ಬಿಐಇಟಿಯಲ್ಲಿ ಇನ್ಹೌಸ್ ಮಾದರಿ ಪ್ರದರ್ಶನ
Team Udayavani, Jun 23, 2017, 1:15 PM IST
ದಾವಣಗೆರೆ: ಮುಂದಿನ ಪರಿಸರ ಸ್ನೇಹಿ ತಂತ್ರಜ್ಞಾನ ಯಾವ ರೀತಿ ಇರಬಲ್ಲದು ಎಂಬುದರ ಪ್ರಾತ್ಯಕ್ಷಿಕೆಯನ್ನು ನೋಡುಗರ ಮುಂದಿಡಲು ಗುರುವಾರ ಬಿಐಇಟಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಇನ್ಹೌಸ್ ತಾಂತ್ರಿಕ ಮಾದರಿಗಳ ಪ್ರದರ್ಶನ ಯಶಸ್ವಿಯಾಯಿತು.
ಪ್ರಕೃತಿಗೆ ಹಾನಿ ಉಂಟು ಮಾಡದ, ಪ್ರಕೃತಿಯಲ್ಲಿಯೇ ಸಿಗುವ ಶಕ್ತಿಗಳನ್ನು ಬಳಕೆಮಾಡಿಕೊಳ್ಳುವ ವಾಹನ, ವಸ್ತು ಉತ್ಪಾದನಾ ಘಟಕ ಸೇರಿದಂತೆ ಹಲವು ಮಾದರಿಗಳನ್ನು ಗಮನ ಸೆಳೆದವು. ವಿದ್ಯಾರ್ಥಿಯೋರ್ವ ಸಿದ್ಧಪಡಿಸಿದ್ದ ಸ್ವಯಂಚಾಲಿತ ವಾಹನ ಎಲ್ಲರ ಗಮನ ಸೆಳೆಯಿತು.
ಸೋಲಾರ್ ಬ್ಯಾಟರಿ, ಪವನ ವಿದ್ಯುತ್ ಶಕ್ತಿಯಿಂದ ಚಲಿಸುವ ಈ ವಾಹನ ಭವಿಷ್ಯದಲ್ಲಿ ನಾವು ಕಾಣಬಹುದಾದ ವಾಹನದ ಮಾದರಿಗಳನ್ನು ಮುಂದಿಟ್ಟಿತು. ಬೆಂಗಳೂರು ಜವಾಹರ್ ಲಾಲ್ ನೆಹರು ವೈಜ್ಞಾನಿಕ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ| ಕೆ.ಆರ್. ಶ್ರೀನಿವಾಸ್ ಪ್ರದರ್ಶನಕ್ಕೆ ಚಾಲನೆ ನೀಡಿದರು.
ವಿದ್ಯಾರ್ಥಿಗಳು ತಮ್ಮ ಸಂಶೋಧನೆಗಳನ್ನು ಮಾಡುವಾಗ ಮುಂದಿನ ಜಗತ್ತಿನ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಳ್ಳಬೇಕು. ಆದಷ್ಟು ಪ್ರಕೃತಿದತ್ತವಾಗಿ ಯಥೇತ್ಛವಾಗಿ ಸಿಗುವ ಮುಗಿಯದ ಸಂಪನ್ಮೂಲಗಳನ್ನು ಬಳಕೆಮಾಡಿಕೊಂಡು ಹೊಸ ಅನ್ವೇಷಣೆಮಾಡುವತ್ತ ಗಮನ ಹರಿಸಬೇಕು ಎಂದರು.
ಕಾಲೇಜು ನಿರ್ದೇಶಕ ಪ್ರೊ| ವೈ. ವೃಷಭೇಂದ್ರಪ್ಪ, ಪ್ರಾಂಶುಪಾಲ ಡಾ| ಸುಬ್ರಮಣ್ಯ ಸ್ವಾಮಿ, ಡಾ| ಇ. ರಂಗಸ್ವಾಮಿ, ಡಾ| ಕೆ. ಸದಾಶಿವ, ಡಾ| ಎಸ್. ಕುಮಾರಪ್ಪ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್ಗೆ ನಡುಕ: ಗಾಯತ್ರಿ
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
MUST WATCH
ಹೊಸ ಸೇರ್ಪಡೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