಆದ್ದರಿಂದ ನಾವು ಯಾರೊಂದಿಗೆ ಹೇಗೆ ವ್ಯವಹರಿಸುತ್ತೇವೆ, ಅವರು ಎಷ್ಟು ವಿಶ್ವಾಸಾರ್ಹರು, ಅವರ ನಡೆನುಡಿ ಪ್ರಾಮಾಣಿ ಕವಾಗಿದೆಯೇ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. “ಬೆಳ್ಳಗೆ ಕಂಡದ್ದೆಲ್ಲ ಹಾಲಲ್ಲ’ ಎಂಬ ನಮ್ಮ ಹಿರಿ ಯರ ಮಾತು ಸದಾ ಸ್ಮರಣೀಯ ಹಾಗೂ ಆ ಮಾತು ಸದಾ ನಮ್ಮ ಜಾಗೃತಗೊಳಿಸುತ್ತಿರಬೇಕು. “ಸಹವಾಸ ದೋಷದಿಂದ ಕೆಟ್ಟು ಹೋದ’ ಎಂಬ ಮಾತು ಕೂಡ ಸಾಮಾನ್ಯ. ಆದರೆ ಸಹವಾಸ ನಮ್ಮನ್ನು ಕೆಡಿಸುವುದಲ್ಲ, ಕೆಟ್ಟ ಸಹವಾಸವನ್ನು ದೀರ್ಘ‌ ಕಾಲ ನಾವು ಜೀವಂತ ಇರಿಸಿಕೊಳ್ಳುವುದು ನಾವು ದಾರಿ ತಪ್ಪಲು ಪ್ರಮುಖ ಕಾರಣ.

ಸಮಾಜಕ್ಕೂ ಇದೆ ಜವಾಬ್ದಾರಿ
ನಾವು ವೇದಿಕೆಯಲ್ಲಿ ಸಾಕಷ್ಟು ಉಪದೇಶ, ಹೊಗ ಳಿಕೆಯ ಮಾತುಗಳನ್ನು ಕೇಳುತ್ತಿರುತ್ತೇವೆ. ಗೌರವಾ ನ್ವಿತರು ಹಾಗೂ ಪ್ರಾಮಾಣಿಕರು ಎಂದು ಕೆಲವರನ್ನು ವೇದಿಕೆಯ ಗೌರವ ಕೊಟ್ಟು ಉಪಚರಿಸುತ್ತೇವೆ. ಆದರೆ ಅವರು ಅದಕ್ಕೆ ಎಷ್ಟು ಅರ್ಹರು?, ಸಮಾಜಕ್ಕೆ ಅವರ ಕೊಡುಗೆ ಏನು?, ಅವರ ನಡೆನುಡಿ ಎಷ್ಟು ಪ್ರಾಮಾಣಿ ಕವಾಗಿದೆ? ಎಂಬುದನ್ನು ವಿಮರ್ಶಿಸಿಯೇ ನಾಲ್ಕು ಮಂದಿಯ ಮುಂದೆ ಯಾರನ್ನಾದರೂ ಗೌರವಿಸಬೇಕು. ಹೀಗೆ ಗೌರವ ಪಡೆದುಕೊಂಡವರ ಬಗ್ಗೆ ಮಕ್ಕಳು ಉತ್ತಮ ಭಾವನೆ ಬೆಳೆಸಿಕೊಳ್ಳುವುದು ಸಹಜ. ಆದರೆ ನಾವು ವೇದಿಕೆಯ ಗೌರವ ಕೊಡುವವರು ಗೋಮುಖ ವ್ಯಾಘ್ರರಾಗಿದ್ದರೆ, ಅವರಲ್ಲಿ ಗೋಸುಂಬೆಯಂಥ ಬಣ್ಣ ಬದಲಾಯಿಸುವ ಸ್ವಭಾವದವರಾಗಿದ್ದರೆ, ಹೊರಗೆ ಸಭ್ಯರಂತೆ ಕಂಡು ಒಳಗೆ ಜನರನ್ನು ಪರೋಕ್ಷವಾಗಿ ಶೋಷಿಸುವವರಾಗಿದ್ದರೆ ಅದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ಗಣ್ಯರು ಎಂದು ಸಮಾಜಕ್ಕೆ ಯಾರನ್ನಾದರೂ ಪರಿಚಯ ಮಾ ಡುವ ಮೊದಲು ಸಾಕಷ್ಟು ಬಾರಿ ಚಿಂತಿಸಬೇಕಾಗಿದೆ. ನಕಲಿ ಗಣ್ಯರು ಅಥವಾ ಗೋಸುಂಬೆ ವರ್ತನೆಯ ಸಭ್ಯರನ್ನು ವೈಭವೀಕರಿಸುವುದು ಖಂಡಿತಾ ಸರಿಯಲ್ಲ.

