ಮಂಗಳೂರಿನಲ್ಲಿ  ಕ್ರಿಸ್‌ ಗೇಲ್‌ ಕಲರವ !


Team Udayavani, Feb 6, 2017, 3:45 AM IST

gail.jpg

ಮಂಗಳೂರು: ಕರಾವಳಿ ನಗರಿ ಮಂಗಳೂರು ರವಿವಾರ ಎಂದಿನಂತಿರಲಿಲ್ಲ. ಕ್ರೀಡಾಭಿಮಾನಿಗಳು ತೀವ್ರ ಕುತೂಹಲದಿಂದ ಬೀದಿಗಿಳಿದು ಧಾವಿಸಿ ಬರುತ್ತಿದ್ದರು. ಅಲ್ಲಿ ವಿಶಿಷ್ಟ ಸಂಚಲನವೊಂದು ಮೂಡಿತ್ತು. ಇದಕ್ಕೆ ಕಾರಣರಾದವರು ವಿಶ್ವ ಕ್ರಿಕೆಟಿನ ಸ್ಫೋಟಕ ಬ್ಯಾಟ್ಸ್‌ಮನ್‌, ಐಪಿಲ್‌ನ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡದ ಮೂಲಕ ಕನ್ನಡಿಗರ ಮನಗೆದ್ದ ವೆಸ್ಟ್‌ ಇಂಡೀಸ್‌ನ ಖ್ಯಾತ ಕ್ರಿಕೆಟಿಗ ಕ್ರಿಸ್‌ ಗೇಲ್‌!

ಹೌದು, ಕ್ರಿಸ್‌ ಗೇಲ್‌ ರವಿವಾರ ಮಂಗಳೂರಿಗೆ ಆಗಮಿಸಿ ಎಲ್ಲರಲ್ಲೂ ರೋಮಾಂಚನ ಮೂಡಿಸಿದ್ದರು!
ಮಂಗಳೂರಿಗೆ ಖಾಸಗಿ ಕಾರ್ಯಕ್ರಮಕ್ಕೆ  ಆಗಮಿಸಿದ ಕ್ರಿಸ್‌ ಗೇಲ್‌ ಅವರನ್ನು ಭಾರತೀಯ ಸಂಪ್ರದಾಯಂತೆ ಆರತಿ ಬೆಳಗಿ, ತಿಲಕವಿಟ್ಟು ಬರಮಾಡಿಕೊಳ್ಳಲಾಯಿತು. ಬಳಿಕ ಕರಾವಳಿಯ ಸೀಯಾಳ ಕುಡಿದ ಗೇಲ್‌, ಅಭಿಮಾನಿಗಳಿಗೆ ಹಸ್ತಾಕ್ಷರ ನೀಡಿದರು. 

ಕ್ರಿಸ್‌ ಗೇಲ್‌ ಮಂಗಳೂರಿಗೆ ಆಗಮಿಸುವ ಸುದ್ದಿ ತಿಳಿದು ಬಲ್ಮಠದಲ್ಲಿ ಭಾರೀ ಸಂಖ್ಯೆ ಯಲ್ಲಿ ಕ್ರಿಕೆಟ್‌ ಅಭಿಮಾನಿಗಳು ನೆರೆದಿದ್ದರು. ರಸ್ತೆಯ ಅಕ್ಕಪಕ್ಕದಲ್ಲೂ ಗೇಲ್‌ಗಾಗಿ ಕಾದು ನಿಂತಿದ್ದರು. ಪೊಲೀಸ್‌ ಭದ್ರತೆ ಹಾಗೂ ಅಂಗರಕ್ಷಕರೊಂದಿಗೆ ಗೇಲ್‌ ಕಾರಿ ನಿಂದ ಇಳಿಯುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು. 

