ಭಾರತ “ಎ’ ತಂಡದಲ್ಲಿ ಕೃಣಾಲ್‌, ಥಂಪಿ


Team Udayavani, Jun 30, 2017, 3:35 AM IST

SPORTS-9.jpg

ಹೊಸದಿಲ್ಲಿ: ಪ್ರಸಕ್ತ ಋತುವಿನ ಐಪಿಎಲ್‌ನಲ್ಲಿ ಮಿಂಚಿದ ಆಲ್‌ರೌಂಡರ್‌ ಕೃಣಾಲ್‌ ಪಾಂಡ್ಯ ಮತ್ತು ಮಧ್ಯಮ ವೇಗಿ ಬಾಸಿಲ್‌ ಥಂಪಿ ಮೊದಲ ಬಾರಿಗೆ ಭಾರತ “ಎ’ ತಂಡದಲ್ಲಿ ಆಡುವ ಅವಕಾಶ ಸಂಪಾದಿಸಿದ್ದಾರೆ. ಮುಂದಿನ ತಿಂಗಳ ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಆರಿಸಲಾದ ತಂಡದಲ್ಲಿ ಇವರಿಬ್ಬರೂ ಸ್ಥಾನ ಸಂಪಾದಿಸಿದ್ದಾರೆ.

ಈ ಪ್ರವಾಸದ ವೇಳೆ ಆಸ್ಟ್ರೇಲಿಯವನ್ನೊಳಗೊಂಡ ಏಕದಿನ ತ್ರಿಕೋನ ಸರಣಿ ಹಾಗೂ ಚತುರ್ದಿನ ಪಂದ್ಯಗಳ ಸರಣಿ ನಡೆಯಲಿದೆ. ಇವೆರಡಕ್ಕೂ ಪ್ರತ್ಯೇಕ ತಂಡಗಳನ್ನು ಆರಿಸಲಾಗಿದ್ದು, ಎರಡಕ್ಕೂ ಕರ್ನಾಟಕದ ಕ್ರಿಕೆಟಿಗರೇ ನಾಯಕರಾಗಿರುವುದು ವಿಶೇಷ. ಇವರೆಂದರೆ ಮನೀಷ್‌ ಪಾಂಡೆ ಮತ್ತು ಕರುಣ್‌ ನಾಯರ್‌. ಸ್ನಾಯು ಸೆಳೆತದಿಂದ ವಿಶ್ರಾಂತಿಯಲ್ಲಿದ್ದ ಪಾಂಡೆ ಈಗ ಚೇತರಿಸಿಕೊಂಡಿದ್ದಾರೆ.

ಈಗಾಗಲೇ ಟೀಮ್‌ ಇಂಡಿಯಾದಲ್ಲಿ ಸ್ಥಾನ ಭದ್ರಪಡಿಸಿಕೊಂಡಿರುವ ಹಾರ್ದಿಕ್‌ ಪಾಂಡ್ಯ ಅವರ ಸಹೋದರನಾಗಿರುವ 26ರ ಹರೆಯದ ಕೃಣಾಲ್‌ ಪಾಂಡ್ಯ ರಣಜಿಯಲ್ಲಿ ಬರೋಡ ತಂಡವನ್ನು ಪ್ರತಿನಿಧಿಸುತ್ತಾರೆ. ಎಡಗೈ ಬ್ಯಾಟಿಂಗ್‌ ಹಾಗೂ ಎಡಗೈ ಆಫ್ ಸ್ಪಿನ್‌ ಬೌಲಿಂಗ್‌ ಮೂಲಕ ಗಮನ ಸೆಳೆದಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಸದಸ್ಯ. 2017ರ ಐಪಿಎಲ್‌ ಋತುವಿನಲ್ಲಿ 243 ರನ್‌ ಜತೆ 10 ವಿಕೆಟ್‌ ಹಾರಿಸಿದ ಸಾಧನೆ ಪಾಂಡ್ಯ ಅವರದು.

ಕೇರಳದ ಕ್ರಿಕೆಟ್‌ ಪ್ರತಿಭೆ
ಕೇರಳದ ಎರ್ನಾಕುಳಂನವರಾದ ಬಾಸಿಲ್‌ ಥಂಪಿ ಮೊದಲ ಸಲ ಐಪಿಎಲ್‌ ಋತುವಿನಲ್ಲೇ 11 ವಿಕೆಟ್‌ ಹಾರಿಸಿ, ಗುಜರಾತ್‌ ಲಯನ್ಸ್‌ ಬೌಲಿಂಗ್‌ ಯಾದಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದರು. ಪರಿಣಾಮಕಾರಿ ಯಾರ್ಕರ್‌ಗಳ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ತಬ್ಬಿಬ್ಬುಗೊಳಿಸಿದ್ದರು.

