Education: ಗ್ರಹಣ ಹಿಡಿದಿದ್ದ ಆತ್ಮರಕ್ಷಣೆ ಕಲೆಗೆ ಮರುಜೀವ!
ಶಾಲಾ ಬಾಲಕಿಯರಿಗೆೆ ಕರಾಟೆ ತರಬೇತಿ - ತರಬೇತಿ ಅವಧಿ ವಿಸ್ತರಣೆಗೆ ಆಗ್ರಹ
Team Udayavani, Nov 17, 2023, 1:31 AM IST
ಕಾರ್ಕಳ: ಸರಕಾರಿ ಪ್ರೌಢಶಾಲೆಗಳಲ್ಲಿ ಜಾರಿಯಲ್ಲಿದ್ದು ನಾಲ್ಕು ವರ್ಷಗಳಿಂದ ಗ್ರಹಣ ಹಿಡಿದಿದ್ದ ಬಾಲಕಿಯರ ಆತ್ಮರಕ್ಷಣೆ ಕಲೆ (ಕರಾಟೆ)ಗೆ ಮರುಜೀವ ಸಿಕ್ಕಿದೆ.
ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು 2023-24ನೇ ಸಾಲಿನಲ್ಲಿ ರಾಜ್ಯದ ಸರಕಾರಿ ಪ್ರೌಢಶಾಲೆಗಳ 9ನೇ ತರಗತಿ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ಕಲೆ ತರಬೇತಿ ನೀಡಲು ಪ್ರತೀ ಶಾಲೆಗೆ ಘಟಕ ವೆಚ್ಚ 3 ಸಾವಿರ ರೂ.ಗಳಂತೆ ಎಲ್ಲ ಜಿಲ್ಲೆಗಳ 5,307 ಶಾಲೆಗಳಿಗೆ ಸುಮಾರು 1.59 ಕೋಟಿ ರೂ.ಗಳನ್ನು ಸರಕಾರ ಮಂಜೂರುಗೊಳಿಸಿದೆ.
2013-14ರಲ್ಲಿ ರಾಜ್ಯ ಸರಕಾರ ಯೋಜನೆಯನ್ನು ಜಾರಿಗೆ ತಂದಿತ್ತು. ವಾರಕ್ಕೆ 2 ಅವಧಿಯಂತೆ 3ರಿಂದ 4 ತಿಂಗಳಲ್ಲಿ 24 ಅವಧಿ ಬೋಧನೆ ಮಾಡಲಾಗುತ್ತಿತ್ತು. ಆದರೆ 2017ರ ಸೆಪ್ಟಂ ಬರ್ನಲ್ಲಿ ತರಬೇತಿ ಸ್ಥಗಿತಗೊಂಡಿತ್ತು.
ಆರಂಭದಲ್ಲಿ 3 ತಿಂಗಳ ಒಟ್ಟು ಬೋಧನಾ ಅವಧಿಗೆ 2,400 ರೂ. ಗೌರವಧನ ನೀಡಲಾಗುತ್ತಿತ್ತು. 2017-18ರಲ್ಲಿ 9 ಸಾವಿರ ರೂ.ಗಳಿಗೆ ಏರಿಕೆಯಾಗಿತ್ತು. 600ಕ್ಕೂ ಅಧಿಕ ಕರಾಟೆ ಶಿಕ್ಷಕರು ನೋಂದಾಯಿಸಿಕೊಂಡಿದ್ದು, 2-3 ಶಾಲೆಗಳಲ್ಲಿ ತರಬೇತಿ ನೀಡುತ್ತ ಬದುಕು ಕಟ್ಟಿಕೊಂಡಿ ದ್ದರು. ಯೋಜನೆ ಯೋಜನೆ ನನೆ ಗುದಿಗೆ ಬಿದ್ದ ಬಳಿಕ ಅವರ ಬದುಕು ಅತಂತ್ರವಾಗಿತ್ತು.
ಅನುಷ್ಠಾನ ಹೇಗೆ?