ಇಲ್ಲಿತ್ತು ಗಂಗ್ನಮ್‌ ಡ್ಯಾನ್ಸ್‌!
ಗೇಲ್‌ ಅತಿಯಾಗಿ ಮೆಚ್ಚುವ, ಸಾಮಾಜಿಕ ಜಾಲತಾಣದ ಮೂಲಕ ಹುಚ್ಚೆಬ್ಬಿಸಿದ “ಓಪನ್‌ ಗಂಗ್ನಮ್‌ ಸ್ಟೈಲ್‌’ ಹಾಡು ಕೂಡ ತೇಲಿ ಬಂತು. “ಸೂಪರ್‌ಸ್ಟಾರ್‌ ಗೇಲ್‌ ಗೇಲ್‌…’ ಎಂಬ ಅಭಿಮಾನಿಗಳ ಭೋರ್ಗರೆತ ಅರಬೀ ಸಮುದ್ರಕ್ಕೂ ಸಡ್ಡು ಹೊಡೆಯುವಂತಿತ್ತು. ಭಾರೀ ಸಂಖ್ಯೆಯಲ್ಲಿ ಗೇಲ್‌ ಅಭಿಮಾನಿಗಳು ನೆರೆದಿದ್ದರಿಂದ ಸಹಜವಾಗಿಯೇ ನೂಕು ನುಗ್ಗಲು ಉಂಟಾಯಿತು. 

“ಮಂಗಳೂರಿಗೆ ಮೊದಲ ಬಾರಿಗೆ ಆಗ ಮಿಸಿದ್ದೇನೆ. ಇಲ್ಲಿನ ವಾತಾವರಣ ಕಂಡು ತುಂಬ ಖುಷಿಯಾಯಿತು. ಇದು ಬೆಂಗ ಳೂರು ಅಲ್ಲ. ಮಂಗಳೂರು ಹಾಗೂ ಬೆಂಗಳೂರು ಮಧ್ಯೆ ಒಂದೆರಡು ಅಕ್ಷರಗಳ ಬದಲಾವಣೆ ಹೊರತು ಎರಡೂ ಉತ್ತಮ ವಾತಾವರಣದ ಸ್ಥಳ’ ಎಂದರು ಗೇಲ್‌. 

ಉದ್ಯಮಿಗಳಾದ ರಮೇಶ್‌ ನಾಯಕ್‌, ಸುಚಿತ್ರಾ ಆರ್‌. ನಾಯಕ್‌, ದಯಾನಂದ್‌ ನಾಯಕ್‌, ಸುಧಾಕರ್‌ ನಾಯಕ್‌, ಡಾ| ಹನ್ಸ ರಾಜ್‌ ಆಳ್ವ, ಡಾ| ಪವನ್‌ ಹೆಗ್ಡೆ, ಸದಾನಂದ ನಾಯಕ್‌, ಸಂದೀಪ್‌ ಮಲ್ಯ, ಪ್ರಖ್ಯಾತ್‌, ಅಶೋಕ್‌ ಶೆಟ್ಟಿ ಉಪಸ್ಥಿತರಿದ್ದರು.

ನಿಮ್ಮಿಂದ ನಾನು: ಗೇಲ್‌
ಯೆಯ್ನಾಡಿಗೆ ಆಗಮಿಸಿದ ಕ್ರಿಸ್‌ ಗೇಲ್‌, ಅಭಿಮಾನಿಗಳ ಜತೆ ಸ್ವಲ್ಪ ಸಮಯ ಕಳೆದರು. ಈ ಸಂದರ್ಭದಲ್ಲಿ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಅವರು, “ಮಂಗಳೂರಿನಲ್ಲಿ ನನಗೆ ದೊರೆತಿರುವ ಹೃದಯಸ್ಪರ್ಶಿ ಸ್ವಾಗತ ಬಹಳ ಖುಷಿ ಕೊಟ್ಟಿದೆ. ಅಭಿಮಾನಿಗಳ ಹಾರೈಕೆ, ಬೆಂಬಲ ನನ್ನನ್ನು ಕ್ರಿಕೆಟ್‌ನಲ್ಲಿ  ಮುಂದುವರಿಯುವಂತೆ ಮಾಡಿದೆ. ಖಾಸಗಿ ಕಾರ್ಯಕ್ರಮದ ಪ್ರಯುಕ್ತ  ಮಂಗಳೂರಿಗೆ ಬಂದಿದ್ದೇನೆ. ನಿಮ್ಮೊಂದಿಗೆ ಸ್ವಲ್ಪ ಹೊತ್ತು ಕಳೆಯವ ಅವಕಾಶ ಒದಗಿಸಿದೆ…’ ಎಂದರು. ಅಭಿಮಾನಿಗಳಿಗೆ ಹಸ್ತಾಕ್ಷರ ನೀಡಿ ದರು. 

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.