ಅಭ್ಯಾಸದಲ್ಲೂ  ಡೆತ್‌ ಓವರ್‌ ಎಸೆಯುತ್ತಿದ್ದೆ:  ಜಸ್‌ಪ್ರೀತ್‌ ಬುಮ್ರಾ


Team Udayavani, May 1, 2017, 11:34 AM IST

bumra2.jpg

ರಾಜ್‌ಕೋಟ್‌: ಅಮೋಘ ಎನಿಸಿದ “ಸೂಪರ್‌ ಓವರ್‌’ ಒಂದನ್ನು ಎಸೆದು ರೋಚಕ ಟೈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ಗೆ ಗೆಲುವು ತಂದಿತ್ತ ಜಸ್‌ಪ್ರೀತ್‌ ಬುಮ್ರಾ ಶನಿವಾರ ರಾತ್ರಿಯ ಐಪಿಎಲ್‌ ಹೀರೋ ಆಗಿ ಹೊರಹೊಮ್ಮಿದ್ದಾರೆ. ಅಭ್ಯಾಸದಲ್ಲೂ ಡೆತ್‌ ಓವರ್‌ ಎಸೆಯುತ್ತ ಬಂದದ್ದು ಹಾಗೂ ಮಾಲಿಂಗ ಜತೆ ಯಾರ್ಕರ್‌ಗಳನ್ನು ಅಭ್ಯಸಿಸಿದ್ದು ಪ್ರಯೋಜನಕ್ಕೆ ಬಂತು ಎಂಬುದಾಗಿ ಅವರು ಹೇಳಿದರು.

ಆತಿಥೇಯ ಗುಜರಾತ್‌ ಮತ್ತು ಮುಂಬೈ ನಡುವಿನ ಶನಿವಾರದ ಪಂದ್ಯ ತಲಾ 153 ರನ್ನುಗಳೊಂದಿಗೆ ಟೈಯಲ್ಲಿ ಅಂತ್ಯ ಕಂಡಿತು. ಅನಂತರದ ಸೂಪರ್‌ ಓವರ್‌ನಲ್ಲಿ ಮುಂಬೈ ಜಯ ಸಾಧಿಸಿ ಎರಡಂಕವನ್ನು ಕಿಸೆಗೆ ಹಾಕಿಕೊಂಡಿತು.

“ನಾನು ಎಸೆದ ಮೊತ್ತಮೊದಲ ಸೂಪರ್‌ ಓವರ್‌ ಇದಾಗಿತ್ತು. ಹೀಗಾಗಿ ಬಹಳ ಒತ್ತಡಕ್ಕೆ ಸಿಲುಕಿದ್ದೆ. ನಮ್ಮ ತಂಡ ಕೇವಲ 11 ರನ್ನನ್ನು ಉಳಿಸಿಕೊಳ್ಳಬೇಕಿತ್ತು. ಈ ಸಂದರ್ಭದಲ್ಲಿ ಪ್ರಶಾಂತ ಮನಸ್ಥಿತಿಯ ಅಗತ್ಯವಿರುತ್ತದೆ. ಸಕಾರಾತ್ಮಕ ಸಂಗತಿಗಳತ್ತ, ನಮ್ಮ ಯೋಜನೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ನಾನು ಯಶಸ್ವಿಯಾದೆ…’ ಎಂದು ಟೈ ಓವರಿನಲ್ಲಿ ಗುಜರಾತನ್ನು ಕಟ್ಟಿಹಾಕಿದ ಬುಮ್ರಾ ಹೇಳಿದರು.

ನಿಜಕ್ಕಾದರೆ ಮುಂಬೈ ನಿರಾಯಾಸಾವಾಗಿ ಗೆಲ್ಲುವಂಥ ಪಂದ್ಯ ಇದಾಗಿತ್ತು. ಆರಂಭಕಾರ ಪಾರ್ಥಿವ್‌ ಪಟೇಲ್‌ ಭಾರೀ ಜೋಶ್‌ನಲ್ಲಿದ್ದರು. ಮೊದಲ 3 ಓವರ್‌ಗಳಲ್ಲೇ 7 ಬೌಂಡರಿ, ಒಂದು ಸಿಕ್ಸರ್‌ ಸಿಡಿಯಲ್ಪಟ್ಟಿತ್ತು. ಆದರೆ 44 ಎಸೆತಗಳಿಂದ 70 ರನ್‌ ಬಾರಿಸಿದ ಪಾರ್ಥಿವ್‌ 14ನೇ ಓವರಿ ನಲ್ಲಿ ಔಟಾಗುವುದರೊಂದಿಗೆ ಮುಂಬೈ ಪರಿಸ್ಥಿತಿ ಬಿಗಡಾ ಯಿಸುತ್ತ ಹೋಯಿತು. ಅಂತಿಮ ಓವರಿನಲ್ಲಿ 2 ವಿಕೆಟ್‌ಗಳಿಂದ 11 ರನ್‌ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತು.

