ಬತ್ತಿದ ಬೋರ್ವೆಲ್ನಲ್ಲಿ ಉಕ್ಕಿದ ನೀರು!
Team Udayavani, Apr 25, 2017, 11:18 AM IST
ಉಡುಪಿ: ನೀರಿಲ್ಲವೆಂದು 10 ವರ್ಷಗಳ ಹಿಂದೆ ಮುಚ್ಚಿದ ಬೋರ್ವೆಲ್ನಲ್ಲಿ ಅಚ್ಚರಿ ಎಂಬಂತೆ ಕಳೆದ ಮೂರು ದಿನಗಳಿಂದ ನೀರು ಹೊರಬರಲಾರಂಭಿಸಿದೆ.
ಅಲೆವೂರಿನ ಪ್ರಗತಿನಗರದಲ್ಲಿ ಈ ಘಟನೆ ಸಂಭವಿಸಿದೆ. ದಿನದಿಂದ ದಿನಕ್ಕೆ ನೀರಿನ ಒರತೆ ಹೆಚ್ಚುತ್ತಿದ್ದು, ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. ಈ ಬಗ್ಗೆ ಉದಯವಾಣಿಗೆ ಪ್ರತಿಕ್ರಿಯಿಸಿದ ಅಲೆವೂರು ಗ್ರಾ.ಪಂ. ಅಧ್ಯಕ್ಷ ಶ್ರೀಕಾಂತ್ ನಾಯಕ್ ಕಳೆದ 15 ವರ್ಷಗಳ ಹಿಂದೆ ಈ ಕೊಳವೆಬಾವಿ ತೋಡಿದ್ದು, ನೀರಿನ ಮಟ್ಟ ಕಡಿಮೆ ಇತ್ತು. 10 ವರ್ಷಗಳ ಹಿಂದೆ ಪಂಪ್ ಅಳವಡಿಸುವಾಗ ಸಮಸ್ಯೆ ಉಂಟಾಗಿತ್ತು. ಆ ಬಳಿಕ ಇದರಿಂದ ನೀರು ತೆಗೆಯುವುದನ್ನು ನಿಲ್ಲಿಸಿ ಮುಚ್ಚಲಾಗಿತ್ತು. ಇದು ಇಳಿಜಾರು ಪ್ರದೇಶವಾಗಿದ್ದರಿಂದ ಮಳೆ ನೀರೆಲ್ಲ ಇದಕ್ಕೆ ಹರಿದು ಬಿಡಲಾಗಿತ್ತು.
ಅದರಿಂದ ನೀರು ಮೇಲೆ ಬಂದಿರುವ ಸಾಧ್ಯತೆ ಇದೆ. ಆದರೆ ಈ ಬಿರುಬೇಸಗೆಯಲ್ಲಿ ಇಷ್ಟು ದಿನ ಇಲ್ಲದ ನೀರು ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ
ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್