ಬಾಳಿನಲ್ಲಿ ಒಳಿತು, ಕೆಡುಕಿನ ತಿರುವು ಸಿಗಲು ಗಂಭೀರ ಕಾರಣಗಳು ಬೇಕೆಂದಿಲ್ಲ. ಆದರೆ ನಾವು ನಮ್ಮ ಮನಸ್ಸನ್ನು ನಿಗ್ರಹಿಸಿಕೊಳ್ಳದಿದ್ದರೆ ಅಪಾಯಕ್ಕೆ ಸಿಲುಕಿ ಕೊಳ್ಳುವುದು ಖಚಿತ. ಆದ್ದರಿಂದ ಯುವ ಸಮುದಾ ಯವು ಸಮಾಜಕ್ಕಿಂತ ಹೆಚ್ಚಿನ ವಿಶ್ವಾಸವನ್ನು ಮನೆಯವರಲ್ಲಿ ಇರಿಸಿಕೊಳ್ಳಬೇಕು. ಮನೆಮಂದಿಯೇ ನಮ್ಮ ಪರಮಮಿತ್ರ ಹಾಗೂ ಪರಮೋಚ್ಚ ಹಿತೈಷಿ. ಮನೆ ಮಂದಿಯಲ್ಲಿ ಗುಟ್ಟು ಮಾಡಿದಷ್ಟು ಹಾನಿ ಹೆಚ್ಚು.

ಪುತ್ತಿಗೆ ಪದ್ಮನಾಭ ರೈ

ಟಾಪ್ ನ್ಯೂಸ್

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

voter

EC; ಮೊದಲ 4 ಹಂತದ ಚುನಾವಣೆಯಲ್ಲಿ ಶೇ.67 ಮತದಾನ

kejriwal 2

ಜೂ.4ರ ಬಳಿಕ ಐಎನ್‌ಡಿಐಎ ಸರಕಾರ: ಅರವಿಂದ ಕೇಜ್ರಿವಾಲ್‌

Amit Shah

ತುಸು ಬಿಸಿ ಹೆಚ್ಚಾದರೆ ರಾಹುಲ್‌ ಬ್ಯಾಂಕಾಕ್‌ಗೆ ಓಟ: ಅಮಿತ್‌ ಶಾ

congress

Congress ತಮಿಳುನಾಡಿನಲ್ಲಿ ಸ್ವಂತ ಬಲದಿಂದ ಸರಕಾರ ರಚನೆ ಯಾವಾಗ?: ಕೆ.ಸೆಲ್ವ ಪೆರುಂತಗೈ

1-qweqwew

IPL ಭಾರಿ ಮಳೆಯಿಂದ ಪಂದ್ಯ ರದ್ದು; ಹೈದರಾಬಾದ್ ಪ್ಲೇ ಆಫ್ ಗೆ ಪ್ರವೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಘುಪತಿ ಭಟ್‌

ಈಗಿನ ಬಿಜೆಪಿಯಲ್ಲಿ ಚಮಚಾಗಿರಿಗೆ ಟಿಕೆಟ್‌!: ಟಿಕೆಟ್‌ ವಂಚಿತ ರಘುಪತಿ ಭಟ್‌ ಬಿರುನುಡಿ

POK ಆಜಾದಿ ರಣಕಹಳೆ! ಪಾಕಿಸ್ಥಾನ ದೌರ್ಜನ್ಯ ವಿರುದ್ಧ ಬೀದಿಗಿಳಿದ ಪಾಕ್‌ ಆಕ್ರಮಿತ ಕಾಶ್ಮೀರ ಜನ

POK ಆಜಾದಿ ರಣಕಹಳೆ! ಪಾಕಿಸ್ಥಾನ ದೌರ್ಜನ್ಯ ವಿರುದ್ಧ ಬೀದಿಗಿಳಿದ ಪಾಕ್‌ ಆಕ್ರಮಿತ ಕಾಶ್ಮೀರ ಜನ

1-wewqeqwe

Karachi ಭಾರತೀಯ ಮಹಿಳೆಯ ವಡಾಪಾವ್‌, ಪಾವ್‌ಭಾಜಿ ಕಮಾಲ್‌!

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

World Mother’s Day 2024: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

world mother’s day 2024: ಯುಗಯುಗದಲ್ಲೂ ತಾಯಿ ದೇವತೆ…

World Mother’s Day 2024: ಯುಗಯುಗದಲ್ಲೂ ತಾಯಿ ದೇವತೆ…

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

1-wqeqewqe

Traffic ದಂಡವನ್ನು ತಪ್ಪಿಸಲು ಹೆಲ್ಮೆಟ್‌ ಧರಿಸಿ ಕಾರು ಚಾಲನೆ!

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

rain

Kerala; ಮೂರ್ನಾಲ್ಕು ದಿನ ಭಾರಿ ಮಳೆ: ಹವಾಮಾನ ಇಲಾಖೆ

marriage 2

Wedding gifts ಪಟ್ಟಿ ಇರಿಸಿಕೊಳ್ಳುವುದು ಕಡ್ಡಾಯ

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.