ಭಾರತೀಯರಿಗೆ ಮತ್ತೆ ಶುರುವಾಯ್ತು ವೀಸಾ ಕಾಟ


Team Udayavani, Apr 5, 2017, 3:45 AM IST

bisi.jpg

ವಾಷಿಂಗ್ಟನ್‌: ಅಧ್ಯಕ್ಷೀಯ ಚುನಾವಣೆ ವೇಳೆ ನೀಡಿದ ಆಶ್ವಾಸನೆಯಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಎಚ್‌-1ಬಿ ವೀಸಾಗೆ ಕಡಿವಾಣ ಹಾಕುವ ಪ್ರಕ್ರಿಯೆ ಆರಂಭಿಸಿದ್ದಾರೆ.

ಇದರಿಂದಾಗಿ, ಎಚ್‌ 1ಬಿ ವೀಸಾ ನೀಡಿ ಭಾರತೀಯರು ಸೇರಿದಂತೆ ವಿದೇಶಿ ನೌಕರರನ್ನು ಕರೆಸಿಕೊಳ್ಳಲು ಇನ್ನು
ಮುಂದೆ ಅಮೆರಿಕದ ತಂತ್ರಜ್ಞಾನ ಕಂಪನಿಗಳಿಗೆ ಕಷ್ಟವಾಗಲಿದೆ. ಜತೆಗೆ, ಅಮೆರಿಕದ ಕಂಪನಿಗಳಿಗಾಗಿ ದುಡಿಯುತ್ತಿರುವ ಹಾಗೂ ಎಚ್‌ 1ಬಿ ವೀಸಾದಲ್ಲಿ ಅಮೆರಿಕದ ಕನಸು ಹೊತ್ತು ಸಾಗಿದ ಭಾರತೀಯರೂ ಸಂಕಷ್ಟಕ್ಕೀಡಾಗಲಿದ್ದಾರೆ.

ಮಂಗಳವಾರ ಈ ಕುರಿತ ಪ್ರಕಟಣೆ ಹೊರಡಿಸಿರುವ ಅಮೆರಿಕದ ಪೌರತ್ವ ಮತ್ತು ವಲಸೆ ಸೇವಾ ಇಲಾಖೆ, ಕೆಲವೊಂದು ಹೊಸ ನಿರ್ದೇಶನಗಳನ್ನು ನೀಡಿದೆ. ಅದರಂತೆ, ಆರಂಭಿಕ ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ ಕೆಲಸಗಳೂ ಇನ್ನು ಮುಂದೆ “ವಿಶೇಷ ಉದ್ಯೋಗ’ದ ವ್ಯಾಪ್ತಿಗೆ ಬರಲಿದ್ದು, ಇದು ಎಚ್‌ 1ಬಿ ವೀಸಾ ಪಡೆಯಲು ಇರುವ ಮೂಲ ಅಗತ್ಯವಾಗಿರುತ್ತದೆ. ಇದೇ ವೇಳೆ, ಯಾವುದೇ ಕಾರಣಕ್ಕೂ ಉದ್ಯೋಗದಾತ ಕಂಪನಿಗಳು ಎಚ್‌-1ಬಿ ವೀಸಾ ಪ್ರಕ್ರಿಯೆಯನ್ನು ದುರ್ಬಳಕೆ
ಮಾಡಿಕೊಂಡು ಅಮೆರಿಕದ ನೌಕರರಿಗೆ ತಾರತಮ್ಯ ಮಾಡಬಾರದು ಎಂಬ ಸ್ಪಷ್ಟ ಎಚ್ಚರಿಕೆಯನ್ನು ಟ್ರಂಪ್‌ ಆಡಳಿತ ರವಾನಿಸಿದೆ.

ಅಮೆರಿಕದಲ್ಲಿ 2017ರ ಅಕ್ಟೋಬರ್‌ 1ರಿಂದ ಆರಂಭವಾಗುವ ಹೊಸ ವಿತ್ತೀಯ ವರ್ಷಕ್ಕೆ ಕಂಪನಿಗಳ ಎಚ್‌1ಬಿ ವೀಸಾ ಅರ್ಜಿಗಳನ್ನು ಸ್ವೀಕರಿಸುವ ಪ್ರಕ್ರಿಯೆ ಸೋಮವಾರ ಆರಂಭವಾಗಿದ್ದು, ಇದೇ ಸಂದರ್ಭದಲ್ಲಿ ಸರ್ಕಾರ ಈ ಎಚ್ಚರಿಕೆ ನೀಡಿದೆ. 

