ಆರ್ಎಸ್ಎಸ್ ಕಾರ್ಯಕರ್ತ ಶತಾಯುಷಿ ಗಂಗಾದಯಾಳ್ ಅವಸ್ಥಿ ನಿಧನ
Team Udayavani, Feb 18, 2017, 10:46 AM IST
ಥಾಣೆ : ಪ್ರಖ್ಯಾತ ಸಮಾಜ ಸೇವಕ, ಹಿರಿಯ ಆರ್ಎಸ್ಎಸ್ ಕಾರ್ಯಕರ್ತ, ಶತಾಯುಷಿ ಗಂಗಾದಯಾಳ್ ಅವಸ್ಥಿ ಅವರು ನಿನ್ನೆ ಶುಕ್ರವಾರ ಇಲ್ಲಿನ ತಮ್ಮ ನಿವಾಸದಲ್ಲಿ ನಿಧನ ಹೊಂದಿದರೆಂದು ಅವರ ಕುಟುಂಬದವರು ತಿಳಿಸಿದ್ದಾರೆ.
ಮೂಲತಃ ಉತ್ತರ ಪ್ರದೇಶದವರಾದ ಅವಸ್ಥಿ ಅವರು ಸುಮಾರು 30 ವರ್ಷಗಳ ಹಿಂದೆ ಥಾಣೆಗೆ ವಲಸೆ ಬಂದಿದ್ದರು. ಇವರು ಹಿರಿಯ ಆರ್ಎಸ್ಎಸ್ ನಾಯಕರಾದ ಗುರು ಗೋಲ್ವಾಲ್ಕರ್, ಶ್ಯಾಮ್ಪ್ರಸಾದ್ ಮುಖರ್ಜಿ, ದೀನದಯಾಳ್ ಉಪಾಧ್ಯಾಯ ಮತ್ತು ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಹಲವು ನಾಯಕರಿಗೆ ಅತ್ಯಂತ ನಿಕಟರಾಗಿದ್ದರು.
ಈಚೆಗಷ್ಟೇ ಅವಸ್ಥಿ ಅವರನ್ನು ಕಾಶೀ ಸುಮೇರು ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನರೇಂದ್ರಾನಂದ ಸರಸ್ವತಿ ಅವರಿಂದ ಸಮ್ಮಾನಿತರಾಗಿದ್ದರು.
ನಿನ್ನೆ ರಾತ್ರಿ ನಡೆದಿದ್ದ ಅವಸ್ಥಿ ಅವರ ಅಂತ್ಯಕ್ರಿಯೆಯಲಿಲ ಸಮಾಜದ ಎಲ್ಲ ವರ್ಗಗಳ ಜನರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಂಧಾನ ಮೂಲಕ ವಿವಾದ ಬಗೆಹರಿಸಿಕೊಳ್ಳಿ: ರೋಹಿಣಿ, ರೂಪಾಗೆ ಸು.ಕೋರ್ಟ್ ಸಲಹೆ
Russia-Ukraine War: ಉಕ್ರೇನ್ ಯುದ್ಧಕ್ಕೆ ಯುವಕರ ಬಳಕೆ… ನಾಲ್ವರ ಬಂಧನ
Mann Ki Baat: ತೆಲುಗಿನ ಜನರ ಮನ್ ಕಿ ಬಾತ್ ಆಲಿಸಿ… ಮೋದಿಗೆ ಶರ್ಮಿಳಾ
Panaji: ಮಕ್ಕಳಿಗಾಗಿ ಬ್ಯಾಂಕ್ ಲಾಕರ್ನಲ್ಲಿ ಇಟ್ಟಿದ್ದ 3 ಕೋಟಿ ಮೌಲ್ಯದ ನೋಟು ಅಮಾನ್ಯ!
Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