ಇರ್ಫಾನ್‌ ಪಠಾಣ್‌ ಎಸೆದ ಕೊನೆಯ ಓವರಿನ ಮೊದಲ ಎಸೆತವನ್ನೇ ಕೃಣಾಲ್‌ ಪಾಂಡ್ಯ ಸಿಕ್ಸರಿಗೆ ಬೀಸಿದರು. ಬಳಿಕ ಒಂದು ರನ್‌ ತೆಗೆದರು. 3ನೇ ಎಸೆತದಲ್ಲಿ ಬುಮ್ರಾ ರನೌಟಾದರು. ಮುಂದಿನೆರಡು ಎಸೆತಗಳಲ್ಲಿ ಪಾಂಡ್ಯ 2 ಹಾಗೂ ಒಂದು ರನ್‌ ಮಾಡಿದರು. ಅಂತಿಮ ಎಸೆತದಲ್ಲಿ ಒಂದು ರನ್‌ ಕದಿಯುವ ಧಾವಂತದಲ್ಲಿ ಪಾಂಡ್ಯ ರನೌಟಾದರು. ಸ್ಕೋರ್‌ ಸಮನಾಯಿತು.

ಸೂಪರ್‌ ಓವರ್‌ ಮ್ಯಾಜಿಕ್‌
ಗುಜರಾತ್‌ ಪರ ಸೂಪರ್‌ ಓವರ್‌ ಎಸೆದವರು ಜೇಮ್ಸ್‌ ಫಾಕ್ನರ್‌. ಮುಂಬೈ 5 ಎಸೆತಗಳಲ್ಲಿ 2 ವಿಕೆಟ್‌ ಕಳೆದುಕೊಂಡು 11 ರನ್ನಿಗೆ “ಆಲೌಟ್‌’ ಆಯಿತು. ಪೊಲಾರ್ಡ್‌ 10, ಬಟ್ಲರ್‌ ಒಂದು ರನ್‌ ಮಾಡಿದರು.  ಗುಜರಾತ್‌ ಗೆಲುವಿಗೆ 12 ರನ್‌ ಮಾಡಿದರೆ ಸಾಕಿತ್ತು. ಫಿಂಚ್‌-ಮೆಕಲಮ್‌ ಅವರಂಥ ಬಿಗ್‌ ಹಿಟ್ಟರ್ ಕ್ರೀಸಿಗೆ ಇಳಿದಿದ್ದರು. ಇತ್ತ ಬುಮ್ರಾ ಆರಂಭದಲ್ಲೇ ಲಯ ತಪ್ಪಿದ್ದರು. ನೋಬಾಲ್‌, ವೈಡ್‌ ಕೂಡ ಎಸೆದರು. ಆದರೆ ಇಬ್ಬರ ಬ್ಯಾಟಿನಿಂದ ಬಂದದ್ದು ಒಂದೊಂದು ಸಿಂಗಲ್ಸ್‌ ಮಾತ್ರ. ಅದೂ ಕೊನೆಯ 2 ಎಸೆತಗಳಲ್ಲಿ. ಗುಜರಾತ್‌ ಗಳಿಸಿದ ಒಟ್ಟು ರನ್‌ ಕೇವಲ 6. ಮುಂಬೈ ಲಕ್ಕಿ ತಂಡ ಎಂಬುದು ಇದರಿಂದ ಸಾಬೀತಾಗಿದೆ!
 

ಟಾಪ್ ನ್ಯೂಸ್

5

ಲಕ್ಷದ್ವೀಪ ಪ್ರವಾಸೋದ್ಯಮದ ಅವಕಾಶ ಬಳಸಿಕೊಳ್ಳುವಲ್ಲಿ ಮಂಗಳೂರು ಹಿನ್ನಡೆ

Anjali Ambigera Case; Girish and Anjali got married 15 days ago!

