ಜಲ ವಿದ್ಯುತ್ ಯೋಜನೆ ಕಾಮಗಾರಿ ಕೂಡಲೇ ನಿಲ್ಲಿಸಿ: ಭಾರತಕ್ಕೆ ಪಾಕ್
Team Udayavani, Jan 21, 2017, 12:35 PM IST
ಇಸ್ಲಾಮಾಬಾದ್ : ಜಮ್ಮು ಕಾಶ್ಮೀರದಲ್ಲಿನ ಎರಡು ಜಲ ವಿದ್ಯುತ್ ಯೋಜನೆಗಳ ಕಾಮಗಾರಿಯನ್ನು ಭಾರತ ಕೂಡಲೇ ನಿಲ್ಲಿಸಬೇಕು ಮತ್ತು ಉಭಯ ದೇಶಗಳ ನಡುವಿನ ಜಲ ವಿವಾದವನ್ನು ಬಗೆಹರಿಸಿಕೊಳ್ಳಲು ರಾಜಿ ಪಂಚಾಯ್ತಿಕೆ ನ್ಯಾಯಾಲಯದ ಸ್ಥಾಪನೆಗೆ ಒಪ್ಪಿಕೊಳ್ಳಬೇಕು ಎಂದು ಪಾಕಿಸ್ಥಾನದ ಎರಡು ಸಂಸದೀಯ ಸಮಿತಿಗಳು ಅತ್ಯಪರೂಪದ ಜಂಟಿ ಠರಾವೊಂದರಲ್ಲಿ ಭಾರತವನ್ನು ಆಗ್ರಹಿಸಿವೆ.
ವಿದೇಶ ವ್ಯವಹಾರಗಳು ಮತ್ತು ಜಲ ಹಾಗೂ ವಿದ್ಯುತ್ ಸಂಬಂಧಿತ ರಾಷ್ಟ್ರೀಯ ಅಸೆಂಬ್ಲಿಯ ಸಮಿತಿಗಳು ಇಸ್ಲಾಮಾಬಾದ್ನಲ್ಲಿ ನಿನ್ನೆ ಶುಕ್ರವಾರ ಜಂಟಿ ಬೈಠಕ್ ನಡೆಸಿ ಭಾರತದೊಂದಿಗಿನ ಜಲವಿವಾದದ ಕುರಿತ ಚರ್ಚೆ ನಡೆಸಿದವು.
ಚರ್ಚೆ ಫಲವಾಗಿ ಕೈಗೊಳ್ಳಲಾದ ಜಂಟಿ ಠರಾವಿನಲ್ಲಿ ಭಾರತ ಜಮ್ಮು ಕಾಶ್ಮೀರದಲ್ಲಿ ಕೈಗೊಂಡಿರುವ ಎರಡು ಜಲ ವಿದ್ಯುತ್ ಯೋಜನೆಗಳ ಕಾಮಗಾರಿಗಳನ್ನು ಈ ಕೂಡಲೇ ನಿಲ್ಲಿಸುವಂತೆ ಕೇಳಿಕೊಂಡಿರುವುದಾಗಿ “ಡಾನ್’ ವರದಿ ಮಾಡಿದೆ.
ಜಮ್ಮು ಕಾಶ್ಮೀರದ ಕಿಶನ್ಗಂಗಾ ಮತ್ತು ರತ್ಲೆà ಜಲ ವಿದ್ಯುತ್ ಯೋಜನೆಗಳ ಕುರಿತಾಗಿ ರಾಜಿ ಪಂಚಾಯ್ತಿಕೆಯ ನ್ಯಾಯಾಲಯವನ್ನು ಸ್ಥಾಪಿಸುವಂತೆ ವಿಶ್ವ ಬ್ಯಾಂಕನ್ನು ಈ ಠರಾವಿನಲ್ಲಿ ಕೋರಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
Extortion: ಆನ್ಲೈನ್ ಗೇಮ್; ಬಾಲಕನ ಬೆದರಿಸಿ ಸುಲಿಗೆ
Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
LPG Cylinders: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?