ಎಲ್ಓಸಿಯಲ್ಲಿ ಸೇನೆಯಿಂದ ಪ್ರತಿದಾಳಿ:ಇಬ್ಬರು ಪಾಕ್ ಟ್ರೂಪರ್ ಹತ್ಯೆ
Team Udayavani, May 30, 2017, 11:19 AM IST
ಶ್ರೀನಗರ : ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿನ ಉರಿ ವಲಯದಲ್ಲಿ ಪಾಕಿಸ್ಥಾನದ ಬಾರ್ಡರ್ ಆ್ಯಕ್ಷನ್ ಟೀಮ್ (ಬ್ಯಾಟ್) ದಾಳಿಯನ್ನು ವಿಫಲ ಗೊಳಿಸುವಲ್ಲಿನ ಪ್ರತಿ ದಾಳಿಯಲ್ಲಿ ಭಾರತೀಯ ಸೇನೆ ನಿನ್ನೆ ಸೋಮವಾರ ಸಂಜೆ ಇಬ್ಬರು ಪಾಕಿಸ್ಥಾನೀ ಟ್ರೂಪರ್ಗಳನ್ನು ಗುಂಡಿಕ್ಕಿ ಕೊಂದಿರುವುದಾಗಿ ವರದಿಯಾಗಿದೆ.
ಗಡಿ ನಿಯಂತ್ರಣ ರೇಖೆಯಲ್ಲಿನ ಉರಿ ವಲಯದಲ್ಲಿ ದಾಳಿಗೆ ಮುಂದಾಗಿದ್ದ ಪಾಕಿಸ್ಥಾನೀ ಬ್ಯಾಟ್ ಟ್ರೂಪರ್ ಗಳಿಬ್ಬರನ್ನು ಭಾರತೀಯ ವಿಶೇಷ ಪಡೆಯ ಯೋಧರು ಗುಂಡಿಕ್ಕಿ ಸಾಯಿಸಿದರೆಂದು ರಕ್ಷಣಾ ಮೂಲಗಳು ತಿಳಿಸಿವೆ.
‘ಪಾಕ್ ಟ್ರೂಪರ್ಗಳ ಮೇಲಿನ ಮರು ದಾಳಿಯನ್ನು ಸಂಘಟಿಸಿದ ಭಾರತೀಯ ಸೇನೆಯು ಸರತಿಯ ಸಾಲಲ್ಲಿ ಸಾಗುತ್ತಿದ್ದ ಮೂರು ಪಾಕ್ ಸೇನಾ ವಾಹನಗಳ ಮೇಲೆ ನಮ್ಮ ಭಾರತೀಯ ಸೇನಾ ಪಡೆಯ ಟ್ರೂಪರ್ಗಳು ದಾಳಿ ಸಂಘಟಿಸಿ ಇಬ್ಬರು ಪಾಕ್ ಟ್ರೂಪರ್ಗಳನ್ನು ಗುಂಡಿಕ್ಕಿ ಕೊಂದರು’ ಎಂದು ರಕ್ಷಣಾ ಮೂಲಗಳು ಹೇಳಿವೆ.
ಪಾಕಿಸ್ಥಾನದ ಕಡೆಯಿಂದ ಬ್ಯಾಟ್ ದಾಳಿ ನಡೆಯುವ ಸಂಭಾವ್ಯತೆಯನ್ನು ಮೊದಲೇ ಮನಗಂಡ ಭಾರತೀಯ ಟ್ರೂಪರ್ಗಳು ತಾವು ದಾಳಿ ಸಂಘಟಿಸುವ ಮುನ್ನ ಮುಂಜಾಗ್ರತಾ ಕ್ರಮವಾಗಿ ಶ್ರೀನಗ – ಮುಜಫರಾಬಾದ್ ಸಾಪ್ತಾಹಿಕ ಬಸ್ ಸೇವೆಯನ್ನು ರದ್ದುಪಡಸಿದ್ದರು ಎಂದು ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
MUST WATCH
ಹೊಸ ಸೇರ್ಪಡೆ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