ಬ್ಯಾಟ್ಸ್‌ಮನ್‌ಗಳಾದ ಹನುಮ ವಿಹಾರಿ, ಸುದೀಪ್‌ ಚಟರ್ಜಿ; ಸೀಮರ್‌ಗಳಾದ ಅಂಕಿತ್‌ ರಜಪೂತ್‌, ಮೊಹಮ್ಮದ್‌ ಸಿರಾಜ್‌ ಕೂಡ ಇದೇ ಮೊದಲ ಸಲ ಭಾರತ “ಎ’ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಆಂಧ್ರದ ವಿಹಾರಿ 2016-17ರ ರಣಜಿ ಸಾಲಿನಲ್ಲಿ ಒಂದು ದ್ವಿಶತಕ ಸಹಿತ 688 ರನ್‌ ಬಾರಿಸಿದರೆ, ಸಿರಾಜ್‌ ಹೈದರಾಬಾದ್‌ ಪರ ಸರ್ವಾಧಿಕ 41 ವಿಕೆಟ್‌ ಹಾರಿಸಿದ್ದರು.

ಜು. 26ರಂದು ತ್ರಿಕೋನ ಸರಣಿ ಮೊದಲ್ಗೊಳ್ಳಲಿದೆ. ಆಗಸ್ಟ್‌ನಲ್ಲಿ 2 ಚತುರ್ದಿನ ಪಂದ್ಯಗಳು ನಡೆಯಲಿವೆ. ಸ್ಥಳ: ಬೆನೋನಿ ಮತ್ತು ಪೊಚೆಫ್ಸೂಮ್‌.

ಭಾರತ ತಂಡಗಳು
ತ್ರಿಕೋನ ಸರಣಿ: ಮನೀಷ್‌ ಪಾಂಡೆ (ನಾಯಕ), ಮನ್‌ದೀಪ್‌ ಸಿಂಗ್‌, ಶ್ರೇಯಸ್‌ ಅಯ್ಯರ್‌, ಸಂಜು ಸ್ಯಾಮ್ಸನ್‌, ದೀಪಕ್‌ ಹೂಡಾ, ಕರುಣ್‌ ನಾಯರ್‌, ಕೃಣಾಲ್‌ ಪಾಂಡ್ಯ, ರಿಷಬ್‌ ಪಂತ್‌ (ವಿ.ಕೀ.), ವಿಜಯ್‌ ಶಂಕರ್‌, ಅಕ್ಷರ್‌ ಪಟೇಲ್‌, ಯಜ್ವೇಂದ್ರ ಚಾಹಲ್‌, ಜಯಂತ್‌ ಯಾದವ್‌, ಬಾಸಿಲ್‌ ಥಂಪಿ, ಮೊಹಮ್ಮದ್‌ ಸಿರಾಜ್‌, ಶಾದೂìಲ್‌ ಠಾಕೂರ್‌, ಸಿದ್ಧಾರ್ಥ ಕೌಲ್‌.

ಚತುರ್ದಿನ ಪಂದ್ಯ: ಕರುಣ್‌ ನಾಯರ್‌ (ನಾಯಕ), ಪ್ರಿಯಾಂಕ್‌ ಪಾಂಚಾಲ್‌, ಅಭಿನವ್‌ ಮುಕುಂದ್‌, ಶ್ರೇಯಸ್‌ ಅಯ್ಯರ್‌, ಅಂಕಿತ್‌ ಬವೆ°, ಸುದೀಪ್‌ ಚಟರ್ಜಿ, ಇಶಾನ್‌ ಕಿಶನ್‌ (ವಿ.ಕೀ.), ಹನುಮ ವಿಹಾರಿ, ಜಯಂತ್‌ ಯಾದವ್‌, ಶಾಬಾಜ್‌ ನದೀಂ, ನವದೀಪ್‌ ಸೈನಿ, ಮೊಹಮ್ಮದ್‌ ಸಿರಾಜ್‌, ಶಾದೂìಲ್‌ ಠಾಕೂರ್‌, ಅನಿಕೇತ್‌ ಚೌಧರಿ, ಅಂಕಿತ್‌ ರಜಪೂತ್‌.

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

diego maradona

Diego Maradona ಹೃದಯಾಘಾತಕ್ಕೆ ಕೊಕೇನ್‌ ಸೇವನೆ ಕಾರಣ?

INDWvsBANW: ಭಾರತಕ್ಕೆ 2-0 ಮುನ್ನಡೆ

INDWvsBANW: ಭಾರತಕ್ಕೆ 2-0 ಮುನ್ನಡೆ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.