Anjali Ambigera Case; ಹಂತಕ ಗಿರೀಶ್ ಗೂ ಅಂಜಲಿಗೂ 15 ದಿನಗಳ ಮೊದಲೇ ಮದುವೆಯಾಗಿತ್ತು!

ರೈಲಿನಲ್ಲಿ ಮಹಿಳೆಯೊಂದಿಗೆ ಕಿರಿಕ್; ಚಾಕು ಇರಿತ; ಅಂಜಲಿ ಹಂತಕ ಸಿಕ್ಕಿ ಬಿದ್ದಿದ್ಹೇಗೆ?

ರೈಲಿನಲ್ಲಿ ಮಹಿಳೆಯೊಂದಿಗೆ ಕಿರಿಕ್; ಚಾಕು ಇರಿತ; ಅಂಜಲಿ ಹಂತಕ ಸಿಕ್ಕಿ ಬಿದ್ದಿದ್ಹೇಗೆ?

kiccha sudeepa gave update about max

MAX; ಅಭಿಮಾನಿಗಳಿಗೆ ಸುದೀಪ್‌ ಅಪ್ಡೇಟ್

2-chikkamagaluru

Chikkamagaluru: ಗುಂಡೇಟಿನಿಂದ ಯುವಕ ಸಾವು: ಹೆಚ್ಚಿದ ಅನುಮಾನ

Anjali Ambigera Case; ದಾವಣಗೆರೆಯಲ್ಲಿ ಹಂತಕನನ್ನು ಬಂಧಿಸಿದ ಪೊಲೀಸರು

Anjali Ambigera Case; ದಾವಣಗೆರೆಯಲ್ಲಿ ಹಂತಕನನ್ನು ಬಂಧಿಸಿದ ಪೊಲೀಸರು

ICC T20 world cup 2024 warm up match schedule

T20 World Cup: ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಒಂದೇ ಪಂದ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ICC T20 world cup 2024 warm up match schedule

T20 World Cup: ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಒಂದೇ ಪಂದ್ಯ

IPL 2024: ಅಂತಿಮ ಪಂದ್ಯದಲ್ಲಿ ಮುಂಬೈಗೆ ಲಕ್ನೋ ಎದುರಾಳಿ

IPL 2024: ಅಂತಿಮ ಪಂದ್ಯದಲ್ಲಿ ಮುಂಬೈಗೆ ಲಕ್ನೋ ಎದುರಾಳಿ

32

Match fixing: ಭಾರತದ ಪ್ರಜೆಗಳಿಬ್ಬರ ಪಾಸ್‌ಪೋರ್ಟ್‌ ವಶಕ್ಕೆ ಆದೇಶ

30

ICC T20 Rankings : ಭಾರತ, ಸೂರ್ಯಕುಮಾರ್‌ ನಂ.1

Paris Olympics: ಟೇಬಲ್‌ ಟೆನಿಸ್‌; ಶರತ್‌, ಮಣಿಕಾ ನೇತೃತ್ವ

Paris Olympics: ಟೇಬಲ್‌ ಟೆನಿಸ್‌; ಶರತ್‌, ಮಣಿಕಾ ನೇತೃತ್ವ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

5

ಲಕ್ಷದ್ವೀಪ ಪ್ರವಾಸೋದ್ಯಮದ ಅವಕಾಶ ಬಳಸಿಕೊಳ್ಳುವಲ್ಲಿ ಮಂಗಳೂರು ಹಿನ್ನಡೆ

4

Bantwal: ಬಾವಿಗೆ ಬಿದ್ದ ಮಗು; ರಕ್ಷಿಸಿದ ಯುವಕ

ISIS case: ಅಮ್ಮರ್‌ ಅಬ್ದುಲ್‌ಗೆ ಜಾಮೀನು

ISIS case: ಅಮ್ಮರ್‌ ಅಬ್ದುಲ್‌ಗೆ ಜಾಮೀನು

Anjali Ambigera Case; Girish and Anjali got married 15 days ago!

Anjali Ambigera Case; ಹಂತಕ ಗಿರೀಶ್ ಗೂ ಅಂಜಲಿಗೂ 15 ದಿನಗಳ ಮೊದಲೇ ಮದುವೆಯಾಗಿತ್ತು!

Udupi: ಲೈಂಗಿಕ ದೌರ್ಜನ್ಯ ಬಿಡುಗಡೆಗೆ ಆದೇಶ

Udupi: ಲೈಂಗಿಕ ದೌರ್ಜನ್ಯ ಬಿಡುಗಡೆಗೆ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.