ನವೆಂಬರ್ ಅಂತ್ಯದೊಳಗೆ ಆರ್ಹ ತರಬೇತುದಾ ರರನ್ನು ಆಯ್ಕೆ ಮಾಡಿ ಎಸ್ಡಿಎಂಸಿ ಸಭೆ ಕರೆದು ಶಿಕ್ಷಕರ ಸಮ್ಮುಖದಲ್ಲಿ ವಿದ್ಯಾರ್ಥಿನಿಯರ ಹಿತರಕ್ಷಣೆ ಕೇಂದ್ರವಾಗಿಟ್ಟುಕೊಂಡು ದೂರು ಬರದಂತೆ ಪರಿಣಾಮಕಾರಿ ಯಾಗಿ ತರಬೇತಿ ನೀಡಬೇಕಿದೆ. ತರಬೇತಿ ವೇಳೆ ದೈಹಿಕ ಶಿಕ್ಷಣ ಶಿಕ್ಷಕರ ಉಪಸ್ಥಿತಿ ಕಡ್ಡಾಯ.
ಕೇವಲ 7 ತಾಸು!
ಮರಳಿ ಆರಂಭಿಸಿದ ಆತ್ಮರಕ್ಷಣೆ ಕಲೆ ತರಬೇತಿಯ ಒಟ್ಟು ಅವಧಿ ಕೇವಲ 7 ತಾಸು. ಇದರಿಂದ ಹೆಚ್ಚಿನ ಪ್ರಯೋಜನವಾಗದು ಎನ್ನುವ ಅಭಿಪ್ರಾಯ ಪೋಷಕರದು. ಕಡಿಮೆ ಅವಧಿಯಾದ್ದರಿಂದ ಕರಾಟೆ ಶಿಕ್ಷಕರು ತರಬೇತಿ ನೀಡಲು ಹಿಂದೇಟು ಹಾಕುವ ಸಂಭವವೇ ಹೆಚ್ಚು. ಕನಿಷ್ಠ 3ರಿಂದ 4 ತಿಂಗಳ ಅವಧಿಗೆ ನಿಗದಿಪಡಿಸಿದ್ದರೆ ಹಳ್ಳಿಯ ಮಕ್ಕಳಿಗೆ ಅನುಕೂಲವಾಗುತ್ತಿತ್ತು ಎಂದು ರಾಜ್ಯ ಕರಾಟೆ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಬೆಳ್ಮಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಾಲಕಿಯರ ಆತ್ಮರಕ್ಷಣೆ ಕಲೆ ಯೋಜನೆ ಮರು ಜಾರಿಯಾಗಲಿದ್ದು, ನವೆಂಬರ್ – ಡಿಸೆಂಬರ್ ಅವಧಿಯಲ್ಲಿ ತರಬೇತಿ ನೀಡಲಾಗುವುದು. ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.
– ಗಣಪತಿ, ದಯಾನಂದ ನಾಯಕ್ ಡಿಡಿಪಿಐಗಳು, ಉಡುಪಿ, ದಕ್ಷಿಣ ಕನ್ನಡ
ಹೆಣ್ಣು ಮಕ್ಕಳ ರಕ್ಷಣೆ ತರಬೇತಿಯ ಉದ್ದೇಶ. ಆದರೆ ಅಲ್ಪಾವಧಿಯ ತರಬೇತಿಯಿಂದ ವಿಶೇಷ ಪ್ರಯೋಜನವಾಗದು. ಪುನಾರಂಭಿಸಿದ್ದರೂ ಆರ್ಥಿಕ ಭಾರದ ನೆಪವೊಡ್ಡಿ ಕಡಿಮೆ ಅವಧಿಗೆ ಇಳಿಸಲಾಗಿದೆ. ಅವಧಿ ಹೆಚ್ಚಿಸುವಂತೆ ಮನವಿ ಸಲ್ಲಿಸಲಾಗುವುದು.
– ನದೀಮ್, ಅಧ್ಯಕ್ಷ, ರಾಜ್ಯ ಕೀಡಾ ಕರಾಟೆ ಶಿಕ್ಷಕರ ಸಂಘ ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Hubli; ಅಂಜಲಿ ಅಂಬಿಗೇರ ಪ್ರಕರಣ ತನಿಖೆ ಸಿಐಡಿಗೆ ವಹಿಸಲಿ: ಸಂತೋಷ್ ಲಾಡ್
Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ
Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ
ಇನ್ಸ್ಪೆಕ್ಟರ್ ಹೆಸರಲ್ಲಿ ಸುಲಿಗೆ: ಬೆಸ್ಕಾಂ ಎಂಜಿನಿಯರ್ ಸೆರೆ
Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