Seafood Festival: ಫೆ. 9ರಿಂದ ಗೋವಾದಲ್ಲಿ ನಡೆಯಬೇಕಿದ್ದ ಸೀಫುಡ್ ಫೆಸ್ಟಿವಲ್ ಮುಂದೂಡಿಕೆ
Team Udayavani, Feb 9, 2024, 3:04 PM IST
ಪಣಜಿ: ಮಿರಾಮರ್ ಸೀಫುಡ್ ಫೆಸ್ಟಿವಲ್ ಪ್ರಕರಣದಲ್ಲಿ, ಗೋವಾ ಸರ್ಕಾರವು ಸಮುದ್ರಾಹಾರ ಉತ್ಸವವನ್ನು ಸೂಕ್ತ ದಿನಾಂಕಕ್ಕೆ ಮುಂದೂಡಲು ಸಿದ್ಧ ಎಂದು ಹೈಕೋರ್ಟ್ಗೆ ತಿಳಿಸಿದೆ. ಸರ್ಕಾರದ ಈ ಹೇಳಿಕೆಯನ್ನು ಹೈಕೋರ್ಟ್ ಒಪ್ಪಿಕೊಂಡಿದ್ದು, ಮುಂದಿನ ವಿಚಾರಣೆಯನ್ನು ಮಾರ್ಚ್ 26ಕ್ಕೆ ಮುಂದೂಡಿದೆ.
ಗುರುವಾರ ಹೈಕೋರ್ಟ್ನಲ್ಲಿ ಮಿರಾಮಾರ್ ಸೀಫುಡ್ ಫೆಸ್ಟಿವಲ್ ಕುರಿತು ವಿಚಾರಣೆ ನಡೆದಿತ್ತು. ಈ ಸಮಯದಲ್ಲಿ, ಗೋವಾ ಸರ್ಕಾರವು ಈ ಸಮುದ್ರಾಹಾರ ಉತ್ಸವವನ್ನು ಮತ್ತೊಂದು ಸೂಕ್ತ ದಿನಾಂಕಕ್ಕೆ ಮುಂದೂಡಲು ಹೈಕೋರ್ಟ್ ಸೂಚಿಸಿದೆ. ಪ್ರವಾಸೋದ್ಯಮ ಇಲಾಖೆಯು ಫೆ.9ರಿಂದ 11 ರವರೆಗೆ ಆಯೋಜಿಸಲಿರುವ ಪ್ರಸಿದ್ಧ ಸಮುದ್ರಾಹಾರ ಉತ್ಸವವನ್ನು ಮುಂದೂಡುವುದು ಅಸಾಧ್ಯ ಎಂದು ರಾಜ್ಯ ಸರಕಾರ ಹೈಕೋರ್ಟ್ಗೆ ಬುಧವಾರ ಉತ್ತರ ನೀಡಿತ್ತು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ನಿಗದಿಪಡಿಸಲಾಗಿತ್ತು.
ಉತ್ಸವ ಆರಂಭಕ್ಕೆ ಎರಡ್ಮೂರು ದಿನ ಮುಂಚಿತವಾಗಿ ಉತ್ಸವದ ದಾಖಲೆಗಳನ್ನು ಸರ್ಕಾರ ಸಲ್ಲಿಸಿರುವ ಬಗ್ಗೆ ಬುಧವಾರವೂ ಪ್ರತಿಕ್ರಿಯಿಸಿದ ಹೈಕೋರ್ಟ್, ಸನ್ ಬರ್ನ್ ಉತ್ಸವದ ವೇಳೆ ಸರ್ಕಾರ ಎರಡು ದಿನ ಮುಂಚಿತವಾಗಿ ಅನುಮತಿ ನೀಡುವುದು ಅಲಿಖಿತ ನಿಯಮವಾಗಿದೆ. ಈ ಮೂಲಕ ಸರಕಾರವು ನ್ಯಾಯಾಂಗ ಪರಿಶೀಲನೆಯನ್ನು ನಿರಾಕರಿಸಿ ನಾಗರಿಕರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: Little Dragons: ಹೆಚ್ಚು ಮಕ್ಕಳನ್ನು ಹೆರಿ… ಸಿಂಗಾಪುರ ದಂಪತಿಗಳಿಗೆ ಪ್ರಧಾನಿ ಲೀ ಮನವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್
PM Modi ಪತ್ರಿಕಾಗೋಷ್ಠಿ ಯಾಕೆ ನಡೆಸುವುದಿಲ್ಲ? ಉತ್ತರಿಸಿದ ಪ್ರಧಾನಿ ಮೋದಿ
Mumbai Hoarding Collapse; ರಾಜಸ್ಥಾನದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಪ್ರಮುಖ ಆರೋಪಿ
Covishield ಲಸಿಕೆಯಿಂದ ಮತ್ತೊಂದು ಸೈಡ್ಎಫೆಕ್ಟ್!
3rd Term; ನೂರಲ್ಲ, 125 ದಿನಗಳ ಯೋಜನೆ ಸಿದ್ಧ: ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್
ಕಾರ್ತಿಕ್ – ಸೂರ್ಯ ಕಾಂಬಿನೇಷನ್ ನ ಬಹು ನಿರೀಕ್ಷಿತ ಸಿನಿಮಾಕ್ಕೆ ಪೂಜಾ ಹೆಗ್ಡೆ ನಾಯಕಿ?
Doddaballapura: ಹೇಮಂತ್ ಗೌಡ ಹತ್ಯೆ ಪ್ರಕರಣ: ಗುಂಡು ಹಾರಿಸಿ ಆರೋಪಿಯ ಬಂಧನ
The Judgement; ಭವಿಷ್ಯ ನಿರ್ಧರಿಸುವ ಜಡ್ಜ್ಮೆಂಟ್: ರವಿಚಂದ್ರನ್
Anjali Ambigera; ಚಿಗಟೇರಿ ಆಸ್ಪತ್ರೆಯಿಂದಲೂ ತಪ್ಪಿಸಲು ಯತ್ನಿಸಿದ್ದ ಅಂಜಲಿ ಹಂತಕ ಗಿರೀಶ್