ಮಾನವ ಸಹಿತ ರಾಕೆಟ್‌ ಉಡಾವಣೆಗೆ ದಿನ ಹತ್ತಿರ?


Team Udayavani, May 29, 2017, 9:41 AM IST

ISRO-Logo-650.jpg

ಹೊಸದಿಲ್ಲಿ: ಮಾನವ ಸಹಿತ ರಾಕೆಟ್‌ ಉಡಾವಣೆ ಮಾಡುವ ಭಾರತದ ಕನಸು ಹತ್ತಿರವಾಗುವ ಕಾಲ ಬಂದಿದೆ. ಏಷ್ಯಾ ವಲಯದ 200 ಆನೆಗಳಷ್ಟು ಭಾರವಿರುವ ದೈತ್ಯ ಸಾಮರ್ಥ್ಯದ, ದೇಶದ ನೆಲದಲ್ಲೇ ಅಭಿವೃದ್ಧಿಪಡಿಸಲಾದ ಬಾಹ್ಯಾಕಾಶ ರಾಕೆಟ್‌ ಪರೀಕ್ಷಾರ್ಥ ಉಡಾವಣೆಗೆ ಇಸ್ರೋ ಸಿದ್ಧತೆ ನಡೆಸಿದೆ. ಜಿಎಸ್‌ಎಲ್‌ವಿ ಎಂಕೆ-3 ರಾಕೆಟ್‌ ಜೂನ್‌ 5ರಂದು ನಭಕ್ಕೆ ಚಿಮ್ಮಲಿದೆ. ಈ ರಾಕೆಟ್‌ನ ಉಡಾವಣೆ ಯಶಸ್ವಿಯಾದಲ್ಲಿ ಮುಂದಿನ ದಿನಗಳಲ್ಲಿ ತನ್ನದೇ ನೆಲದಿಂದ ಮಾನವನನ್ನು ಬಾಹ್ಯಾ ಕಾಶಕ್ಕೆ ಕಳುಹಿಸಿಕೊಡುವ ಶಕ್ತಿ ಭಾರತದ್ದಾಗಲಿದೆ. ಈ ಮೂಲಕ ಭಾರತವೂ ವಿಶ್ವದ ಅಗ್ರ ಪಂಕ್ತಿಯ ಸ್ಪೇಸ್‌ ಕ್ಲಬ್‌ ರಾಷ್ಟ್ರಗಳಾದ ರಷ್ಯಾ, ಅಮೆರಿಕ ಮತ್ತು ಚೀನ ಸಾಲಿಗೆ ಸೇರಲಿದೆ.

ಜಿಯೋ ಸಿಂಕ್ರೋನಸ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌ ಮಾರ್ಕ್‌ 3 (ಜಿಎಸ್‌ಎಲ್‌ವಿ ಎಂಕೆ-3) ರಾಕೆಟ್‌ ಈಗಾಗಲೇ ಆಂಧ್ರ ಪ್ರದೇಶದಲ್ಲಿರುವ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಪರೀಕ್ಷಾರ್ಥ ಉಡಾವಣೆಗೆ ಸಜ್ಜುಗೊಂಡಿದೆ. ಈ ರಾಕೆಟ್‌ನ ಒಟ್ಟಾರೆ ಭಾರ ಅಂದಾಜು 640 ಟನ್‌ ಇರಲಿದೆ. ಅಂದರೆ ಪೂರ್ತಿ ಭರ್ತಿಯಾದ ಜಂಬೋ ಜೆಟ್‌ ವಿಮಾನದ ಐದು ಪಟ್ಟು ಭಾರ ಹೊಂದಿರಲಿದೆ. 1993ರಲ್ಲಿ ಜಿಎಸ್‌ಎಲ್‌ವಿ ಸರಣಿಯ ಮೊದಲ ರಾಕೆಟ್‌ ಉಡಾವಣೆ ವಿಫ‌ಲವಾಗಿತ್ತು. ಆದರೆ ಅನಂತರ ಇದು ಹಿಂದಿರುಗಿ ನೋಡಿದ್ದೇ ಇಲ್ಲ. ಇದುವರೆಗೆ 38 ರಾಕೆಟ್‌ಗಳನ್ನು ಉಡಾವಣೆ ಮಾಡಿ ಯಶಸ್ಸಿನ ಇತಿಹಾಸ ಬರೆದಿದೆ.

