ನವದಂಪತಿ ಮನೆಗೇ ಬರುತ್ತೆ ತಿರುಪತಿ ಪ್ರಸಾದ
Team Udayavani, Feb 8, 2017, 3:45 AM IST
ತಿರುಪತಿ: ಹೊಸದಾಗಿ ಮದುವೆಯಾಗುವ ಜೋಡಿಗೆ ಅಥವಾ ಕುಟುಂಬ ಸದಸ್ಯರಿಗೆ ಖುಷಿಯ ಸುದ್ದಿ. ತಿರುಪತಿ ತಿಮ್ಮಪ್ಪನ ಅನುಗ್ರಹ, ಆಶೀರ್ವಾದಕ್ಕಾಗಿ ಬಸ್, ರೈಲು ಬುಕ್ ಮಾಡಿ ತಿರುಮಲಕ್ಕೆ ಹೋಗಬೇಕಾದ ಅಗತ್ಯವಿಲ್ಲ. ಮದುವೆ ಕರೆಯೋಲೆಯನ್ನು ಟಿಟಿಡಿ ಅಧಿಕಾರಿಗಳಿಗೆ ಅಂಚೆ ಮೂಲಕ ಕಳುಹಿಸಿಕೊಟ್ಟರೆ ಸಾಕು. ವೆಂಕಟೇಶ್ವರನ ಆಶೀರ್ವಾದ ನಿಮ್ಮ ಮನೆಯ ಬಾಗಿಲಿಗೆ ಬರುತ್ತದೆ. ಕಲ್ಯಾಣೋತ್ಸವ ಸಮಯದಲ್ಲಿ ಸ್ವಾಮಿಗೆ ಮಾಡಿದ ಪೂಜೆಯ ಅರಸಿನ, ಕುಂಕುಮ ಮತ್ತು ಮಂತ್ರಾಕ್ಷತೆಯನ್ನು ಮನೆಗೇ ಕಳುಹಿಸಿಕೊಡಲಾಗುತ್ತದೆ. ಇದು ಉಚಿತ ಯೋಜನೆಯಾಗಿದೆ. ಮದುವೆಯ ಆಮಂತ್ರಣವನ್ನು ಎಕ್ಸಿಕ್ಯೂಟಿವ್ ಆಫೀಸರ್, ಟಿಟಿಡಿ, ಕೆ.ಟಿ.ರೋಡ್, ತಿರುಪತಿ-517501 ವಿಳಾಸಕ್ಕೆ ಮದುವೆ ದಿನಾಂಕಕ್ಕಿಂತ ಮುಂಚಿತವಾಗಿ ಕಳುಹಿಸಿಕೊಡಬೇಕು. ಶುಭ ದಿನದಂದೇ ತಿರುಪತಿಯಿಂದ ಆಶೀರ್ವಾದ ಬರುತ್ತದೆ. ಇದು ನವ ಜೋಡಿಗಾಗಿಯೇ ಮಾಡಿರುವ ಯೋಜನೆ ಎಂದು ಟಿಟಿಡಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಟಿ. ರವಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
Election; ಮೊಹಬ್ಬತ್ ಕೀ ದುಕಾನ್ನಲ್ಲಿ ಫೇಕ್ ವೀಡಿಯೋಗಳು ಮಾರಾಟ: ಮೋದಿ
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
MUST WATCH
ಹೊಸ ಸೇರ್ಪಡೆ
LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್ಗೆ ನಡುಕ: ಗಾಯತ್ರಿ
ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
IPL 2024; ಚೆನ್ನೈ ಕಿಂಗ್ಸ್ಗೆ ಚೇಸಿಂಗ್ ಕಿಂಗ್ ಸವಾಲು
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