ಹೊಸ ವೀಸಾ ನೀತಿ ಏನು ಹೇಳುತ್ತೆ?
1. ಏನಾಗುತ್ತೆ?: ಎಂಟ್ರಿ-ಲೆವೆಲ್‌ ಕಂಪ್ಯೂಟರ್‌ ಕೆಲಸಗಳಿಗೆ ನೀಡುವ ವೀಸಾದ ಮೇಲೆ ವಲಸೆ ಇಲಾಖೆ ತೀವ್ರ ನಿಗಾ ಇಟ್ಟಿರುವ ಕಾರಣ, ಕಂಪನಿಗಳಿಗೆ ಉದ್ಯೋಗಿಗಳ ನೇಮಕ ಕಷ್ಟವಾಗಲಿದೆ. ಒಂದು ವೇಳೆ, ಸರ್ಕಾರದ ಎಚ್ಚರಿಕೆ ಉಲ್ಲಂಘಿಸಿ ವಿದೇಶಿಯರಿಗೆ ಮಣೆ ಹಾಕಿದರೆ ಕಂಪನಿಗಳು ಕಠಿಣ ಕ್ರಮ ಎದುರಿಸಬೇಕಾಗುತ್ತದೆ.

2. ಎಚ್‌1 ಬಿ ಪ್ರೋಗ್ರಾಂ ಏಕೆ ಮುಖ್ಯ?: ವಿದೇಶಿ ನೌಕರರನ್ನು ಅಮೆರಿಕಕ್ಕೆ ಕರೆತರಲು ಇದು ಬೇಕೇ ಬೇಕು. ಸಾಫ್ಟ್ವೇರ್‌ ಡೆವಲಪರ್‌ನಂಥ ಹುದ್ದೆಗಳಿಗೆ ಅಮೆರಿಕನ್ನರಲ್ಲಿ ಅಷ್ಟೊಂದು ಕೌಶಲ್ಯವಿರದ ಕಾರಣ ಕಂಪನಿಗಳು ಭಾರತದಂಥ ದೇಶಗಳ ನಾಗರಿಕರನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತವೆ. ಭಾರತದಲ್ಲಿರುವ ಬಹುತೇಕ ಹೊರಗುತ್ತಿಗೆ ಕಂಪನಿಗಳು ಎಚ್‌ 1 ಬಿ ವೀಸಾ ಪ್ರೋಗ್ರಾಂ ಅನ್ನೇ ಅವಲಂಬಿಸಿವೆ.

3. ಹೊರಗುತ್ತಿಗೆ ಸಂಸ್ಥೆಗಳ ಮೇಲೆ ಪರಿಣಾಮ?: ಭಾರತದ ಹೊರಗುತ್ತಿಗೆ ಸಂಸ್ಥೆಗಳಾದ ಟಿಸಿಎಸ್‌, ವಿಪ್ರೋ, ಇನ್ಫೋಸಿಸ್‌ ಹಾಗೂ ಅಮೆರಿಕದಲ್ಲಿರುವ ಐಬಿಎಂ, ಕಾಗ್ನೆ„ಜೆಂಟ್‌ ಕಂಪನಿಗಳು ಎಚ್‌1ಬಿ ವೀಸಾವನ್ನು ಅವಲಂಬಿಸಿವೆ. ಇನ್ನು ಅವು ಎಂಟ್ರಿ ಲೆವೆಲ್‌ ಪ್ರೋಗ್ರಾಮರ್‌ಗಳ ಬದಲಿಗೆ, ಹೆಚ್ಚು ಕೌಶಲ್ಯವಿರುವ ಉದ್ಯೋಗಿಗಳನ್ನು ಹೆಚ್ಚು ವೇತನ ನೀಡಿ ನೇಮಿಸಿಕೊಳ್ಳಬೇಕಾಗುತ್ತದೆ. 

ಟಾಪ್ ನ್ಯೂಸ್

1-modi

Congress ಗೆದ್ದರೆ 370ನೇ ವಿಧಿ ವಾಪಸ್‌: ಮೋದಿ ಆರೋಪ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-modi

Congress ಗೆದ್ದರೆ 370ನೇ ವಿಧಿ ವಾಪಸ್‌: ಮೋದಿ ಆರೋಪ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.