20 ವರ್ಷದ ಬಳಿಕ ರೀ- ರಿಲೀಸ್ ಆಗಲಿದೆ ದಳಪತಿ ವಿಜಯ್ ಸೂಪರ್ ಹಿಟ್ ʼಗಿಲ್ಲಿʼ ಸಿನಿಮಾ
Team Udayavani, Apr 4, 2024, 4:40 PM IST
ಚೆನ್ನೈ: ಇತ್ತೀಚಿನ ದಿನಗಳಲ್ಲಿ ಸೂಪರ್ ಹಿಟ್ ಸಿನಿಮಾಗಳು ರೀ – ರಿಲೀಸ್ ಆಗುವ ಟ್ರೆಂಡ್ ಹುಟ್ಟಿಕೊಂಡಿದೆ. ನಟರ ಹುಟ್ಟುಹಬ್ಬ ಅಥವಾ ಪ್ರೇಮಿಗಳ ದಿನ.. ಹೀಗೆ ವಿಶೇಷ ದಿನದಂದು ಆ ಕಾಲದಲ್ಲಿ ಹಿಟ್ ಆದ ಸಿನಿಮಾಗಳನ್ನು ರೀ – ರಿಲೀಸ್ ಮಾಡಲಾಗುತ್ತಿದೆ.
ಈ ಸಾಲಿಗೆ ದಳಪತಿ ವಿಜಯ್ ಅವರ ಸಿನಿಮಾವೊಂದು ಸೇರಿದೆ. ದಳಪತಿ ವಿಜಯ್ – ತ್ರಿಷಾ ಕೃಷ್ಣನ್ ಜೊತೆಯಾಗಿ ಕಾಣಿಸಿಕೊಂಡಿದ್ದ, 2004 ರಲ್ಲಿ ಬಂದ ʼಗಿಲ್ಲಿʼ ಸಿನಿಮಾ 20 ವರ್ಷದ ಬಳಿಕ ಥಿಯೇಟರ್ ನಲ್ಲಿ ಮತ್ತೆ ತೆರೆ ಕಾಣಲಿದೆ.
ದಳಪತಿ ವಿಜಯ್ ಅವರ ʼಗಿಲ್ಲಿʼ ಮಹೇಶ್ ಬಾಬು ಅವರ ʼಒಕ್ಕಡುʼ ಸಿನಿಮಾದ ರಿಮೇಕ್ ಸಿನಿಮಾವಾಗಿದೆ. ಆದರೆ ರಿಮೇಕ್ ಆದರೂ ಸಿನಿಮಾ ಕಾಲಿವುಡ್ ಭರ್ಜರಿ ಯಶಸ್ಸು ಕಂಡಿತ್ತು. ಕಬಡ್ಡಿ ಆಟಗಾರನಾಗಿ ಗ್ಯಾಂಗ್ ಸ್ಟರ್ ವಿರುದ್ಧ ಹೋರಾಡುವ ದಳಪತಿ ವಿಜಯ್ , ತ್ರಿಷಾ ಜೊತೆ ರೊಮ್ಯಾಂಟಿಕ್ ಜೋಡಿಯಾಗಿ ಗಮನ ಸೆಳೆದಿದ್ದರು.
ವಿದ್ಯಾಸಾಗರ್ ಅವರ ಅದ್ಭುತ ಮ್ಯೂಸಿಕ್ ಹಾಗೂ ವಿಜಯ್, ತ್ರಿಷಾ ಹಾಗೂ ಪ್ರಕಾಶ್ ರಾಜ್ ಅವರ ಅಭಿನಯ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಈ ಸಿನಿಮಾವನ್ನು ಧರಣಿ ಅವರು ನಿರ್ದೇಶನ ಮಾಡಿದ್ದರು.
ಇದೇ ಏಪ್ರಿಲ್ 20 ರಂದು ಥಿಯೇಟರ್ ನಲ್ಲಿ ಸ್ಪೋರ್ಟ್ಸ್ ಆ್ಯಕ್ಷನ್ ʼಗಿಲ್ಲಿʼ ಸಿನಿಮಾ ಮರು ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಹೇಳಿದೆ.
ಆಶಿಶ್ ವಿದ್ಯಾರ್ಥಿ, ಧಮು, ಮಾಯಿಲ್ಸಾಮಿ, ಜಾನಕಿ ಸಬೇಶ್, ನ್ಯಾನ್ಸಿ ಜೆನ್ನಿಫರ್ ಮುಂತಾದವರು ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಸಿಕೊಂಡಿದ್ದರು.
Get ready to witness the full #Ghilli performance of THALAPATHY @actorvijay sir on big screens once again! 🔥
Let’s celebrate the massiest cult blockbuster of Namma Vijay Anna in theatres this 20th April commemorating its 20th Anniversary! 💥 pic.twitter.com/fUwFXSMu5n
— Mega Surya Production (@MegaSuryaProd) April 3, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cinema: ಸಿಂಗಲ್ ಸ್ಕ್ರೀನ್ಗೆ ಪ್ರೇಕ್ಷಕರ ಬರ: ಇದೇ ಶುಕ್ರವಾರದಿಂದ 10 ದಿನ ಥಿಯೇಟರ್ ಬಂದ್
ನಾಯಕನ ಜೊತೆ ಜಗಳ: ರಿಲೀಸ್ಗೂ ಮುನ್ನ ಸಿನಿಮಾವನ್ನು ಆನ್ಲೈನ್ನಲ್ಲಿ ಲೀಕ್ ಮಾಡಿದ ನಿರ್ದೇಶಕ
Kollywood Actor: ದಳಪತಿ ವಿಜಯ್ ಬಳಿಕ ರಾಜಕೀಯದತ್ತ ಮತ್ತೊಬ್ಬ ಖ್ಯಾತ ಕಾಲಿವುಡ್ ನಟ?
Ramayana: 100, 200.. ಕೋಟಿಯಲ್ಲ ʼರಾಮಾಯಣʼ ಮೊದಲ ಪಾರ್ಟ್ನ ಬಜೆಟ್ಟೇ 835 ಕೋಟಿ ರೂ.
G. V. Prakash Kumar: ಸಂಗೀತ ನಿರ್ದೇಶಕ ಜಿವಿ ಪ್ರಕಾಶ್ ಕುಮಾರ್ ದಾಂಪತ್ಯದಲ್ಲಿ ಬಿರುಕು
MUST WATCH
ಹೊಸ ಸೇರ್ಪಡೆ
ಮಗುವನ್ನು ಕಾರಿನಲ್ಲಿ ಬಿಟ್ಟು ಮದುವೆಗೆ ಹೋದ ಕುಟುಂಬ… ನೆನಪಾಗುವಷ್ಟರಲ್ಲಿ ಮಿಂಚಿತ್ತು ಕಾಲ
Hassan; ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾದ ನಾಲ್ವರು ಮಕ್ಕಳು
Anjali Ambigera Case; ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
Bidar; ಯುವಕರ ಬದುಕು ಹಾಳು ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ: ಈಶ್ವರ್ ಖಂಡ್ರೆ
Drugs ಮಾರಾಟ: ಮೂವರು ವಿದೇಶಿ ಪ್ರಜೆಗಳು ಸೇರಿ 8 ಮಂದಿ ಬಂಧನ