ಈ ಗ್ರಾಮಸ್ಥರ ನಿತ್ಯ ಸಂಚಾರಕ್ಕೆ ಕತ್ತೆಗಳೇ ಆಸರೆ!


Team Udayavani, Mar 25, 2017, 3:45 AM IST

Donkey.jpg

ಚಿಂಚೋಳಿ: ಗ್ರಾಮದ ಒಟ್ಟು ಜನಸಂಖ್ಯೆ 1146, ಆದರೆ ಮತದಾರರ ಸಂಖ್ಯೆ 1265.  200 ಮನೆಗಳಿದ್ದರೂ ವಿದ್ಯುತ್‌ ಇಲ್ಲದೆ ಕತ್ತಲ ಬದುಕು, ಕಲ್ಲುಗಳಿಂದ ಕೂಡಿದ ರಸ್ತೆಯಲ್ಲಿ ದಿನಂಪ್ರತಿ ತಿರುಗಾಡಲು ಕತ್ತೆಗಳ ಆಸರೆಯೇ ಇವರಿಗೆ ಅನಿವಾರ್ಯ.

– ಇದು ತಾಲೂಕಿನ ಕೋಡ್ಲಿ ಗ್ರಾಪಂ ವ್ಯಾಪ್ತಿಯ ಸುಂಠಾಣ ದುಸ್ಥಿತಿ.ದೇಶಕ್ಕೆ ಸ್ವಾತಂತ್ರ್ಯ ದೊರಕಿ 70 ವರ್ಷ  ಕಳೆದರೂ ಸುಂಠಾಣ ಮೂಲಸೌಲಭ್ಯ ವಂಚಿತ ಕುಗ್ರಾಮವಾಗಿದೆ. ಗ್ರಾಮದ ಓಣಿಗಳಲ್ಲಿ ರಸ್ತೆಯಿಲ್ಲದ ಕಾರಣ ಜನರು ದಿನನಿತ್ಯ ಕಲ್ಲು ಗುಂಡುಗಳ ಮಧ್ಯೆ ತಿರುಗಾಡಬೇಕಾಗಿದೆ. ಆಯತಪ್ಪಿ ಬಿದ್ದರೆ ಕೈಕಾಲು ಮುರಿಯುವುದು ನಿಶ್ಚಿತ. ಹಾಗಾಗಿ ಜನರು ರಾತ್ರಿ, ಹಗಲಿನಲ್ಲಿ ಗೋಡೆಗಳ ಆಸರೆಯಿಂದಲೇ ತಿರುಗಾಡಬೇಕು. ಒಬ್ಬರಿಗೊಬ್ಬರು ಕೈ ಹಿಡಿದು ನಡೆಯಬೇಕು!

ಗ್ರಾಮದ ಒಟ್ಟು ಜನಸಂಖ್ಯೆ1146 ಇದ್ದರೆ, ಮತದಾರರ ಸಂಖ್ಯೆ ಮಾತ್ರ  1265 ಇದೆ! ಇದು ಹೇಗಾಯಿತೆಂದು ಅಧಿಕಾರಿಗಳೇ ಹೇಳಬೇಕಷ್ಟೇ. ಬೇಸಿಗೆ ಹಾಗೂ ಗ್ರಾಮದ ಬಸವೇಶ್ವರ ಜಾತ್ರೆ ಸಂದರ್ಭದಲ್ಲಿ ವಿದ್ಯುತ್‌ ಕಂಬಗಳಿಗೆ ಬೀದಿ ದೀಪ ಅಳವಡಿಸುತ್ತಾರೆ. ಅವು ಕೆಟ್ಟರೆ ದುರಸ್ತಿ ಮಾಡಿಸುವುದಿಲ್ಲ. ಹೀಗಾಗಿ, ಕತ್ತಲೆಯಲ್ಲಿ ತಿರುಗಾಟ ಇಲ್ಲಿ ಅನಿವಾರ್ಯವಾಗಿದೆ.

ಗ್ರಾಮಸ್ಥರು ತಮ್ಮ ಮನೆಗಳನ್ನು ಗುಡ್ಡದ ಮೇಲೆ ನಿರ್ಮಿಸಿಕೊಂಡಿದ್ದು.  ಮನೆಗಳಿಗೆ ಹೋಗಬೇಕಾದರೆ ಕಲ್ಲುಗುಂಡುಗಳ ರಸ್ತೆ ಮೇಲೆಯೇ ತೆರಳಬೇಕು. ರಾತ್ರಿ ಹೊತ್ತಲ್ಲಿ ಇಲ್ಲಿ ತಿರುಗಾಡುವುದು ಕಷ್ಟ. ಮಕ್ಕಳು, ವೃದ್ಧರು  ಹಾಗೂ ಮಹಿಳೆಯರು ಈ ದುರ್ಗಮ ದಾರಿಯಲ್ಲಿ ಅಡ್ಡಾಡುವಾಗ ಕಲ್ಲುಗಳು ಕಾಲಿಗೆ ಬಡಿದು ಗಾಯ ಮಾಡಿಕೊಂಡಿದ್ದಾರೆ. ಎಡವಿ ಬೀಳುವವರಿಗಂತೂ ಲೆಕ್ಕವೇ ಇಲ್ಲ.

