ಮುಸ್ಲಿಮರು ಶವ ದಹನ ಮಾಡಲಿ; 20 ಕೋಟಿ ಜನರಿಗೆ ಜಾಗ ಇಲ್ಲ: ಸಾಕ್ಷಿ
Team Udayavani, Mar 1, 2017, 11:26 AM IST
ಹೊಸದಿಲ್ಲಿ : ಕಬರಿಸ್ಥಾನ ನಿರ್ಮಾಣಕ್ಕೆ ಸಾಕಷ್ಟು ಪ್ರಮಾಣದಲ್ಲಿ ಭೂಮಿ ಅಲಭ್ಯವಿರುವುದರಿಂದ ಮುಸ್ಲಿಮರು ಶವ ದಫನದ ಬದಲು ಶವ ದಹನಕ್ಕೆ ಮುಂದಾಗಬೇಕು; ಅಂತೆಯೇ ಕಬರಿಸ್ಥಾನ ನಿರ್ಮಾಣದ ತಡೆಗೆ ಸೂಕ್ತಕಾನೂನನ್ನು ರೂಪಿಸಬೇಕು ಎಂದು, ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವಲ್ಲಿ ಅಗ್ರಗಣ್ಯರಾಗಿರುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ.
“ನೀವದನ್ನು ಕಬರಿಸ್ಥಾನ ಎನ್ನಿ; ಶ್ಮಶಾನ ಎನ್ನಿ. ಯಾರಿಗೂ ಶವ ದಫನ ಸಮ್ಮತವಲ್ಲ. ಈ ದೇಶದಲ್ಲಿ ಎರಡೂವರೆ ಕೋಟಿ ಹಿಂದೂ ಸಂತರಿದ್ದಾರೆ. ಅವರ ದೇಹಾಂತ್ಯದ ಬಳಿಕ ಅವರಿಗೆ ಸ್ಮಾರಕ ರೂಪಿಸಬೇಕಾಗುತ್ತದೆ. ದೇಶದಲ್ಲಿ 20 ಕೋಟಿ ಮುಸ್ಲಿಮರಿದ್ದಾರೆ. ಅವರಿಗೂ ಶವ ದಫನಕ್ಕೆ ಕಬರಿಸ್ಥಾನ ನಿರ್ಮಿಸಲು ಭೂಮಿ ಬೇಕು. ಆದರೆ ಅಷ್ಟೊಂದು ಪ್ರಮಾಣದ ಭೂಮಿ ಹಿಂದುಸ್ಥಾನದಲ್ಲಿ ಎಲ್ಲಿದೆ ? ಆದುದರಿಂದ ಶವ ದಫನದ ಕಬರಿಸ್ಥಾನ ನಿರ್ಮಾಣವನ್ನು ತಡೆಯುವ ಕಾನೂನನ್ನು ರೂಪಿಸುವುದು ಅಗತ್ಯ ಎಂದು ಸಾಕ್ಷಿ ಮಹಾರಾಜ್ ಅವರು ಉನ್ನಾವೋದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.
ಸಾಕ್ಷಿ ಮಹಾರಾಜ್ ಅವರ ಈ ವಿವಾದಾತ್ಮಕ ಹೇಳಿಕೆಯನ್ನು ಬಲವಾಗಿ ಖಂಡಿಸಿರುವ ಕಾಂಗ್ರೆಸ್ ಪಕ್ಷ, “ಉತ್ತರ ಪ್ರದೇಶದಲ್ಲಿ ನಿರ್ಣಾಯಕ ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವಾಗಲೇ ಕೇಸರಿ ಪಕ್ಷವು ರಾಜ್ಯದಲ್ಲಿ ಕೋಮು ವಾತಾವಾರಣವನ್ನು ಸೃಷ್ಟಿಸಲು ಯತ್ನಿಸುತ್ತಿದೆ’ ಎಂದು ಟೀಕಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
Manipal ಹಾಸ್ಪಿಟಲ್ಸ್ ಪಾಲಾದ ಮೆಡಿಕಾ ಸಿನರ್ಜಿ