ಬಾಹ್ಯಾಕಾಶಕ್ಕೆ ರಾಕೆಟ್‌ ಉಡಾವಣೆ ಸಾಕಷ್ಟು ಕ್ಲಿಷ್ಟಕರವಾದ ಪ್ರಕ್ರಿಯೆಯಾಗಿದ್ದು, ಅಮೆರಿಕ, ಫ್ರಾನ್ಸ್‌, ಜಪಾನ್‌ ಸಹಿತ ಅನೇಕ ರಾಷ್ಟ್ರಗಳು ಹಾಗೂ ಖಾಸಗಿ ಕಂಪೆನಿಗಳು ನಡೆಸಿರುವ ಉಡಾವಣೆಗಳೂ ವಿಫ‌ಲಗೊಂಡಿವೆ. ಅಮೆರಿಕ ‘ಸ್ಪೇಸ್‌ಎಕ್ಸ್‌’ ನಿರ್ಮಾಣದ ಫಾಲ್ಕಾನ್‌-9 ಕೂಡ 2016ರಲ್ಲಿ ವಿಫ‌ಲಗೊಂಡಿತ್ತು. ಕೇಂದ್ರ ಸರಕಾರವು 2-3 ಶತಕೋಟಿ ಡಾಲರ್‌ ಅನುದಾನವನ್ನು ಬಿಡುಗಡೆ ಮಾಡಿದರೆ ಎರಡರಿಂದ ಮೂವರು ಸದಸ್ಯರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆಯನ್ನು ಇಸ್ರೋ ಹಾಕಿಕೊಂಡಿದೆ. ವಿಶೇಷವೆಂದರೆ ಮಹಿಳಾ ಸದಸ್ಯೆಯನ್ನೇ ಮೊದಲು ಬಾಹ್ಯಾಕಾಶಕ್ಕೆ ಕಳುಹಿಸಲು ಇಸ್ರೋ ಚಿಂತನೆ ನಡೆಸಿದೆ.

ಏನಿದರ ವಿಶೇಷ?
640 ಟನ್‌: ರಾಕೆಟ್‌ನ ಒಟ್ಟಾರೆ ಭಾರ
43.43 ಮೀ.: ನೌಕೆಯ ಎತ್ತರ
4 ಮೀ.: ನೌಕೆಯ ಸುತ್ತಳತೆ
4 ಟನ್‌: ಭಾರ ಹೊತ್ತೂಯ್ಯುವ ಸಾಮರ್ಥ್ಯ
300 ಕೋಟಿ ರೂ.: ರಾಕೆಟ್‌ ಅಭಿವೃದ್ಧಿಗೆ ತಗಲಿರುವ ವೆಚ್ಚ

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yogi adityanath

Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ

farmers, trailer, housewives star campaigners for CM Jagan’s party

Andhra Pradesh; ಸಿಎಂ ಜಗನ್‌ ಪಕ್ಷಕ್ಕೆ ರೈತರು,ಟೆೃಲರ್‌, ಗೃಹಿಣಿಯರೇ ಸ್ಟಾರ್‌ ಪ್ರಚಾರಕರು!

ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

ಉಗ್ರರಿದ್ದಲ್ಲೇ ನುಗ್ಗಿ ವಿನಾಶ: ಪ್ರಧಾನಿ ಮೋದಿ

ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ

Suspense still about Rae Bareli, Amethi Congress candidates!

Lok Sabha; ರಾಯ್‌ಬರೇಲಿ, ಅಮೇಠಿ ಕಾಂಗ್ರೆಸ್‌ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.