ಇಲ್ಲಗಳೇ ಎಲ್ಲ: ತಾಲೂಕಿನ ಅನೇಕ ಗ್ರಾಮಗಳು/ತಾಂಡಾಗಳು ಸರಕಾರಿ ಯೋಜನೆಗಳಿಂದ ಪ್ರಯೋಜನ ಪಡೆದುಕೊಂಡು ಅಭಿವೃದ್ಧಿ ಕಂಡಿವೆ. ಆದರೆ ಸುಂಠಾಣ ಗ್ರಾಮಕ್ಕೆ ಸಿಮೆಂಟ್‌ ರಸ್ತೆ, ಶೌಚಾಲಯಗಳಿಲ್ಲ, ಬಡವರಿಗೆ ಮನೆಗಳಿಲ್ಲ, ಚರಂಡಿ ವ್ಯವಸ್ಥೆಯಿಲ್ಲ. ರೈತರ ಹೊಲಗಳಿಗೆ ಹೋಗಲು ಹಾದಿ ಇಲ್ಲ. ಕಲ್ಲು ಗುಡ್ಡಗಳ ಮೇಲೆ ಇರುವ ಜಮೀನುಗಳಿಗೆ ಹೋಗಲು ರಸ್ತೆಗಳಿಲ್ಲ. ಇವರ ದಿನನಿತ್ಯದ ಬದುಕಿಗೆ ಕತ್ತೆಗಳೇ ಆಸರೆಯಾಗಿವೆ.

“ಉದಯವಾಣಿ’ ಈ ಹಿಂದೆ ಗ್ರಾಮದ ದುಸ್ಥಿತಿ ಬಗ್ಗೆ ವರದಿ ಮಾಡಿದ್ದನ್ನು ಗಮನಿಸಿದ ಬಳಿಕ ಎಚ್ಚೆತ್ತ ಸರಕಾರ ಗ್ರಾಮದ ಸಮೀಪ ಬಸ್‌ ಬರುವಂತೆ ಮಾಡಿದೆ. ಆದರೆ, ಕಲ್ಲುಗಳ ದಾರಿಯಲ್ಲಿ 200 ಅಡಿ ಏರಿ – ಇಳಿಯುವ ಸಂಕಷ್ಟ ಮಾತ್ರ ತಪ್ಪಿಲ್ಲ. ಗ್ರಾಮಕ್ಕೆ ಮೂಲಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ  ಕಲಬುರಗಿ-ಚಿಂಚೋಳಿ ರಾಜ್ಯ ಹೆದ್ದಾರಿ ತಡೆದು ಹೋರಾಟ ನಡೆಸಲು ಸುಂಠಾಣ ಗ್ರಾಮಸ್ಥರಾದ ಚಾಂದಪಾಶಾ ಮೌಜನ್‌, ಪ್ರಕಾಶ ಪಾಟೀಲ, ಹಣಮಂತ ದೊಡ್ಡಮನಿ, ಮಂಜುನಾಥ ಕೇಶಟ್ಟಿ ನಿರ್ಧರಿಸಿದ್ದಾರೆ.

ನಾಲ್ಕು ಬಾರಿ ಚುನಾವಣೆ ಬಹಿಷ್ಕಾರ
ನಾಲ್ಕು ಬಾರಿ ಗ್ರಾಪಂ ಪಂಚಾಯತ್‌ ಚುನಾವಣೆಗೆ ಬಹಿಷ್ಕಾರ ಹಾಕಿದ್ದೇವೆ. ಹೀಗಾಗಿ ಗ್ರಾಮಕ್ಕೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಬಡವರಿಗೆ ಮನೆಗಳನ್ನು ಕೊಟ್ಟಿಲ್ಲ, ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ನೀಡಿಲ್ಲ. ಗ್ರಾಮಕ್ಕೆ ಐವರು ಗ್ರಾಪಂ ಸದಸ್ಯರು ಬೇಕು. ಆದರೆ ಎರಡು ಸದಸ್ಯ ಸ್ಥಾನ ಮಾತ್ರ ನೀಡಲಾಗಿದೆ. ಇದರಿಂದಾಗಿ ನಾವು ಮತದಾನ ಬಹಿಷ್ಕಾರ ಮಾಡಿದ್ದೇವೆ.

