ಮರ ಬಿದ್ದು ಮನೆಗೆ ಹಾನಿ
Team Udayavani, Jun 13, 2017, 1:57 PM IST
ಉಪ್ಪಿನಂಗಡಿ: ಇಲ್ಲಿನ ಮಠ – ಹಿರ್ತಡ್ಕದಲ್ಲಿ ಹೆದ್ದಾರಿ ಬದಿಯ ಮರ ತೆರವು ಕಾರ್ಯಾಚರಣೆಯಲ್ಲಿ ಮನೆಯೊಂದಕ್ಕೆ ಮರ ಬಿದ್ದು ಮನೆ ಭಾಗಶಃ ಹಾನಿಗೀಡಾಗಿದೆ.
ಹೆದ್ದಾರಿ ಇಲಾಖೆಯು ಮರ ತೆರವು ಕಾರ್ಯ ನಡೆಸುತ್ತಿದ್ದು, ಯಾವುದೇ ಸುರಕ್ಷತಾ ನಿಯಮ ಪಾಲಿಸದೆ ಗಾಳಿ ಮರವೊಂದನ್ನು ಕಡಿದಾಗ ಅದು ಸಮೀಪದ ಕಾಸಿಂ ಅವರ ಮನೆಗೆ ಬಿದ್ದು ಛಾವಣಿ ಹಾನಿಗೀಡಾಗಿದೆ.
ಈ ಬಗ್ಗೆ ಯಾವುದೇ ಪರಿಹಾರವನ್ನೂ ನೀಡದೆ, ಮನೆಯನ್ನು ದುರಸ್ತಿ ಪಡಿಸಿ, ಬಳಿಕ ಬಿಲ್ ತಂದೊಪ್ಪಿಸಿ, ನಾವು ಹಣ ನೀಡುತ್ತೇವೆ ಎಂದು ತಿಳಿಸಿದ್ದಾರೆಯೇ ವಿನಾ ನಮ್ಮ ತಪ್ಪಿನಿಂದಾದ ಘಟನೆಗೆ ಸಂಬಂಧಿಸಿ ತತ್ಕ್ಷಣದ ಪರಿಹಾರ ನೀಡದೆ ಬಡವರಾದ ನಮ್ಮನ್ನು ವಂಚಿಸುತ್ತಿದ್ದಾರೆ ಎಂದು ಕಾಸೀಮ್ ಅವರು ಪೊಲೀಸ್ ಇಲಾಖೆಗೆ ಹಾಗೂ ಪಂಚಾಯತ್ ಆಡಳಿತಕ್ಕೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಛಾವಣಿ ಹಾನಿಗೀಡಾದ್ದರಿಂದ ಮನೆಯೊಳಗೆ ನೀರು ತುಂಬಿಕೊಂಡು ಮನೆಮಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