– ಹಣಮಂತ ದೊಡ್ಮನಿ, ಸುಭಾಶ ಹಿಂದಿನಮನಿ, ಗ್ರಾಮದ ಮುಖಂಡರು

– ಶಾಮರಾವ ಚಿಂಚೋಳಿ

ಟಾಪ್ ನ್ಯೂಸ್

15-

Udupi: ಸಾಲ ಪ್ರಕರಣ: ಆರೋಪಿಗಳು ದೋಷಮುಕ್ತ

1-wqewqe

Students; ವಿವಸ್ತ್ರಗೊಳಿಸಿ, ಖಾಸಗಿ ಅಂಗಕ್ಕೆ ಘಾಸಿ!; ಹಿರಿಯ ವಿದ್ಯಾರ್ಥಿಗಳಿಂದ ಚಿತ್ರಹಿಂಸೆ

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

Dina Bhavishya

ಅನಿರೀಕ್ಷಿತ ಯಶಸ್ಸು..ಅನಿರೀಕ್ಷಿತ ಪ್ರಗತಿ… ಅನಿರೀಕ್ಷಿತ ಧನಪ್ರಾಪ್ತಿ

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

12-madikeri

Madikeri: ಅತ್ಯಾಚಾರಿಗೆ ಕಠಿಣ ಸಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqe-wewq

Cryptocurrency ವೆಬ್‌ಸೈಟ್ ಹ್ಯಾಕ್: ಕೊನೆಗೂ ಆರೋಪಿ ಶ್ರೀಕಿ ಬಂಧನ

ಲೋಕಸಭೆ ಮುಗಿಯಿತು, ಪರಿಷತ್‌ ಹಣಾಹಣಿ ಆರಂಭ

Election; ಲೋಕಸಭೆ ಮುಗಿಯಿತು, ಪರಿಷತ್‌ ಹಣಾಹಣಿ ಆರಂಭ

Prajwal Revanna Case 25 ಸಾವಿರ ಪೆನ್‌ಡ್ರೈವ್‌, ಡಿಕೆಶಿ ರೂವಾರಿ: ಎಚ್‌ಡಿಕೆ

Prajwal Revanna Case 25 ಸಾವಿರ ಪೆನ್‌ಡ್ರೈವ್‌, ಡಿಕೆಶಿ ರೂವಾರಿ: ಎಚ್‌ಡಿಕೆ

Rain ಮೇ 11ರ ವರೆಗೆ ರಾಜ್ಯದ ವಿವಿಧೆಡೆ ಮಳೆ ಸಾಧ್ಯತೆ

Rain ಮೇ 11ರ ವರೆಗೆ ರಾಜ್ಯದ ವಿವಿಧೆಡೆ ಮಳೆ ಸಾಧ್ಯತೆ

“ದೇವರಾಜೇಗೌಡ ಬಾಯಿ ಮುಚ್ಚಿಸಲು 15 ಕೋ.ರೂ.’: ಹಾಸನ ಕಾಂಗ್ರೆಸ್‌ ನಾಯಕ ಮಂಜೇಗೌಡ ಆರೋಪ

“ದೇವರಾಜೇಗೌಡ ಬಾಯಿ ಮುಚ್ಚಿಸಲು 15 ಕೋ.ರೂ.’: ಹಾಸನ ಕಾಂಗ್ರೆಸ್‌ ನಾಯಕ ಮಂಜೇಗೌಡ ಆರೋಪ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

1-wqe-wewq

Cryptocurrency ವೆಬ್‌ಸೈಟ್ ಹ್ಯಾಕ್: ಕೊನೆಗೂ ಆರೋಪಿ ಶ್ರೀಕಿ ಬಂಧನ

1——wqwqe

IPL ರಾಜಸ್ಥಾನ ವಿರುದ್ಧ ಗೆದ್ದ ಡೆಲ್ಲಿ ಪ್ಲೇಆಫ್ ಭರವಸೆ ಜೀವಂತ: ಆರ್ ಸಿಬಿಗೆ ಸವಾಲು

15-

Udupi: ಸಾಲ ಪ್ರಕರಣ: ಆರೋಪಿಗಳು ದೋಷಮುಕ್ತ

1-wqewqe

Students; ವಿವಸ್ತ್ರಗೊಳಿಸಿ, ಖಾಸಗಿ ಅಂಗಕ್ಕೆ ಘಾಸಿ!; ಹಿರಿಯ ವಿದ್ಯಾರ್ಥಿಗಳಿಂದ ಚಿತ್ರಹಿಂಸೆ

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.